Don't Miss!
- News Namma Metro Purple Line: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಕಾರಣಗಳೇನು?
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Technology Tecno: ಬಹುನಿರೀಕ್ಷಿತ ಟೆಕ್ನೋ ಪೋವಾ 6 ಪ್ರೊ ಲಾಂಚ್! 12GB RAM.. 6000mAh ಬ್ಯಾಟರಿ.. ಬೆಲೆ ಎಷ್ಟು?
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಂದೆ ತಾಯಿ ಪ್ರೀತಿ ವಂಚಿತ ಅಮೆರಿಕ
ಭೂತಯ್ಯನ ಮಗ ಅಯ್ಯು ಚಿತ್ರ ನೋಡಿದ್ದೀರಾ? ಹಾಗಾದರೆ, ನಿಮಗೆ ಉಪ್ಪಿನಕಾಯಿಗೆ ಅಂಗಲಾಚುವ ವ್ಯಕ್ತಿಯ ಪಾತ್ರ ನೆನಪಿದೆ ಅಲ್ಲವೇ? ಲೋಕನಾಥ್ ಕನ್ನಡ ಚಿತ್ರರಂಗದಲ್ಲಿ ನೆಲೆನಿಂತಿದ್ದು, ಆ ಚಿತ್ರದಿಂದಲೇ, ಸಿಂಗಪೂರ್ನಲ್ಲಿ ರಾಜಾಕುಳ್ಳ, ಮಿಂಚಿನ ಓಟ ಮೊದಲಾದ ಚಿತ್ರಗಳಲ್ಲಿ ನಟಿಸಿದ ಲೋಕನಾಥ್ ಇತ್ತೀಚೆಗೆ ಉದಯಟಿವಿಯಲ್ಲಿ ಪ್ರಸಾರವಾದ ಶಕ್ತಿ ಮೆಗಾ ಧಾರಾವಾಹಿಯಲ್ಲಿ ಮಿಂಚಿದ್ದರು. ಚಿತ್ರರಂಗಕ್ಕೆ ಕಾಲಿಟ್ಟ ದಿನದಿಂದಲೂ ಬಹುತೇಕ ನಟರಾಗೇ ತಮ್ಮನ್ನು ಗುರುತಿಸಿಕೊಂಡಿದ್ದ ಲೋಕನಾಥ್ ಈಗ ಚಿತ್ರ ನಿರ್ಮಾಣ ಹಾಗೂ ನಿರ್ದೇಶನಕ್ಕೂ ಕೈಹಾಕಿದ್ದಾರೆ.
70ರ ಹರೆಯದ ಲೋಕನಾಥ್ ನಾಲ್ಕು ತಿಂಗಳ ಹಿಂದೆ ತಮ್ಮ ಪುತ್ರ ಅಶ್ವಿನಿ ಶಾಂಡಿಲ್ಯ, ಸೊಸೆ ಹಾಗೂ ಮೊಮ್ಮಗನ ನೋಡಲು ಅಮೆರಿಕಕ್ಕೆ ಹೋಗಿದ್ದರಂತೆ. ಮಗ ಸೊಸೆ ಇಬ್ಬರೂ ಅಮೆರಿಕದಲ್ಲಿ ನೌಕರಿಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಅನಿವಾಸಿ ಭಾರತೀಯರ ಮಕ್ಕಳು ತಂದೆ ತಾಯಿಗಳ ಪ್ರೀತಿ - ಮಮತೆ ವಾತ್ಸಲ್ಯದಿಂದ ವಂಚಿತರಾಗುವ ಪರಿ ಲೋಕನಾಥರ ಮನ ಕಲಕಿತು.
\ಮಾತಾ ಪಿತೃಗಳ ಪ್ರೀತಿ ವಂಚಿತರಾಗಿ ಬೆಳೆವ ಭಾರತೀಯ ಮಕ್ಕಳ ಅನುಭವವನ್ನೆಲ್ಲಾ ಸಂಗ್ರಹಿಸಿದ ಲೋಕನಾಥ್ ಅನೀಶ್ ಹಾಗೂ ಆತನ ಸೋದರಿ ಶಾರದಾರ ಸುತ್ತ ನಡೆಯುವ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು 39 ದಿನಗಳ ಕಾಲ 36 ಲಕ್ಷ ರುಪಾಯಿ ವೆಚ್ಚದಲ್ಲಿ 29 ದಿನಗಳ ಕಾಲ ಅನೀಶ್ ಎಂಬ ಹೆಸರಿನ ಟೆಲಿ ಚಿತ್ರದ ಚಿತ್ರೀಕರಣ ಪೂರೈಸಿದ್ದಾರೆ. ಈ ಚಿತ್ರೀಕರಣ ಸಂದರ್ಭದಲ್ಲಿ ಕನ್ನಡ ನಾಡಿನಿಂದ ಬಂದಿದ್ದ ಕಲಾವಿದರು ಉತ್ತಮವಾಗಿ ಸಹಕರಿಸಿದರು ಎಂಬುದು ಲೋಕನಾಥರ ಹೇಳಿಕೆ.
ಆದರೆ, ಈ ಕಲಾವಿದರಲ್ಲಿ ಅಸಮಾಧಾನದ ಹೊಗೆ ಆಡುತ್ತಿದೆ. ಚಿತ್ರೀಕರಣ ಸಂದರ್ಭದಲ್ಲಿ ಕಲಾವಿದರು ಪಟ್ಟ ಪಾಡು ಅಷ್ಟಿಷ್ಟಲ್ಲ . ವಾರಕ್ಕೊಮ್ಮೆ ಶೂಟಿಂಗ್, ಉಳಿದ ದಿನವೆಲ್ಲ ಗೃಹಬಂಧನ, ಯಾಕಪ್ಪಾ ಈ ಗೋಳು ಎಂದು ಕೆಲವರು ಗುಟ್ಟಾಗಿ ಗೊಣಗಾಡಿದ್ದಾರೆ. ಅದೇನೇ ಇರಲಿ, ಈ ಚಿತ್ರದಲ್ಲಿ ದೇವರ ಸ್ತೋತ್ರಗಳಲ್ಲದೆ ನಾಲ್ಕು ಗೀತೆಗಳೂ ಇವೆ. ಭಾರತೀಯ ದಂಪತಿಗಳ ಮಕ್ಕಳಾದ ಅನೀಶ್ ಹಾಗೂ ಶಾರಾದಾ ಈ ಚಿತ್ರದ ನಾಯಕ - ನಾಯಕಿಯರಾದರೂ, ವಿನಯಾ ಪ್ರಸಾದ್, ರಾಮಕೃಷ್ಣ ಮುಖ್ಯ ಭೂಮಿಕೆಯಲ್ಲಿದ್ದಾರೆ.
ತಾಯಿ ಮಮತೆ ವಂಚಿತ ಮಕ್ಕಳಿಗೆ ತಾತ ರಂಗಣ್ಣನ ಆಗಮನದ ನಂತರ ವಾತ್ಸಲ್ಯ ಉಕ್ಕಿ ಹರಿಯುತ್ತದೆ. ಮುರಳೀಧರ್ ಛಾಯಾಗ್ರಹಣ, ಕುಮಾರ್ ಈಶ್ವರ್ ಸಂಗೀತ, ಸುನಿಲ್ ಕುಮಾರ್ ಸಂಭಾಷಣೆ ಇರುವ ಈ ಚಿತ್ರದ ಕತೆ, ಚಿತ್ರಕತೆ, ನಿರ್ದೇಶನ ಲೋಕನಾಥರದೇ.
ತಾರಾಬಳಗದಲ್ಲಿ ಅನೀಶ್ ಶಾಂಡಿಲ್ಯ, ರಾಮಕೃಷ್ಣ, ವಿನಯಾ ಪ್ರಸಾದ್, ಲಿಂಗದೇವರು, ಮುರಳಿ ಜೊತೆಗೆ ತಾತನ ಪಾತ್ರದಲ್ಲಿ ಲೋಕನಾಥ್ ಇದ್ದಾರೆ.