Don't Miss!
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶ್ರೀಗಳಿಗೆ 'ಭಾರತ ರತ್ನ' ಕೊಡಿಸುವ ಯೋಗ್ಯತೆ ಯಾರಿಗೂ ಇಲ್ಲ: ಲೀಲಾವತಿ
Recommended Video
'ನಡೆದಾಡುವ ದೇವರು' ಡಾ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ನೀಡಬೇಕು ಎಂಬುದು ಇಡೀ ಕನ್ನಡ ನಾಡಿನ ಜನರ ಆಸೆ ಮತ್ತು ಬೇಡಿಕೆಯಾಗಿದೆ. ಬಡವರು, ಮಕ್ಕಳ ಕಲ್ಯಾಣಕ್ಕಾಗಿ ದಶಕಗಳ ಕಾಲ ಶ್ರೀಗಳು ಮಾಡಿದ ಕೆಲಸಗಳು, ಅವರು ನೀಡಿದ ಕೊಡುಗೆಯನ್ನ ಕೇಂದ್ರ ಸರ್ಕಾರಕ್ಕೆ ಗೌರವಿಸಿ ಖುದ್ದು ಘೋಷಣೆ ಮಾಡಬೇಕಿತ್ತು.
ಬಟ್, ಇದುವರೆಗೂ ಆ ರೀತಿಯಾದ ಯಾವುದೇ ಬೆಳವಣಿಗೆ ಕಂಡು ಬಂದಿಲ್ಲ. ಸಹಜವಾಗಿ ಇದು ಸಾರ್ವಜನಿಕರಿಗೆ ಬೇಸರಕ್ಕೆ ಕಾರಣವಾಗಿದೆ.
ಶ್ರೀಗಳ ಅಂತಿಮ ದರ್ಶನ ಪಡೆದ ಪುನೀತ್: ಯಶ್, ಸುದೀಪ್, ಉಪ್ಪಿ ಸಂತಾಪ
ಈ ಬಗ್ಗೆ ಮಾತನಾಡಿದ ಹಿರಿಯ ನಟಿ ಲೀಲಾವತಿ ಅವರು ''ಶ್ರೀಗಳು ಏನೂ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ, ಅವರೇ ಒಂದು ರತ್ನ, ಶ್ರೀಗಳಿಗೆ 'ಭಾರತ ರತ್ನ' ಕೊಡಿಸುವ ಯೋಗ್ಯತೆ ಯಾರಿಗೂ ಇಲ್ಲ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಲೀಲಾವತಿ ಏನಂದ್ರು ಎಂದು ಪೂರ್ತಿ ತಿಳಿಯಲು ಮುಂದೆ ಓದಿ.....
ಅವರಿಗೇಕೆ ಬೇಕು ಭಾರತ ರತ್ನ?
''ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಯಾಕೆ ಕೊಡಬೇಕು ಭಾರತ ರತ್ನ. ಅವರು ಜಗತ್ತಿನ ಪಾಲಿಗೆ ಒಂದು ಅಮೂಲ್ಯವಾದ ರತ್ನ. 'ಭಾರತ ರತ್ನ' ಕೊಡೋದು ದೊಡ್ಡ ವಿಷ್ಯನಾ. ಭಾರತ ರತ್ನಕ್ಕಿಂತ ದೊಡ್ಡ ರತ್ನ ಇದ್ರೆ ಕೊಡೋಕು ಸಾಧ್ಯ'' - ಲೀಲಾವತಿ
ಸಿದ್ದಗಂಗಾ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ ಚಿತ್ರರಂಗದ ಗಣ್ಯರು
ಮತ್ತೆ ಹುಟ್ಟಿ ಬಂದಿರ್ತಾರೆ
''ಕೋಟ್ಯಾಂತರ ಮಕ್ಕಳಿಗೆ ವಿದ್ಯೆ ನೀಡಿದವರು. ಅನೇಕ ಬಡವರ ಹೊಟ್ಟೆಗೆ ಊಟ ಹಾಕಿದವರು. ಇಂತಹ ವ್ಯಕ್ತಿಗಳು ಮತ್ತೆ ಹುಟ್ಟಬೇಕು. ಬಹುಶಃ ಈಗಾಗಲೇ ಮತ್ತೆ ಎಲ್ಲಿಯಾದರೂ ಹುಟ್ಟಿರ್ತಾರೆ. ಅವರೇ ದೇವರು. ಭಾರತ ರತ್ನಕ್ಕಿಂತ ದೊಡ್ಡ ರತ್ನ ಅವರು'' ಎಂದು ಲೀಲಾವತಿ ನುಡಿದಿದ್ದಾರೆ.
ಶ್ರೀಗಳ ಅಂತಿಮ ದರ್ಶನ ಪಡೆಯಲು ಶಿವಣ್ಣನಿಗೆ ಸಾಧ್ಯ ಆಗಲಿಲ್ಲ
ಬೆಲೆ ಕಟ್ಟಲಾಗದ ರತ್ನ
''ಭಾರತ ರತ್ನಕ್ಕಿಂತ ಶ್ರೇಷ್ಠ ರತ್ನ ಶ್ರೀಗಳು. ಅವರೊಂದು ಅಮೂಲ್ಯವಾದ ರತ್ನ. ಅವರಿಗೆ ಬೆಲೆ ಕಟ್ಟಲಾಗದು. ಬೆಲೆ ಕಟ್ಟೋಕೆ ಆಗೋರಿಗೆ ಮಾತ್ರ ನಾಮಕರಣ ಮಾಡೋಕೆ ಸಾಧ್ಯ. ಇವರಿಗೆ ಯಾರೂ ನಾಮಕರಣ ಮಾಡಲು ಸಾಧ್ಯವಿಲ್ಲ'' ಎಂದು ವಿನೋದ್ ರಾಜ್ ಅಭಿಪ್ರಾಯ ಪಟ್ಟಿದ್ದಾರೆ.
'ಸಿದ್ದಗಂಗಾ ಶ್ರೀಗಳಿಂದ ಈ ವಸ್ತುವನ್ನು ಕಿತ್ತುಕೊಂಡು ಬಂದಿದ್ದೆ' - ಜಗ್ಗೇಶ್
ದೇವರಿಗೆ ಸನ್ಮಾನ ಮಾಡುವ ಯೋಗ್ಯತೆ ಮನುಷ್ಯನಿಗಿಲ್ಲ
''ನಡೆದಾಡುವ ದೇವರು ಅವರು ಅಂದ್ಮೇಲೆ ದೇವರಿಗೆ ಸನ್ಮಾನ ಮಾಡುವ ಯೋಗ್ಯತೆ ಮನುಷ್ಯನಿಗಿಲ್ಲ. ಆ ದೇವರೇ ಬರಬೇಕು ಅಥವಾ ಅವರೇ ದೇವರು. ಅದಕ್ಕೆ ಅವರು ಭಾರತ ರತ್ನ ತೆಗೆದುಕೊಳ್ಳದೇ ಹೋದರು'' ಎಂದು ವಿನೋದ್ ರಾಜ್ ಹೇಳಿದ್ದಾರೆ.
ಲೀಲಾವತಿ ಮತ್ತು ವಿನೋದ್ ರಾಜ್ ಮಾತನಾಡಿರುವ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ