twitter
    For Quick Alerts
    ALLOW NOTIFICATIONS  
    For Daily Alerts

    ಕರುನಾಡ ಕಾವೇರಿಗಾಗಿ ಧ್ವನಿ ಎತ್ತಿದ ಹಾಲಿವುಡ್ ನಟ

    |

    ಕಾವೇರಿ ಕೂಗು (cauvery calling) ಅಭಿಮಾನಕ್ಕೆ ಭಾರತ ಚಿತ್ರರಂಗದ ಅನೇಕ ಕಲಾವಿದರು ತಮ್ಮ ಬೆಂಬಲ ನೀಡಿದ್ದಾರೆ. ಇದೀಗ ಹಾಲಿವುಡ್ ನಟ ಕೂಡ ಈ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ.

    'ಟೈಟಾನಿಕ್' ಸಿನಿಮಾದ ನಟ ಲಿಯೊನಾರ್ಡೊ ಡಿಕಾಪ್ರಿಯೊ ಕಾವೇರಿ ಬಗ್ಗೆ ಧ್ವನಿ ಎತ್ತಿದ್ದಾರೆ. ಈ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ನಾಲ್ಕು ಸಾಲುಗಳನ್ನು ಬರೆಯುವ ಮೂಲಕ ಈ ಅಭಿಯಾನದ ಪರ ನಿಂತಿದ್ದಾರೆ.

    'ಕಾವೇರಿ ಕೂಗಿಗೆ' ಧ್ವನಿ ಗೂಡಿಸಿದ ಕಂಗನಾ, ತಮನ್ನಾ, ಕಾಜಲ್'ಕಾವೇರಿ ಕೂಗಿಗೆ' ಧ್ವನಿ ಗೂಡಿಸಿದ ಕಂಗನಾ, ತಮನ್ನಾ, ಕಾಜಲ್

    ''ಭಾರತದ ನದಿಗಳು ಅಪಾಯಕಾರಿ ಸ್ಥಿತಿಯಲ್ಲಿ ಇವೆ. ಸಣ್ಣ ಸಣ್ಣ ನದಿಗಳೆಲ್ಲ ಬತ್ತುತ್ತಿವೆ. ಸದ್ಗುರು ಮತ್ತು ಈಶ ಫೌಂಡೆಷನ್ ಕಾವೇರಿಗಾಗಿ ನಡೆಸುತ್ತಿರುವ ಹೋರಾಟದಲ್ಲಿ ಅವರ ಪರವಾಗಿ ನಾವು ಕೈ ಜೋಡಿಸೋಣ.'' ಎಂದು ಲಿಯೊನಾರ್ಡೊ ಡಿಕಾಪ್ರಿಯೊ ಬರೆದುಕೊಂಡಿದ್ದಾರೆ.

     LeonardoDi Caprio Supports Cauvery Calling Campaign

    ಈಗಾಗಲೇ ಬಾಲಿವುಡ್ ನಟಿ ಕಂಗಾನ ರಣಾವತ್, ತಮನ್ನಾ ಭಾಟಿಯಾ, ಕಾಜಲ್, ಕನ್ನಡ ನಟರಾದ ಪುನೀತ್ ರಾಜ್ ಕುಮಾರ್, ಉಪೇಂದ್ರ, ರಕ್ಷಿತ್ ಶೆಟ್ಟಿ, ದಿಗಂತ್, ನಟಿ ಸುಹಾಸಿನಿ, ಪ್ರಣಿತಾ, ರಾಗಿಣಿ ದ್ವಿವೇದಿ ಹೀಗೆ ಸಾಕಷ್ಟು ಸ್ಟಾರ್ ಗಳು ಕಾವೇರಿಗಾಗಿ ಧ್ವನಿ ಎತ್ತಿದ್ದಾರೆ.

     LeonardoDi Caprio Supports Cauvery Calling Campaign

    ನೂರು ವರ್ಷದ ಹಿಂದೆ ಬೀಳುತ್ತಿದ್ದ ಮಳೆಯ ಪ್ರಮಾಣ ಈಗೇನೂ ಕಡಿಮೆ ಆಗಿಲ್ಲ. ಆದರೆ, ಮಳೆಯಿಂದ ಬಿದ್ದ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಭೂಮಿಯಲ್ಲಿ ಇಲ್ಲ. ಹೀಗಾಗಿ ಪಶ್ಚಿಮಫಟ್ಟದಲ್ಲಿ ಭೂಕುಸಿತ ಆಗುತ್ತಿದೆ. ಎಂದು ಸದ್ಗುರು ಹೇಳಿದ್ದಾರೆ. ಕಾವೇರಿ ಉಳಿವಿಗೆ ಈ ಮಹಾ ಅಭಿಯಾನ ಶುರು ಮಾಡಲಾಗಿದೆ.

    English summary
    Hollywood actor LeonardoDiCaprio supports cauvery calling campaign.
    Tuesday, September 24, 2019, 14:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X