Don't Miss!
- News Rain: ಬರದಿಂದ ತತ್ತರಿಸಿದ ಮಲೆನಾಡು: ಕೊಪ್ಪ ಮೇರುತಿ ಶಿಖರದಲ್ಲಿ ವರುಣನಿಗೆ ಹೋಮ-ಹವನ
- Technology Tecno: ಬಹುನಿರೀಕ್ಷಿತ ಟೆಕ್ನೋ ಪೋವಾ 6 ಪ್ರೊ ಲಾಂಚ್! 12GB RAM.. 6000mAh ಬ್ಯಾಟರಿ.. ಬೆಲೆ ಎಷ್ಟು?
- Sports CSK vs RCB: ದಾಖಲೆಯ ಪುಟ ಸೇರಿದ ಉದ್ಘಾಟನಾ ಪಂದ್ಯ: 16.8 ಕೋಟಿ ಜನರಿಂದ ವೀಕ್ಷಣೆ
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರಾಜ್ ಲೀಲಾ ವಿನೋದ' ಪುಸ್ತಕದಲ್ಲಿ ಇರುವ ಸ್ಫೋಟಕ ಮಾಹಿತಿ ಇದು.!
ಪತ್ರಕರ್ತ ರವಿ ಬೆಳಗೆರೆ ಬರೆದಿರುವ ವಿವಾದಾತ್ಮಕ ಪುಸ್ತಕ 'ರಾಜ್ ಲೀಲಾ ವಿನೋದ' ಅಧಿಕೃತವಾಗಿ ನಿನ್ನೆ (ಡಿಸೆಂಬರ್ 25) ಬಿಡುಗಡೆ ಆಗದೇ ಇದ್ದರೂ, ಇಂದು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಮುಖಪುಟದಲ್ಲಿ ಡಾ.ರಾಜ್ ಕುಮಾರ್, ಲೀಲಾವತಿ ಮತ್ತು ಬಾಲಕ ವಿನೋದ್ ರಾಜ್ ಫೋಟೋ ಹೊತ್ತಿರುವ 'ರಾಜ್ ಲೀಲಾ ವಿನೋದ' ಪುಸ್ತಕದಲ್ಲಿ ಇರುವ ಸ್ಫೋಟಕ ಮಾಹಿತಿಯಾದರೂ ಏನು ಎಂಬ ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ.
'ಸಂತ ತುಕಾರಾಂ' ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಕೊಲ್ಹಾಪುರದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆದ ಘಟನೆಯೊಂದನ್ನ ಪತ್ರಕರ್ತ ರವಿ ಬೆಳಗೆರೆ ಬಳಿ ಹಿರಿಯ ನಟಿ ಲೀಲಾವತಿ ನೆನಪಿಸಿಕೊಂಡಿರುವುದು ಹೀಗೆ....
ಅಫೇರ್ ವಿಷಯ 'ಅವರ' ಮನೆಯಲ್ಲಿ ಗೊತ್ತಾಯ್ತು!
'ಸಂತ ತುಕಾರಾಂ' ಸಿನಿಮಾದ ಶೂಟಿಂಗ್ ಟೈಮ್ ನಲ್ಲಿ ನಮ್ಮ ಅಫೇರ್ ವಿಷಯ ಅವರ ಮನೆಯಲ್ಲಿ ಗೊತ್ತಾಯ್ತು. ಅದರಿಂದಾಗಿ ಇರುಸು ಮುರುಸುಗಳಾದವು. ಅವರಿಗಿನ್ನೂ ಮಕ್ಕಳಾಗಿರಲಿಲ್ಲ. ಅದೊಂದು ದೊಡ್ಡ ಇನ್ಸಿಡೆಂಟ್ ರವಿಯವರೇ.[ನನ್ನ ಸ್ಥಿತೀಲಿ ಬೇರೆ ಹೆಂಗಸಿದ್ದಿದ್ದರೆ ಎಷ್ಟು ರಾದ್ಧಾಂತ ಆಗ್ತಿತ್ತು?]
ರೈಲಿನಲ್ಲಿ ಇಬ್ಬರ ಪ್ರಯಾಣ
ಅದು 'ಸಂತ ತುಕಾರಾಂ' ಶೂಟಿಂಗ್ ಸಮಯ. ಅದಕ್ಕೆ ಹೋಗಿದ್ದು ನಾವಿಬ್ರೇ. ರೈಲಿನಲ್ಲಿ ಪ್ರಯಾಣ. ನಾನು ತಿಂಡಿ-ಗಿಂಡಿ ಏನೂ ತಗೊಂಡು ಹೋಗಿರ್ಲಿಲ್ಲ. ಅವರ ಮನೇಲಿ ಬೇಕಾಧಂಗೆ ತಿಂಡಿ ಪ್ಯಾಕ್ ಮಾಡಿ ಕಳ್ಸಿದ್ರು. ರೈಲಿನಲ್ಲಿ ತಿಂದ್ವಿ.[ಲೀಲಾವತಿ ಆತ್ಮಕಥನ 'ರಾಜ್ ಲೀಲಾ ವಿನೋದ'ದಲ್ಲಿ ಅಂಥಾದ್ದೇನಿದೆ?]
ಕಥೆ ಶುರುವಾಗಿದ್ದು ಇಲ್ಲಿಂದ...
''ನೋಡಿದ್ಯಾ, ಎಷ್ಟು ರುಚಿಯಾಗಿ ಮಾಡಿ ಕಳ್ಸಿದಾರೆ'' ಅಂದ್ರು. ಅದು ನಿಜಕ್ಕೂ ರುಚಿಯಾಗಿತ್ತು. ಚೆನ್ನಾಗಿ ತಿಂದ್ವಿ. ಆ ಹೊತ್ತಿಗೆ ನಾವು ಕೊಲ್ಹಾಪುರ ಸೇರಿಕೊಂಡ್ವಿ. ಅಲ್ಲಿ ಶುರುವಾಯ್ತು ನಮ್ಮ ಕಥೆ.
ಒಂದೇ ರೂಮ್ ನಲ್ಲಿ ವಾಸ
ನನಗೂ-ಅವರಿಗೂ ಸ್ನೇಹವಿದೆ ಅಂತ ಅವರಿಗೆ ಗೊತ್ತು. ಹಾಗಾಗಿ ಇಬ್ರಿಗೂ ಸೇರಿಸಿ ಒಂದೇ ರೂಂ ಕೊಟ್ರು. ಮಹಾರಾಜರ ಪ್ಯಾಲೇಸ್ ಅದು.
ಲಕ್ಷ್ಮಿ ಕಾಸು
''ನೋಡಿದೇನೇ...ಮಹಾರಾಜರು ಬಾಳಿ ಬದುಕಿದ ಜಾಗ. ಅದು ನಮಗೆ ಸಿಕ್ಕಿದೆ'' ಅಂದ್ರು. ಆಮೇಲೆ ಅವರೇನೇ ಹೊರಗಡೆ ಹೋಗಿ ಒಂದು ಲಕ್ಷ್ಮಿ ಕಾಸು ತಗೊಂಡು. ಅದನ್ನ ಎಲ್ಲಿ ತಗೊಂಡ್ರು ಅಂತ ಗೊತ್ತಿಲ್ಲ.
ಮದುವೆಯ ಸಂಕೇತ ಅಲ್ವಾ?
ಅದು ಲಕ್ಷ್ಮಿಯದು ಒಂದು ಬಿಳ್ಳೆ. ಲಕ್ಷ್ಮಿ ಚಿತ್ರ ಇದೆ. ಅದನ್ನ ಒಂದು ದಾರಕ್ಕೆ ಪೋಣಿಸಿ, ಕೊಲ್ಹಾಪುರದ ಲಕ್ಷ್ಮಿ ದೇವರ ಮುಂದೆ ನನ್ನ ಕೊರಳಿಗೆ ಕಟ್ಟಿದರು. ಅದು ಮದುವೆಯ ಸಂಕೇತವೇ ಅಲ್ವಾ?
ಮುದ್ದು ಮಾಡೋರು
ಅವರಿಗೆ ಮೀನು ಅಂದ್ರೆ ತುಂಬ ಇಷ್ಟ: ತರಿಸೋರು. ನಾನು ಮೀನು ಹೆಚ್ಚೋದನ್ನೇ ನೋಡ್ತಾ ನಿಲ್ಲೋರು. ''ಜುಟ್ಟು ಎಗರಿಸಿಕೊಂಡು ಚೆನ್ನಾಗಿ ಹೆಚ್ತೀಯ ಕಣೆ..'' ಅಂತ ಅಲ್ಲೇ ಮುದ್ದು ಮಾಡೋರು. ಅದು ನಮ್ಮ ಪಾಲಿಗೆ ಒಂಥರಾ ಮಧುಚಂದ್ರ ಅನ್ನೋ ಹಾಗಿತ್ತು. Enjoy ಮಾಡಿದ್ವಿ.
ಕಲ್ಮಶ ಬೆರಕೆ ಆಯ್ತು
ಅವರ ಪ್ರೀತಿಯಲ್ಲಿ ಕಲ್ಮಶ ಇರಲಿಲ್ಲ. ಕೆಲವು ಸಲ ಕಲ್ಪನೇಲಿ ಕವಿಗಳ ಥರಾ ಮಾತಾಡ್ತಿದ್ರು. ಯಾರೂ ಕೂಡ ಹುಟ್ಟೋವಾಗ್ಲೇ ಕಲ್ಮಶ ಇಟ್ಕೊಂಡು ಹುಟ್ಟೋದಿಲ್ಲ. ಬೆಳೀತಾ ಬೆಳೀತಾ ಅದು ಸೇರ್ಕೊಳ್ಳುತ್ತೆ. ಹಾಗೆ ಬೆರಕೆ ಆಯ್ತು ಅವರಲ್ಲಿ ಕಲ್ಮಶ.
ಬದುಕಿನ ಅತ್ಯಂತ ಸಂತೋಷದ ಕಾಲ
'ಸಂತ ತುಕಾರಾಂ' ಶೂಟಿಂಗ್ ಟೈಮ್ ಅನ್ನೋದು ನನ್ನ ಬದುಕಿನ ಅತ್ಯಂತ ಸಂತೋಷದ ಕಾಲ. ಇಬ್ರೂ ಒಟ್ಟಿಗೆ ಇದ್ವಿ. ಅದೊಂಥರಾ ಸಂತೋಷದ ಸಂಸಾರ. ಒಂದು ಪತ್ರದಲ್ಲಿ ದೊಡ್ಡೋರು ಅದನ್ನ ಬರ್ದಿದಾರೆ. ''ಕೊಲ್ಹಾಪುರದಲ್ಲಿ ನೀನು ಮಾಡಿದ ಮೀನಿನ ಘಮ ಇನ್ನೂ ಹಾಗೇ ಇದೆ. ಮೊನ್ನೆ ಕೊಲ್ಹಾಪುರಕ್ಕೆ ಮತ್ತೆ ಹೋದೆ. ಅದೇ ಜಾಗಕ್ಕೆ ಹೋದೆ. ತುಂಬ ಸಂಕಟ ಆಯ್ತು ಕಣೇ'' ಅಂತ ಬರೆದಿದ್ದಾರೆ.
('ರಾಜ್ ಲೀಲಾ ವಿನೋದ' ಪುಸ್ತಕದಲ್ಲಿ ಇರುವ ಯಥಾವತ್ ಸಾಲುಗಳಿವು)