Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಹರ್ಷಿ' ಚಿತ್ರದ ರಿಲೀಸ್ ವೇಳೆ ಅಭಿಮಾನಿ ಸಾವು
ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಮಹರ್ಷಿ ಸಿನಿಮಾ ಇಂದು ದೇಶಾದ್ಯಂತ ಬಿಡುಗಡೆಯಾಗಿದೆ. ಪ್ರಿನ್ಸ್ ಮಹೇಶ್ ಅವರ 25ನೇ ಚಿತ್ರ ಇದಾಗಿದ್ದು, ಅಭಿಮಾನಿಗಳ ಸಂಭ್ರಮ ಹೆಚ್ಚಾಗಿದೆ.
ಆದ್ರೆ, ಇಷ್ಟು ದೊಡ್ಡ ಸಂಭ್ರಮದ ನಡುವೆಯೂ ಅನಾಹುತವೊಂದು ನಡೆದು ಹೋಗಿದೆ. ಹೌದು, ಮಹರ್ಷಿ ಸಿನಿಮಾ ರಿಲೀಸ್ ವೇಳೆ ಚಿತ್ರಮಂದಿರದ ಬಳಿ ಅಭಿಮಾನಿಯೊಬ್ಬ ಸಾವನ್ನಪ್ಪಿದ್ದಾನೆ.
ಮಹೇಶ್ ಬಾಬು ಚಿತ್ರದ ಆಫರ್ ತಿರಸ್ಕರಿಸಿದ ಉಪೇಂದ್ರ.!
ಮಹೇಶ್ ಬಾಬು ಅವರ ಅಪ್ಪಟ ಅಭಿಮಾನಿಯಾಗಿದ್ದ ಯರ್ರಂಶೆಟ್ಟಿ, ಮಧ್ಯರಾತ್ರಿ ಥಿಯೇಟರ್ ಬಳಿ ಫ್ಲೆಕ್ಸ್ ಹಾಕಲು ಹೋದಾಗ, ವಿದ್ಯುತ್ ಸ್ಪರ್ಶಕ್ಕೆ ಬಲಿಯಾಗಿದ್ದಾನೆ.
27 ವರ್ಷದ ಯರ್ರಂಶೆಟ್ಟಿ ಹಾರ್ಲಿಕ್ಸ್ ಫ್ಯಾಕ್ಟರಿಯಲ್ಲಿ ಉದ್ಯೋಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಮಹರ್ಷಿ ಸಿನಿಮಾ ಬಿಡುಗಡೆ ಹಿನ್ನಲೆ ಮುರಳಿ ಕೃಷ್ಣ ಚಿತ್ರಮಂದಿರದ ಬಳಿ ಸ್ನೇಹಿತನ ಜೊತೆ ಸೇರಿ ಫ್ಲೆಕ್ಸ್ ಹಾಕಲು ಹೋಗಿದ್ದರು. ಈ ವೇಳೆ ಪೋಸ್ಟರ್ ಕರೆಂಟ್ ವೈರ್ ತಾಗಿ ಶಾಕ್ ಹೊಡೆದಿದೆ.
ಆಮಿ, ಮಹೇಶ್ ಬಾಬು ಮಾಡಿದ ತಪ್ಪಿಗೆ ಕೋಪಗೊಂಡ ಕನ್ನಡಿಗರು
ಕೂಡಲೇ ಆ ವ್ಯಕ್ತಿಯನ್ನ ರಾಜಮಂಡ್ರಿಯ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನಂತೆ. ಈ ದುರ್ಘಟನೆಗೆ ಮಹೇಶ್ ಬಾಬು ಫ್ಯಾನ್ಸ್ ವಿಷಾದ ವ್ಯಕ್ತಪಡಿಸಿದ್ದು, ಈ ಸುದ್ದಿ ಚಿತ್ರತಂಡದ ಅರಿವಿಗೆ ಬಂದಿದ್ಯಾ ಸದ್ಯಕ್ಕೆ ಗೊತ್ತಿಲ್ಲ.