Don't Miss!
- News ಮನೆ ಬಾಗಿಲಿಗೆ ಹೋದರೂ ಸಿಗಲಿಲ್ಲ ಬಿಜೆಪಿ ಶಾಸಕರು, ಸಂಸದರು: ಉ.ಕನ್ನಡ ಬಿಜೆಪಿ ಅಭ್ಯರ್ಥಿ ಕಾಗೇರಿಗಿಲ್ಲ ಅಸಮಾಧಾನಿತರ ಬೆಂಬಲ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Automobiles ಯುಎಸ್ಎ, ಕೆನಡಾಗೂ ಕಾಲಿಟ್ಟ ಭಾರತೀಯ ಬೈಕ್: ಮುಂದುವರೆದ ವಿಶ್ವಗುರು ಭಾರತದ ನಾಗಾಲೋಟ
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೂನ್ 7ರಿಂದ ಮಜ್ಜಿಗೆಹುಳಿ ಮೊದಲ ರಾತ್ರಿ ಶುರು ಗುರೂ!
ಒಂದೇ ಕೋಣೆಯಲ್ಲಿ 28 ಪಾತ್ರಗಳೊಂದಿಗೆ ಚಿತ್ರಿಕರಿಸಲಾಗಿರುವ 'ಮಜ್ಜಿಗೆಹುಳಿ' ಚಿತ್ರದ ಸೆನ್ಸಾರ್ ಕಾರ್ಯ ಮುಕ್ತಾಯವಾಗಿದೆ. ಯಾವುದೇ ಕಟ್ಸ್-ಮ್ಯೂಟ್ ಇಲ್ಲದೇ U/A ಸರ್ಟಿಫಿಕೇಟ್ ಪಡೆದುಕೊಂಡಿದೆ. ಹೊಸದಾಗಿ ಮದುವೆಯಾದ ಜೋಡಿಯೊಂದು ಮೊದಲರಾತ್ರಿಗೆಂದು ಗೋವಾಗೆ ಹೋದಾಗ ಆ ರಾತ್ರಿ ಅವರ ಜೀವನದಲ್ಲಿ ಏನೆಲ್ಲಾ ಘಟನಾವಳಿಗಳು ನಡೆಯುತ್ತದೆ ಎಂಬುವುದೇ ಒಂದು ಸಾಲಿನ ಕಥೆ.
ನವಜೋಡಿಯ ಫಸ್ಟ್ ನೈಟ್ ರೂಮಲ್ಲಿ 'ಮಜ್ಜಿಗೆಹುಳಿ' ಒಳ್ಳೆ ಬಾಡೂಟ ಗುರೂ
'ಇದು ಯಾರ ಜೀವನದ ಮೊದಲರಾತ್ರಿಯ ಕಥೆಯೂ ಆಗಿರಬಹುದು. ಮೊದಲರಾತ್ರಿ ಮೂಲತಃ ಒಂದು ಬೆಚ್ಚನೆಯ ಕನಸು, ಜೀವನದಲ್ಲಿ ಅದೊಂದು ಮರೆಯಲಾಗದ ಮಧುರವಾದ ರಾತ್ರಿ. ಮದುವೆಯಾಗುವ ಪ್ರತಿ ಜೋಡಿಗೂ ಅದೊಂದು ನಿರೀಕ್ಷೆಯ ರಾತ್ರಿ. ಮದುವೆಯ ನಂತರವೂ ಅದು ಎಂದು ಮರೆಯದೇ ನೆನಪಿನಲ್ಲಿ ಉಳಿದುಬಿಡುವ ರಾತ್ರಿ. ಇಂತಹ ಒಂದು ರಾತ್ರಿಯ ಸುತ್ತಲ್ಲೂ ಮಜ್ಜಿಗೆಹುಳಿಯ ಕಥೆ ನಡೆಯುತ್ತದೆ. ಇಲ್ಲಿ ಹಾಸ್ಯವಿದೆ, ಹಾಗಂತ ಯಾವುದೇ ಆಶ್ಲೀಲವಾದ ದೃಶ್ಯಗಳಿಲ್ಲ. ಮೊದಲರಾತ್ರಿಯ ಬೆಚ್ಚನೆಯ ಭಾವೆನಗಳನ್ನು ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ' ಎನ್ನುತ್ತಾರೆ ನಿರ್ದೇಶಕ ರವೀಂದ್ರ ಕೊಟಕಿ.
ಗಣತಂತ್ರದಿನದಂದು ಮಜ್ಜಿಗೆಹುಳಿ ಒಳ್ಳೆ ಬಾಡೂಟ ಗುರೂ ಪ್ರೋಮೋ ಸಾಂಗ್!
ಮೊದಲರಾತ್ರಿಯ ಕೋಣೆಯೊಂದರಲ್ಲೇ ಒಟ್ಟು 28 ಪಾತ್ರಗಳೊಂದಿಗೆ ಮಜ್ಜಿಗೆಹುಳಿಯನ್ನು ನಿರ್ದೇಶಕರ ರವೀಂದ್ರ ಕೊಟಕಿ ಸಿದ್ದಪಡಿಸಿದ್ದಾರೆ. ಮಜ್ಜಿಗೆಹುಳಿಯ ಸವಿರುಚಿಯನ್ನು ಕೆಲವೇ ದಿನಗಳಲ್ಲಿ ಸಿನಿಪ್ರೇಕ್ಷಕರು ಸವಿಯಬಹುದು. ಜೂನ್ 7ರಂದು ಮಜ್ಜಿಗೆಹುಳಿ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ನಾಯಕನಾಗಿ ದಿಕ್ಷಿತ್ ವೆಂಕಟೇಶ್ ನಟಿಸಿದ್ದು, ನಾಯಕಿಯಾಗಿ ರೂಪಿಕಾ ಜೊತೆಯಾಗಿದ್ದಾರೆ. ಇನ್ನು ಸುಚೇಂದ್ರ ಪ್ರಸಾದ್, ಮೋಹನ್ಜುನೇಜಾ, ಮಿಮಿಕ್ರಿ ದಯಾನಂದ್, ರಮೇಶ್ಭಟ್, ತರಂಗ ವಿಶ್ವ, ಕೆಂಪೇಗೌಡ, ಕುರಿಸುನೀಲ್, ಯತಿರಾಜ್, ಶಂಕರ್ ನಾರಾಯಣ್ರಂತ ನುರಿತ ಕಲಾವಿದರ ದಂಡು ಈ ಸಿನಿಮಾದಲ್ಲಿದ್ದು. ಈ ಚಿತ್ರವನ್ನು ರಾಮಚಂದ್ರ ಎಸ್ ನಿರ್ಮಿಸಿದ್ದು, ರಾಘುರಾಜು ವೈ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.