Don't Miss!
- Sports GT vs DC: ಡೆಲ್ಲಿ ವಿರುದ್ಧದ ಹೀನಾಯ ಸೋಲಿಗೆ ಇವರೇ ಕಾರಣ; ಶುಭ್ಮನ್ ಗಿಲ್ ಗರಂ
- News ಭಾರತೀಯ ರೈಲ್ವೆಗೆ 171 ವರ್ಷ: ಮೊದಲ ರೈಲು ಸಂಚಾರ ಎಲ್ಲಿಂದ ಎಲ್ಲಿಗೆ? ಪೋಸ್ಟ್ ಹಂಚಿಕೊಂಡ ರೈಲ್ವೆ
- Technology ಅಗ್ಗದ ದರದಲ್ಲಿ 5G ಫೋನ್ ಖರೀದಿಸಬೇಕೆ?..ಈ ಆಫರ್ ಮಿಸ್ ಮಾಡ್ಕೋಬೇಡಿ!
- Automobiles Kia: ಬಹುನಿರೀಕ್ಷಿತ ಕಿಯಾ ಕ್ಲಾವಿಸ್ ಮೈಕ್ರೋ ಎಸ್ಯುವಿ ಶೀಘ್ರದಲ್ಲೇ ಬಿಡಗಡೆ
- Finance Bullet train: ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್ಗೆ ಶೀಘ್ರ ಚಾಲನೆ, ಗಂಟೆಗೆ 250 ವೇಗ
- Lifestyle ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಾಂಧಿನಗರದ ಈ ಮೂರು ನಿರ್ದೇಶಕರ ಖುಷಿಗೆ ಒಂದೇ ಕಾರಣ.!
Recommended Video
ಒಂದು ಸಿನಿಮಾಗೆ ಕಥೆ ಮತ್ತು ನಿರ್ದೇಶಕ ಬಹಳ ಮುಖ್ಯ. ಸಿನಿಮಾ ಹುಟ್ಟುವುದೇ ಒಬ್ಬ ನಿರ್ದೇಶಕನಿಂದ. ಅದೇ ರೀತಿ ಕನ್ನಡದಲ್ಲಿಯೂ ಅನೇಕ ಪ್ರತಿಭಾವಂತ ನಿರ್ದೇಶಕರು ಇದ್ದಾರೆ. ಅದರಲ್ಲಿ ಮೂರು ನಿರ್ದೇಶಕರು ಈಗ ದಶಕದ ಸಂಭ್ರಮದಲ್ಲಿ ಇದ್ದಾರೆ.
ಸ್ಯಾಂಡಲ್ ವುಡ್ ನ ಸ್ಟಾರ್ ಡೈರೆಕ್ಟರ್ ಗಳಾದ ದುನಿಯಾ ಸೂರಿ, ಶಶಾಂಕ್ ಮತ್ತು ಆರ್.ಚಂದ್ರು ಈಗ ಹತ್ತು ವರ್ಷ ಪೂರೈಸಿರುವ ಖುಷಿಯಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ಈ ಮೂರು ನಿರ್ದೇಶಕರ ಸಿನಿಮಾಗಳ ಸಣ್ಣ ವಿವರ ಇಲ್ಲಿದೆ ಓದಿ...
ದುನಿಯಾ ಸೂರಿ
ನಿರ್ದೇಶಕ ಸೂರಿ, ದುನಿಯಾ ಸೂರಿ ಅಂತಲೇ ಗಾಂಧಿನಗರದಲ್ಲಿ ಫೇಮಸ್. ಸಿನಿಮಾದಿಂದ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರುವ ಸೂರಿ ಈಗ 10 ವರ್ಷವನ್ನು ಚಿತ್ರರಂಗದಲ್ಲಿ ಕಳೆದಿದ್ದಾರೆ. ಸೂರಿ ನಿರ್ದೇಶನದ ಮೊದಲ ಸಿನಿಮಾ 'ದುನಿಯಾ' 2007ರಲ್ಲಿ ಬಂದಿದ್ದು, ಈಗ ಸೂರಿ ದಶಕದ ನಿರ್ದೇಶಕನಾಗಿದ್ದಾರೆ.
ಸೂರಿ ಸಿನಿಮಾಗಳು
'ದುನಿಯಾ' ನಂತರ ಸೋಲು ಗೆಲುವು ಎರಡನ್ನು ಸೂರಿ ನೋಡಿದ್ದಾರೆ. 'ಇಂತಿ ನಿನ್ನ ಪ್ರೀತಿಯ', 'ಜಂಗ್ಲಿ' ಚಿತ್ರಗಳು ಅಷ್ಟಾಗಿ ಜನರಿಗೆ ಹಿಡಿಸಲಿಲ್ಲ. ಆದರೆ 'ಕೆಂಡಸಂಪಿಗೆ', 'ದೊಡ್ಮನೆ ಹುಡುಗ' ಚಿತ್ರಗಳು ಸೂಪರ್ ಹಿಟ್ ಆಗಿವೆ. ಸದ್ಯ ಸೂರಿ 'ಕಡ್ಡಿಪುಡಿ' ಬಳಿಕ ಮತ್ತೆ ಶಿವಣ್ಣನ ಜೊತೆ 'ಟಗರು' ಚಿತ್ರ ಮಾಡುತ್ತಿದ್ದಾರೆ.
ಶಶಾಂಕ್
ಕನ್ನಡದ ಮತ್ತೊಬ್ಬ ನಿರ್ದೇಶಕ ಶಶಾಂಕ್ ಕೂಡ ಹತ್ತು ವರ್ಷ ಕಂಪ್ಲೀಟ್ ಮಾಡಿದ್ದಾರೆ. 2007ರಲ್ಲಿ ಪ್ರಜ್ವಲ್ ದೇವರಾಜ್ ನಟನೆಯ 'ಸಿಕ್ಸರ್' ಸಿನಿಮಾದ ಮೂಲಕ ಶಶಾಂಕ್ ಸ್ವತಂತ್ರ ನಿರ್ದೇಶಕರಾದರು.
ಶಶಾಂಕ್ ಸಿನಿಮಾಗಳು
ಮೊದಲ ಚಿತ್ರದ ಸೋಲಿನ ನಂತರ 'ಮೊಗ್ಗಿನ ಮನಸ್ಸು' ಚಿತ್ರ ಮಾಡಿದ ಶಶಾಂಕ್ ದೊಡ್ಡ ಗೆಲುವು ಸಾಧಿಸಿದರು. ಆ ನಂತರ 'ಕೃಷ್ಣನ್ ಲವ್ ಸ್ಟೋರಿ', 'ಜರಾಸಂಧ', 'ಬಚ್ಚನ್', 'ಕೃಷ್ಣಲೀಲಾ' ಮತ್ತು 'ಮುಂಗಾರು ಮಳೆ 2' ಚಿತ್ರಗಳನ್ನು ಶಶಾಂಕ್ ನಿರ್ದೇಶನ ಮಾಡಿದರು. ಸದ್ಯ 'ತಾಯಿಗೆ ತಕ್ಕ ಮಗ' ಚಿತ್ರದಲ್ಲಿ ಅವರು ಬಿಜಿ ಇದ್ದಾರೆ.
ಆರ್.ಚಂದ್ರು
'ತಾಜ್ ಮಹಲ್' ಖ್ಯಾತಿಯ ನಿರ್ದೇಶಕ ಆರ್.ಚಂದ್ರು ಚಿತ್ರರಂಗಕ್ಕೆ ಬಂದು 10 ವರ್ಷ ಆಗಿದೆ. ಈ ಹಿನ್ನಲೆಯಲ್ಲಿ ಅವರು ತಮ್ಮ 'ಕನಕ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ದಶಕ ಪೂರೈಸಿದ ನಿರ್ದೇಶಕರಿಗೆ ಸನ್ಮಾನ ಮಾಡಿದರು.
ಮತ್ತೆ 'ಕೆಂಡಸಂಪಿಗೆ' ಹಿಂದೆ ಹೊರಟ ನಿರ್ದೇಶಕ ಸೂರಿ
ಆರ್.ಚಂದ್ರು ಸಿನಿಮಾಗಳು
'ತಾಜ್ ಮಹಲ್', 'ಪ್ರೇಮ್ ಕಹಾನಿ', 'ಮೈಲಾರಿ', 'ಬ್ರಹ್ಮ', ಕೋಕೋ, 'ಚಾರ್ ಮಿನರ್', 'ಲಕ್ಷ್ಮಣ' ಚಿತ್ರಗಳು ಚಂದ್ರು ಅಕೌಂಟ್ ನಲ್ಲಿದೆ. ಸದ್ಯ ದುನಿಯಾ ವಿಜಯ್ ಮತ್ತು ಚಂದ್ರು ಕಾಂಬಿನೇಶನ್ ನಲ್ಲಿ 'ಕನಕ' ಸಿನಿಮಾ ಬರುತ್ತಿದೆ.