Don't Miss!
- Lifestyle ಹೋಳಿ ದಿನ ಸ್ಕೂಟಿಯಲ್ಲಿ ಟೈಟಾನಿಕ್ ಪೋಸ್ ನೀಡಿ ದೊಪ್ಪೆಂದು ಬಿದ್ದ ಹುಡುಗಿಗೆ ಬಿತ್ತು ದುಬಾರಿ ಫೈನ್
- News ಮಳೆ ಬರದೇ ಇದ್ದರೆ ಮುಗೀತು ಕಥೆ!
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಳೆದ ವರ್ಷ ಜನವರಿ 25 ರಂದು ಸ್ಯಾಂಡಲ್ವುಡ್ನಲ್ಲಿ ಏನಾಗಿತ್ತು?
ಜನವರಿ 25, 2019ರಲ್ಲಿ ಕನ್ನಡ ಇಂಡಸ್ಟ್ರಿಯಲ್ಲಿ ಏನಾಗಿತ್ತು? ಒಂದು ವರ್ಷದ ಹಿಂದಿನ ಫ್ಲಾಶ್ ಬ್ಯಾಕ್ ಕುರಿತು ಒಂದು ನೆನಪು ಮೆಲುಕು ಹಾಕೋಣ. ಕಳೆದ ವರ್ಷ ಈ ದಿನಕ್ಕೆ ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದ ನಟಸಾರ್ವಭೌಮ ಟ್ರೈಲರ್ ಬಿಡುಗಡೆಯಾಗಿತ್ತು.
ಪವನ್ ಒಡೆಯರ್ ನಿರ್ದೇಶನ ಮಾಡಿದ್ದ ನಟಸಾರ್ವಭೌಮ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿ, ಮೊದಲ ದಿನವೇ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಟಾಪ್ ಗೆ ಹೋಗಿತ್ತು. 15 ನಿಮಿಷದಲ್ಲಿ 1 ಲಕ್ಷ ವೀವ್ಸ್ ಕಂಡಿತ್ತು. 110 ನಿಮಿಷದಲ್ಲಿ 4 ಲಕ್ಷ ವೀಕ್ಷಣೆ ಕಂಡಿತ್ತು.
ಬಂದ ನೋಡೋ 'ನಟಸಾರ್ವಭೌಮ', ದಾಖಲೆಗಳೆಲ್ಲಾ ನೆಲಸಮ
ಅದೇ ದಿನ ನಿಖಿಲ್ ಕುಮಾರ್ ಅಭಿನಯಿಸಿದ್ದ ಸೀತಾರಾಮ ಕಲ್ಯಾಣ ಚಿತ್ರವೂ ಬಿಡುಗಡೆಯಾಗಿತ್ತು. ಹರ್ಷ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿದ್ದರು.
ಸೀತಾರಾಮ ಕಲ್ಯಾಣ ಚಿತ್ರದ ಜೊತೆಗೆ ಮಿಸ್ಡ್ ಕಾಲ್ ಮತ್ತು ಸಪ್ಲಿಮೆಂಟರಿ ಎಂಬ ಚಿತ್ರಗಳು ಕೂಡ ತೆರೆಗೆ ಬಂದಿತ್ತು.
Seetharama Kalyana Review : 'ಸೀತಾರಾಮ ಕಲ್ಯಾಣ', ಇದು ಎಲ್ಲದರ ಮಿಶ್ರಣ
ಇನ್ನು ಮದುವೆ ಕುರಿತು ರಚಿತಾ ರಾಮ್ ಹೇಳಿದ್ದ ಮಾತು ಭಾರಿ ಚರ್ಚೆಗೆ ಕಾರಣವಾಗಿತ್ತು. ಸೀತಾರಾಮ ಕಲ್ಯಾಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರಚ್ಚು, 'ನಾನು ಗೌಡರ ಮಗನನ್ನೇ ಮದುವೆ ಆಗ್ತೀನಿ' ಎಂದಿದ್ದರು. ಅಂದು ರಚಿತಾ ರಾಮ್ ಹೇಳಿದ್ದ ಆ ಮಾತು ಈಗಲೂ ಸದ್ದು ಮಾಡ್ತಿದೆ.