Don't Miss!
- Sports RR vs MI IPL 2024: ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ; ರಾಜಸ್ಥಾನ್ ವಿರುದ್ಧ ಮುಂಬೈ ಇಂಡಿಯನ್ಸ್ಗೆ ಮುಖಭಂಗ
- News Bengaluru Real Estate: ಬೆಂಗಳೂರಿನಲ್ಲಿ ಸೈಟು ಖರೀದಿಸುವ ಮುನ್ನ ಎಚ್ಚರ! 279 ಅಕ್ರಮ ಲೇಔಟ್ ಗುರುತಿಸಿದ ಬಿಡಿಎ
- Finance ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
- Lifestyle ರಾಜ್ಯದಲ್ಲಿ ಮುಂದಿನ 1 ವಾರ ಹವಾಮಾನ ಹೇಗಿರಲಿದೆ? ಎಲ್ಲೆಲ್ಲಿ ಮಳೆಯಾಗಲಿದೆ?
- Technology ಲಾವಾ ಅಗ್ನಿ 2 5G ಮೊಬೈಲ್ ಬೆಲೆಯಲ್ಲಿ ದಿಢೀರ್ ಇಳಿಕೆ; ಗ್ರಾಹಕರಿಗೆ ಖುಷಿ!
- Automobiles ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಲು ಹೊಸ ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ಅನಾವರಣ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿರ್ದೇಶಕನಾದ ಗೀತರಚನೆಗಾರ ಸಂತೋಷ್ ನಾಯ್ಕ
ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಅನೇಕ ಗೀತರಚನೆಕಾರರು ನಿರ್ದೇಶಕರಾಗಿದ್ದಾರೆ. ಇದೀಗ ಆ ಸಾಲಿಗೆ ಮತ್ತೊಬ್ಬ ಗೀತರಚನೆಕಾರ ಸೇರಿಕೊಂಡಿದ್ದಾರೆ. ಅವರೇ ಸಂತೋಷ್ ನಾಯ್ಕ.
'ಯುವ' ಸಿನಿಮಾದ ಮೂಲಕ 2009ರಲ್ಲಿ ಸಂತೋಷ್ ಚಿತ್ರರಂಗಕ್ಕೆ ಬಂದರು. ಅಲ್ಲಿಂದ ಶುರುವಾದ ಅವರ ಕೆರಿಯರ್ ಈಗ 11 ವರ್ಷ ಪೂರೈಸಿದೆ. ಸಂಗೀತ ನಿರ್ದೇಶಕ ಗುರುಕಿರಣ್ ಸಂತೋಷ್ ರಿಗೆ ಹೆಚ್ಚು ಅವಕಾಶ ನೀಡಿದ್ದಾರೆ. ಇತ್ತೀಚಿಗೆ 'ಹೆಬ್ಬುಲಿ', 'ಆಯುಷ್ಮಾನ್ ಭವ', 'ಐ ಲವ್ ಯೂ', 'ರಾಂಬೋ 2', 'ಚೌಕ' ಸಿನಿಮಾದ ಹಾಡುಗಳನ್ನು ಸಂತೋಷ್ ಬರೆದಿದ್ದಾರೆ.
ಏನಾಯ್ತು 'ಭರತ ಬಾಹುಬಲಿ' ಲಕ್ಕಿ ಡ್ರಾ?: ನಿರ್ಮಾಪಕರ ಪ್ರತಿಕ್ರಿಯೆ ಏನು?
ಇದೀಗ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿರುವ ಸಂತೋಷ್ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಮಾತನಾಡಿ ಚಿತ್ರದ ವಿವರ ಹಂಚಿಕೊಂಡಿದ್ದಾರೆ. ''ಕಥೆ, ಚಿತ್ರಕಥೆ ಎಲ್ಲವೂ ಸಿದ್ಧವಾಗಿದ್ದು, ಸದ್ಯ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ನಾಯಕ, ನಾಯಕಿ ಆಯ್ಕೆ ಕೊನೆಯ ಹಂತದಲ್ಲಿ ಇದೆ. ಎರಡ್ಮೂರು ತಿಂಗಳಿನಲ್ಲಿ ಸಿನಿಮಾ ಪ್ರಾರಂಭ ಆಗಲಿದೆ'' ಎಂದು ಸಂತೋಷ್ ತಿಳಿಸಿದ್ದಾರೆ.
ತಾಂತ್ರಿಕ ವರ್ಗದ ಆಯ್ಕೆ ಕೂಡ ನಡೆಯುತ್ತಿದೆ. ಗುರುಕಿರಣ್ ಹಿನ್ನಲೆ ಸಂಗೀತ ನೀಡುತ್ತಿದ್ದಾರೆ. ಸತ್ಯ ಹೆಗಡೆ ಕ್ಯಾಮರಾ ಹಿಡಿಯುವ ಸಾಧ್ಯತೆ ಇದೆಯಂತೆ. ಇನ್ನು ಉಳಿದ ವಿವರಗಳನ್ನು ಸದ್ಯದಲ್ಲಿಯೇ ತಿಳಿಸುವುದಾಗಿ ಸಂತೋಷ್ ಹೇಳಿದ್ದಾರೆ.
'ಕೆಜಿಎಫ್'ನಲ್ಲಿ ದೊಡ್ಡ ಬದಲಾವಣೆ: ಇದ್ದಕ್ಕಿದ್ದಂತೆ 'ಆ ವ್ಯಕ್ತಿ' ದೂರವಾಗಿದ್ದೇಕೆ?
ನಿರ್ದೇಶಕರಾಗಬೇಕು ಎಂದು ಚಿತ್ರರಂಗಕ್ಕೆ ಬಂದ ಸಂತೋಷ್ ಗೀತರಚನೆಕಾರನಾಗಿ ಹೆಸರು ಮಾಡಿದ್ದಾರೆ. ಕೆಲವು ಸಿನಿಮಾಗಳಲ್ಲಿ ನಿರ್ದೇಶಕರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಆ ಅನುಭವದ ಮೂಲಕ ಈಗ ತಾವೇ ಒಂದು ಹೊಸ ಸಿನಿಮಾ ಆರಂಭ ಮಾಡುತ್ತಿದ್ದಾರೆ.