twitter
    For Quick Alerts
    ALLOW NOTIFICATIONS  
    For Daily Alerts

    ಗೋವಿಂದ.. ಗೋವಿಂದ..: ಈ ಸಿನಿಮಾಗಳ ಬಗ್ಗೆ ಜಾಸ್ತಿ ಆಸೆ ಇಟ್ಕೋಬೇಡಿ.!

    By Naveen
    |

    ಕನ್ನಡ ಚಿತ್ರರಂಗದಲ್ಲಿ ಈಗ ಅದೇನ್ ಆಗಿದೆಯೋ ಏನೋ... ಅದ್ದೂರಿಯಾಗಿ ಶುರುವಾಗುವ ಸಿನಿಮಾಗಳು ಇದ್ದಕ್ಕಿದ್ದ ಹಾಗೆ ಅರ್ಧಕ್ಕೆ ನಿಂತು ಹೋಗುವುದು ಹೆಚ್ಚಾಗುತ್ತಿವೆ.

    ಒಂದು ಸಿನಿಮಾ ಶುರುವಾದಾಗಲೇ ಜನ ಆ ಚಿತ್ರವನ್ನು ನೋಡಬೇಕು ಅಂತ ಆಸೆ ಇಟ್ಟುಕೊಂಡಿರುತ್ತಾರೆ. ಇನ್ನೂ ಸೋಷಿಯಲ್ ಮೀಡಿಯಾದಲ್ಲಂತೂ ಅಂತಹ ಸಿನಿಮಾಗಳು ದೊಡ್ಡ ಸುದ್ದಿ ಮಾಡುತ್ತವೆ. ಆದರೆ ಕೊನೆಗೆ ಮಾತ್ರ ಆ ಚಿತ್ರಗಳು ಏನಾಗಿದ್ಯೋ, ಏನೋ ಅಂತಾನೆ ತಿಳಿಯದಾಗುತ್ತದೆ. ಮುಂದೆ ಓದಿ...

    'ಭೂಮಿಪುತ್ರ'

    'ಭೂಮಿಪುತ್ರ'

    ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ 20 ತಿಂಗಳ ಸರ್ಕಾರದ ಬಗ್ಗೆ 'ಭೂಮಿಪುತ್ರ' ಸಿನಿಮಾ ಶುರುವಾಗಿತ್ತು. ಅದ್ದೂರಿಯಾಗಿ ಮುಹೂರ್ತ ಮಾಡಿಕೊಂಡ ಈ ಚಿತ್ರದ ಶೂಟಿಂಗ್ ಇನ್ನೂ ಕೂಡ ಶುರುವಾಗಿಲ್ಲ. ಅಲ್ಲದೆ ಈ ಚಿತ್ರ ಮತ್ತೆ ಪ್ರಾರಂಭ ಆಗುವುದು ಕೂಡ ಬಹುತೇಕ ಡೌಟ್ ಎನ್ನಲಾಗುತ್ತದೆ.

    ನವೆಂಬರ್ ನಲ್ಲಿ ನಾನು ಅವಳು

    ನವೆಂಬರ್ ನಲ್ಲಿ ನಾನು ಅವಳು

    ರವಿಚಂದ್ರನ್ ಎರಡನೇ ಪುತ್ರ ವಿಕ್ರಮ್ ಅಭಿನಯದ ಮೊದಲ ಚಿತ್ರ 'ನವೆಂಬರ್ ನಲ್ಲಿ ನಾನು ಅವಳು'. ನಾಗಶೇಖರ್ ನಿರ್ದೇಶನದ ಈ ಚಿತ್ರ ಸದ್ಯ ನಿಂತು ಹೋಗಿದೆ ಎನ್ನುವ ಸುದ್ದಿ ಇದೆ. ಅದಕ್ಕೆ ಪುಷ್ಟಿ ನೀಡುವಂತೆ ನಾಗಶೇಖರ್ 'ಸಂಜು ವೆಡ್ಸ್ ಗೀತಾ 2' ಚಿತ್ರ ಮಾಡುತ್ತಿದ್ದಾರೆ.

    ಅಮ್ಮ

    ಅಮ್ಮ

    ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದ ರಾಗಿಣಿ ಅವರ 'ಅಮ್ಮ' ಸಿನಿಮಾ ಕೂಡ ಅರ್ಧಕ್ಕೆ ನಿಂತು ಹೋಗಿದೆ.

    ಮನಮೋಹಕ

    ಮನಮೋಹಕ

    ಸಿಂಪಲ್ ಸುನಿ ಮತ್ತು ಶಿವಣ್ಣ ಕಾಂಬಿನೇಶನ್ ನಲ್ಲಿ ಬರಬೇಕಿದ್ದ 'ಮನಮೋಹಕ' ಅನೌನ್ಸ್ ಆಗಿದೆ ಅಷ್ಟೆ. ಆದ್ರೆ, ಇನ್ನೂ ಸೆಟ್ಟೇರಿಲ್ಲ.

    ಕಲಿ

    ಕಲಿ

    ಪ್ರೇಮ್ ನಿರ್ದೇಶನದ 'ಕಲಿ' ಸಿನಿಮಾ ಸಿಕ್ಕಾಪಟ್ಟೆ ಅದ್ದೂರಿಯಾಗಿ ಸೆಟ್ಟೇರಿತ್ತು. ಆದರೆ ಆ ಚಿತ್ರದ ಬದಲು ಪ್ರೇಮ್ 'ದಿ ವಿಲನ್' ಸಿನಿಮಾವನ್ನು ಕೈ ಗೆತ್ತಿಕೊಂಡರು.

    ಜೇಮ್ಸ್

    ಜೇಮ್ಸ್

    'ಬಹದ್ದೂರ್' ಖ್ಯಾತಿಯ ನಿರ್ದೇಶಕ ಚೇತನ್ ಹಾಗೂ ಪುನೀತ್ ರಾಜ್ ಕುಮಾರ್ ಸೇರಿ ಒಂದು ಸಿನಿಮಾ ಮಾಡಬೇಕಿತ್ತು. ಚಿತ್ರಕ್ಕೆ 'ಜೇಮ್ಸ್' ಎನ್ನುವ ಟೈಟಲ್ ಕೂಡ ಫಿಕ್ಸ್ ಆಗಿತ್ತು. ಆದರೆ ಆ ಚಿತ್ರ ಕೂಡ ಈಗ ಸೈಲೆಂಟ್ ಆಗಿದೆ.

    ರಣಧೀರ... ಪ್ರೇಮಲೋಕದಲ್ಲಿ

    ರಣಧೀರ... ಪ್ರೇಮಲೋಕದಲ್ಲಿ

    ಇನ್ನೂ ಪುತ್ರ ಮನೋರಂಜನ್ ಗಾಗಿ ರವಿಚಂದ್ರನ್ 'ರಣಧೀರ... ಪ್ರೇಮಲೋಕದಲ್ಲಿ' ಎಂಬ ಸಿನಿಮಾದ ಮುಹೂರ್ತವನ್ನ ಗ್ರ್ಯಾಂಡ್ ಆಗಿ ಮಾಡಿದ್ದರು. ಆದ್ರೆ, ಬಳಿಕ ಆ ಸಿನಿಮಾ ಸೆಟ್ಟೇರಲೇ ಇಲ್ಲ.

    ನಮಗಾಗಿ

    ನಮಗಾಗಿ

    'ನಿನಗಾಗಿ' ಚಿತ್ರದ ಜೋಡಿ ವಿಜಯ್ ರಾಘವೇಂದ್ರ ಹಾಗೂ ರಾಧಿಕಾ ಕುಮಾರಸ್ವಾಮಿ ಅಭಿನಯಿಸಿದ್ದ 'ನಮಗಾಗಿ' ಸಿನಿಮಾ ಕೂಡ ಚಿತ್ರೀಕರಣದ ಹಂತದಲ್ಲಿಯೇ ನಿಂತು ಹೋಗಿದೆ.

    'ಈ ಗಾಂಧಿನಗರಕ್ಕೆ ಏನಾಗಿದೆ' : ಹೀಗೆ ಆದ್ರೆ ದೇವರೇ ಕಾಪಾಡಬೇಕು.!'ಈ ಗಾಂಧಿನಗರಕ್ಕೆ ಏನಾಗಿದೆ' : ಹೀಗೆ ಆದ್ರೆ ದೇವರೇ ಕಾಪಾಡಬೇಕು.!

    ಸೈಲೆಂಟ್ ಸುನೀಲ

    ಸೈಲೆಂಟ್ ಸುನೀಲ

    ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬರಬೇಕಿದ್ದ 'ಸೈಲೆಂಟ್ ಸುನೀಲ' ಸಿನಿಮಾ ಕೂಡ ಅರ್ಧಕ್ಕೆ ನಿಂತು ಹೋಗಿದೆ.

    English summary
    Here is the List of Kannada Movies which were shelved. ಅದ್ದೂರಿಯಾಗಿ ಶುರುವಾಗುವ ಕನ್ನಡ ಸಿನಿಮಾಗಳು ಅರ್ಧಕ್ಕೆ ನಿಂತು ಹೋಗುತ್ತಿದೆ.
    Thursday, November 16, 2017, 17:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X