ಖ್ಯಾತ ಸಿನಿಮಾ ಗೀತ ರಚನೆಕಾರ ತಂಗಾಳಿ ನಾಗರಾಜ್ ನಿಧನ
ಕನ್ನಡ ಸಿನಿಮಾದ ಖ್ಯಾತ ಚಿತ್ರಸಾಹಿತಿ, ಗೀತ ರಚನೆಕಾರ ತಂಗಾಳಿ ನಾಗರಾಜ್ ಅವರು ಇಂದು (ಶನಿವಾರ) ಬೆಳಿಗ್ಗೆ ಹೃದಯಾಘಾತದಿಂದ ಮೃತರಾಗಿದ್ದಾರೆ.
'ತಂಗಾಳಿ ಎಲ್ಲಿಂದ ಬೀಸುವೆ' ಹಾಡು ಬರೆದು ಖ್ಯಾತರಾದ ನಾಗರಾಜ್ ಆ ನಂತರ ತಂಗಾಳಿ ನಾಗರಾಜ್ ಎಂದೇ ಪರಿಚಿತರಾದರು. ಕಲಾಸಿಪಾಳ್ಯದ 'ಧೂಳ್ ಮಗಾ ಧೂಳ್' ಹಾಡು ಸೇರಿ ಹಲವು ಹಿಟ್ಗಳನ್ನು ತಂಗಾಳಿ ನಾಗರಾಜ್ ಬರೆದಿದ್ದಾರೆ.
ಕಳೆದ ಹದಿನೈದು ವರ್ಷಗಳಿಂದಲೂ ತಂಗಾಳಿ ನಾಗರಾಜ್ ಕನ್ನಡ ಸಿನಿಮಾಗಳಲ್ಲಿ ಗೀತರಚನೆಕಾರರಾಗಿ ಕೆಲಸ ಮಾಡುತ್ತಿದ್ದು, ನೂರಾರು ಹಿಟ್ ಹಾಡುಗಳನ್ನು ಬರೆದಿದ್ದಾರೆ.

Recommended Video
Rakesh Adiga spiritual Rap , ಕನ್ನಡಧ Rapperಗಳಿಗೆ ಕಿವಿಮಾತು | Rakesh Adiga | Filmibeat Kannada
ತಂಗಾಳಿ ನಾಗರಾಜ್ ಅವರ ನಿಧನಕ್ಕೆ ಗೀತರಚನೆಕಾರ ಕವಿರಾಜ್ ಸೇರಿದಂತೆ ಚಂದನವನದ ಇತರ ಗೀತರಚನೆಕಾರರು, ಸಂಗೀತ ನಿರ್ದೇಶಕರು ಬೇಸರ ವ್ಯಕ್ತಪಡಿಸಿದ್ದಾರೆ.
More from Filmibeat
English summary
Kannada movie song lyricist Tangali Nagaraj passed away due to heart attack on September 12 morning.


Click it and Unblock the Notifications











