Don't Miss!
- News ದಾವಣಗೆರೆ: ಭದ್ರಾ ಕಾಲುವೆಯಲ್ಲಿನ ಅನಧಿಕೃತ ಪಂಪ್ಸೆಟ್ಗಳ ತೆರವಿಗೆ ಜಿಲ್ಲಾಡಳಿತ ತೆಗೆದುಕೊಂಡ ಕ್ರಮಗಳೇನು?-ಮಾಹಿತಿ, ವಿವರ
- Lifestyle 11 ರೀತಿಯ ವಾಹನಗಳ ಲೈಸೆನ್ಸ್ ಹೊಂದಿರುವ ಮಹಿಳೆ..! ಮಣಿ ಅಮ್ಮ ಎಂಬ ಧೀರ ಮಹಿಳೆ ಕಥೆ
- Sports ಮತ್ತೆ ಪಾಕಿಸ್ತಾನ ಕ್ರಿಕೆಟ್ ತಂಡದ ಚುಕ್ಕಾಣಿ ಬಾಬರ್ ಅಜಮ್ ಕೈಗೆ?
- Finance ಐಟಿಆರ್ ಸಲ್ಲಿಸಿದ್ದರೂ, ಆದಾಯ ತೆರಿಗೆ ಇಲಾಖೆಯಿಂದ ನಿಮಗೆ ಇಮೇಲ್ ಬಂದಿದೆಯೇ?
- Automobiles ಜಿಮ್ನಿಗೆ ಸೆಡ್ಡು ಹೊಡೆಯಲು ಎಂಜಿ ಮಾಸ್ಟರ್ ಪ್ಲಾನ್: ಸದ್ಯದಲ್ಲೇ ಕಾಮೆಟ್ ಆಧರಿಸಿ 5 ಡೋರ್ ಕಾರು ಭಾರತಕ್ಕೆ?
- Technology ರೆಡ್ಮಿಯ ಈ ಮೊಬೈಲ್ಗೆ ಇರುವ ಬಿಗ್ ಆಫರ್ ತಿಳಿದ್ರೆ, ಖಂಡಿತಾ ವಾವ್ ಅಂತೀರಾ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕಿರುಗೂರಿನ ಗಯ್ಯಾಳಿ'ಯಾಗಿ ಮಾನಸ ಜೋಶಿ
ಸುಮನಾ ಕಿತ್ತೂರು ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕಿರುಗೂರಿನ ಗಯ್ಯಾಳಿಗಳು ಚಿತ್ರಕ್ಕೆ ಹೊಸ ಮುಖ ಸೇರ್ಪಡೆಯಾಗಿದೆ. ಅವರು ಬೇರಾರು ಅಲ್ಲ ಶ್ರೀನಗರ ಕಿಟ್ಟಿ ಜೊತೆಗೆ 'ಬಹುಪರಾಕ್' ಚಿತ್ರದಲ್ಲಿ ಅಭಿನಯಿಸಿದ್ದ ಮಾನಸ ಜೋಶಿ ಮುಖ್ಯ ಪಾತ್ರವನ್ನು ಪೋಷಿಸಲಿದ್ದಾರೆ.
ಈಗಾಗಲೆ ಚಿತ್ರದಲ್ಲಿ ಸಿಂಪಲ್ ಬೆಡಗಿ ಶ್ವೇತಾ ಶ್ರೀವಾತ್ಸವ್, ಅಚ್ಯುತ ಕುಮಾರ್, ಕಿಶೋರ್, ಶರತ್ ಲೋಹಿತಾಶ್ವ, ಸುಕೃತಾ ವಾಗ್ಲೆ ಸೇರಿದಂತೆ ಹಲವಾರು ಕಲಾವಿದರಿದ್ದಾರೆ. ಇದೀಗ ಹೊಸದಾಗಿ ಮಾಸನ ಜೋಶಿ ಅವರನ್ನೂ ಆಯ್ಕೆ ಮಾಡಿದ್ದಾರೆ ಸುಮನಾ. [ಡಾಕ್ಯುಮೆಂಟರಿ ಎನಿಸದ ಡೈನಮೈಟ್ 'ಎದೆಗಾರಿಕೆ' ಚಿತ್ರವಿಮರ್ಶೆ]
ಸದ್ಯಕ್ಕೆ ಚಿತ್ರದ ತಾರಾಗಣದ ಆಯ್ಕೆ ಬಹುತೇಕ ಮುಗಿದಿದ್ದು ಮೇ ತಿಂಗಳಲ್ಲಿ ಕಿರುಗೂರಿನ ಗಯ್ಯಾಳಿಗಳು ಚಿತ್ರೀಕರಣ ಶುರುವಾಗಲಿದೆ. ಮನೋಹರ್ ಜೋಶಿ ಅವರ ಛಾಯಾಗ್ರಹಣ ಇರುವ ಈ ಚಿತ್ರಕ್ಕೆ 'ಲೂಸಿಯಾ' ಖ್ಯಾತಿಯ, ಮೈಸೂರು ಮೂಲದ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಸಂಯೋಜನೆ ಇದೆ.
ಕನ್ನಡದ ಪ್ರಬುದ್ಧ ಲೇಖಕ, ಚಿಂತಕ ದಿವಂಗತ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ನೀಳ್ಗತೆ 'ಕಿರಗೂರಿನ ಗಯ್ಯಾಳಿಗಳು' ನಾಟಕ ರೂಪ ಪಡೆದು ಜನಪ್ರಿಯಗೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಈ ಕಿರುಕೃತಿಯನ್ನು ನಿರ್ದೇಶಕಿ ಸುಮನಾ ಕಿತ್ತೂರ್ ಅವರು ಬೆಳ್ಳಿತೆರೆಗೆ ತರುತ್ತಿದ್ದಾರೆ.
ದುನಿಯಾ ಸೂರಿ ನಿರ್ಮಾಣದಲ್ಲಿ ಹೊರ ಬರುತ್ತಿರುವ ಈ ಚಿತ್ರಕ್ಕೆ ಪತ್ರಕರ್ತ ಅಗ್ನಿ ಶ್ರೀಧರ್ ಅವರು ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುತ್ತಿದ್ದಾರೆ. ಸಿಂಪಲ್ಲಾಗೊಂದ್ ಲವ್ ಸ್ಟೋರಿ ಖ್ಯಾತಿಯ ಶ್ವೇತಾ ಶ್ರೀವಾಸ್ತವ್ ಹಾಗೂ ಅಚ್ಯುತ್ ರಾವ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎದೆಗಾರಿಕೆ ಚಿತ್ರದ ನಂತರ ಸುಮನಾ ಅವರು ಈ ಚಿತ್ರ ನಿರ್ದೇಶಿಸುತ್ತಿದ್ದು, ಸಹಜವಾಗಿ ಎಲ್ಲರಿಗೂ ಕುತೂಹಲ ಮೂಡಿಸಿದೆ. (ಏಜೆನ್ಸೀಸ್)