Don't Miss!
- News ರಾತ್ರೋ ರಾತ್ರಿ ಪತ್ರಿಕಾಗೋಷ್ಠಿ ನಡೆಸಿ ವಿ.ಶ್ರೀನಿವಾಸ ಪ್ರಸಾದ್ ಅಳಿಯ ಏನು ಹೇಳಿದ್ರು ಗೊತ್ತಾ?
- Sports IPL 2024: ಮುಂಬೈ ಇಂಡಿಯನ್ಸ್ ತಂಡ ಸೇರಿದ ಮಾಜಿ ನಾಯಕ: ಹಾಲಿ ನಾಯಕನ ಆತಂಕ ದೂರ
- Lifestyle ಫ್ಲ್ಯಾಟ್ನಲ್ಲಿ ವಾಸಿಸಲು ಹೋಗುವಾಗ ಸಮೃದ್ಧಿ, ಆರೋಗ್ಯಕ್ಕಾಗಿ ವಾಸ್ತು ಹೀಗಿದೆಯೇ ಎಂದು ನೋಡಬೇಕು
- Technology ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಇನ್ಫಿನಿಕ್ಸ್ ನೋಟ್ 40 ಪ್ರೊ ಪ್ಲಸ್ 5G ಫೋನ್: ಫೀಚರ್ಸ್ ಹೇಗಿದೆ?
- Automobiles ಡಿ ಬಾಸ್ ಪತ್ನಿ ಖರೀದಿಸಿದ್ದು ಸಾಮಾನ್ಯ ಕಾರಲ್ಲ: ಬಂಗಲೆಯಂತಹ ಇಂಟೀರಿಯರ್!
- Finance ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ, ನಿಮ್ಮ ನಗರದಲ್ಲಿ 24 ಕ್ಯಾರೆಟ್ ಚಿನ್ನದ ದರ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕರುನಾಡ ಕಾವೇರಿಗಾಗಿ ಧ್ವನಿ ಎತ್ತಿದ ಹಾಲಿವುಡ್ ನಟ
ಕಾವೇರಿ ಕೂಗು (cauvery calling) ಅಭಿಮಾನಕ್ಕೆ ಭಾರತ ಚಿತ್ರರಂಗದ ಅನೇಕ ಕಲಾವಿದರು ತಮ್ಮ ಬೆಂಬಲ ನೀಡಿದ್ದಾರೆ. ಇದೀಗ ಹಾಲಿವುಡ್ ನಟ ಕೂಡ ಈ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ.
'ಟೈಟಾನಿಕ್' ಸಿನಿಮಾದ ನಟ ಲಿಯೊನಾರ್ಡೊ ಡಿಕಾಪ್ರಿಯೊ ಕಾವೇರಿ ಬಗ್ಗೆ ಧ್ವನಿ ಎತ್ತಿದ್ದಾರೆ. ಈ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ನಾಲ್ಕು ಸಾಲುಗಳನ್ನು ಬರೆಯುವ ಮೂಲಕ ಈ ಅಭಿಯಾನದ ಪರ ನಿಂತಿದ್ದಾರೆ.
'ಕಾವೇರಿ ಕೂಗಿಗೆ' ಧ್ವನಿ ಗೂಡಿಸಿದ ಕಂಗನಾ, ತಮನ್ನಾ, ಕಾಜಲ್
''ಭಾರತದ ನದಿಗಳು ಅಪಾಯಕಾರಿ ಸ್ಥಿತಿಯಲ್ಲಿ ಇವೆ. ಸಣ್ಣ ಸಣ್ಣ ನದಿಗಳೆಲ್ಲ ಬತ್ತುತ್ತಿವೆ. ಸದ್ಗುರು ಮತ್ತು ಈಶ ಫೌಂಡೆಷನ್ ಕಾವೇರಿಗಾಗಿ ನಡೆಸುತ್ತಿರುವ ಹೋರಾಟದಲ್ಲಿ ಅವರ ಪರವಾಗಿ ನಾವು ಕೈ ಜೋಡಿಸೋಣ.'' ಎಂದು ಲಿಯೊನಾರ್ಡೊ ಡಿಕಾಪ್ರಿಯೊ ಬರೆದುಕೊಂಡಿದ್ದಾರೆ.
ಈಗಾಗಲೇ ಬಾಲಿವುಡ್ ನಟಿ ಕಂಗಾನ ರಣಾವತ್, ತಮನ್ನಾ ಭಾಟಿಯಾ, ಕಾಜಲ್, ಕನ್ನಡ ನಟರಾದ ಪುನೀತ್ ರಾಜ್ ಕುಮಾರ್, ಉಪೇಂದ್ರ, ರಕ್ಷಿತ್ ಶೆಟ್ಟಿ, ದಿಗಂತ್, ನಟಿ ಸುಹಾಸಿನಿ, ಪ್ರಣಿತಾ, ರಾಗಿಣಿ ದ್ವಿವೇದಿ ಹೀಗೆ ಸಾಕಷ್ಟು ಸ್ಟಾರ್ ಗಳು ಕಾವೇರಿಗಾಗಿ ಧ್ವನಿ ಎತ್ತಿದ್ದಾರೆ.
ನೂರು ವರ್ಷದ ಹಿಂದೆ ಬೀಳುತ್ತಿದ್ದ ಮಳೆಯ ಪ್ರಮಾಣ ಈಗೇನೂ ಕಡಿಮೆ ಆಗಿಲ್ಲ. ಆದರೆ, ಮಳೆಯಿಂದ ಬಿದ್ದ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಭೂಮಿಯಲ್ಲಿ ಇಲ್ಲ. ಹೀಗಾಗಿ ಪಶ್ಚಿಮಫಟ್ಟದಲ್ಲಿ ಭೂಕುಸಿತ ಆಗುತ್ತಿದೆ. ಎಂದು ಸದ್ಗುರು ಹೇಳಿದ್ದಾರೆ. ಕಾವೇರಿ ಉಳಿವಿಗೆ ಈ ಮಹಾ ಅಭಿಯಾನ ಶುರು ಮಾಡಲಾಗಿದೆ.