Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಒಂದು ರಾತ್ರಿಗೆ 2 ಲಕ್ಷ ಕೊಡುವೆ' ಎಂದ ಕಾಮುಕನಿಗೆ ಚಳಿ ಬಿಡಿಸಿದ ಮಲಯಾಳಂ ನಟಿ.!
ಚಿಟಿಕೆ ಹೊಡೆಯುವಷ್ಟರಲ್ಲಿ ಹೆಚ್ಚು ಜನರನ್ನು ತಲುಪಲು ಸೋಷಿಯಲ್ ಮೀಡಿಯಾ ಅತ್ಯಂತ ಸಹಕಾರಿ. ಪ್ರಬಲ ಮಾಧ್ಯಮವಾಗಿ ಬೆಳೆದಿರುವ ಸಾಮಾಜಿಕ ಜಾಲತಾಣಗಳಿಂದ ಉಪಯೋಗ ಪಡಿಯುವುದು ಬಿಟ್ಟು, ದುರುಪಯೋಗ ಪಡಿಸಿಕೊಳ್ಳುತ್ತಿರುವವರ ಸಂಖ್ಯೆ ಕೂಡ ಕಮ್ಮಿ ಏನಿಲ್ಲ.
ಫೇಸ್ ಬುಕ್, ಇನ್ಸ್ಟಾಗ್ರಾಮ್ ನಿಂದ ನಟ-ನಟಿಯರು ದಿನೇ ದಿನೇ ತಮ್ಮ ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಳ್ತಿದ್ದಾರೆ ಅನ್ನೋದೇನೋ ನಿಜ. ಆದ್ರೆ, ನಟಿಯರಿಗೆ ಮಾತ್ರ ಸೋಷಿಯಲ್ ಮೀಡಿಯಾದಲ್ಲೂ ನೆಮ್ಮದಿ ಇಲ್ಲ. ಫೇಸ್ ಬುಕ್ ನಲ್ಲಿ ನಟಿಯರಿಗೆ ಕಿರುಕುಳ ಕೊಡುವ ವಿಕೃತಕಾಮಿಗಳೂ ಇದ್ದಾರೆ.
ಫೇಸ್ ಬುಕ್ ನಲ್ಲಿ ಅಸಭ್ಯ, ಅಶ್ಲೀಲ ಸಂದೇಶಗಳನ್ನು ಕಳುಹಿಸುವ ಕಾಮುಕರ ವಿರುದ್ಧ ಕೆಲವು ನಟಿಯರು ಸಿಡಿದೆದ್ದಿದ್ದರು. ಇದೀಗ ಅದೇ ಸಾಲಿಗೆ ಮಲಯಾಳಂ ನಟಿ ಗಾಯತ್ರಿ ಅರುಣ್ ಸೇರ್ಪಡೆಗೊಂಡಿದ್ದಾರೆ. ಮುಂದೆ ಓದಿರಿ...
ಡರ್ಟಿ ಮೆಸೇಜ್
''ನನ್ನ ಜೊತೆ ಒಂದು ರಾತ್ರಿ ಬರ್ತಿಯಾ.. ಎರಡು ಲಕ್ಷ ಕೊಡುವೆ. ಈ ವಿಷಯ ನಮ್ಮಿಬ್ಬರ ನಡುವೆಯೇ ಇರಲಿದೆ. ಕೇವಲ ಒಂದು ಗಂಟೆಗೆ ಎರಡು ಲಕ್ಷ ಕೊಡುವೆ'' ಎಂದು ಕಾಮುಕನೊಬ್ಬ ಮಲಯಾಳಂ ನಟಿ ಗಾಯತ್ರಿ ಅರುಣ್ ಗೆ ಸಂದೇಶ ಕಳುಹಿಸಿದ್ದ.
ನಗ್ನ ಚಿತ್ರಗಳನ್ನ ನೋಡಿ ನೋಡಿ ಬೇಸರ: ಫೇಸ್ ಬುಕ್ ಗೆ ದೊಡ್ಡ ನಮಸ್ಕಾರ ಹಾಕಿದ ನಟಿ.!
ತಿರುಗೇಟು ಕೊಟ್ಟ ಗಾಯತ್ರಿ ಅರುಣ್
ಇದನ್ನ ನೋಡಿ ಸುಮ್ಮನೆ ಕೂರದ ಗಾಯತ್ರಿ ಅರುಣ್ ''ಮಿಸ್ಟರ್ ರೋಹನ್ ಕುರಿಯಾಕೋಸ್... ನಿನ್ನ ತಾಯಿ/ಸಹೋದರಿಯ ಸುರಕ್ಷತೆ ಬಗ್ಗೆ ಪ್ರಾರ್ಥಿಸಲು ನಾನು ಖಂಡಿತ ನೆನಪಿಸಿಕೊಳ್ಳುವೆ'' ಎಂದು ಚಳಿ ಬಿಡಿಸಿದ್ದಾರೆ.
ದರ್ಶನ್ ಪತ್ನಿಯನ್ನ ನಿಂದಿಸಿದ ಅನಾಮಧೇಯ ವ್ಯಕ್ತಿ: ದೂರು ದಾಖಲು
ನಾನ್ಯಾಕೆ ಭಯ ಪಡಲಿ.?
''ಅಸಭ್ಯ ಸಂದೇಶ ಕಳುಹಿಸುವವರಿಗೆ ಭಯ ಇಲ್ಲದೇ ಇರುವಾಗ, ಅದನ್ನ ಬಹಿರಂಗ ಪಡಿಸಲು ನಾನ್ಯಾಕೆ ಭಯ ಪಡಲಿ.? ಆ ಯುವಕನಿಗೆ ಇನ್ನೂ 17 ವರ್ಷ. ಪೊಲೀಸ್ ಕಂಪ್ಲೇಂಟ್ ಕೊಡದಂತೆ ಆತನ ತಂದೆ-ತಾಯಿ ಮನವಿ ಮಾಡಿದ್ರಿಂದ, ಸುಮ್ಮನಾಗಿದ್ದೀನಿ'' ಎಂದು ಇದೇ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸಂದರ್ಶನವೊಂದರಲ್ಲಿ ಗಾಯತ್ರಿ ಅರುಣ್ ಹೇಳಿದ್ದರು.
ಅಶ್ಲೀಲ ಮೆಸೇಜ್ ಕಳುಹಿಸಿ ಭಾವನಾ ಬೆಳಗೆರೆಗೆ ಫೇಸ್ ಬುಕ್ ನಲ್ಲಿ ಕಿರುಕುಳ
ಯಾರೀ ಗಾಯತ್ರಿ ಅರುಣ್.?
ಮಲಯಾಳಂ ನ 'ಪರಸ್ಪರಂ' ಧಾರಾವಾಹಿಯಲ್ಲಿ ದೀಪ್ತಿ ಆಗಿ ಅಭಿನಯಿಸುವ ಮೂಲಕ ಗಾಯತ್ರಿ ಅರುಣ್ ಜನಪ್ರಿಯತೆ ಗಳಿಸಿದರು. ಇದೇ ಪಾತ್ರದಿಂದ ಗಾಯತ್ರಿ ಅರುಣ್ ಗೆ ಪ್ರಶಸ್ತಿ ಕೂಡ ಲಭಿಸಿತು.