ಎಸ್ ನಾರಾಯಣ್ ಗೆ 40 ಲಕ್ಷ ರೂಪಾಯಿ ಮೋಸ ಮಾಡಿದ ಜೋತಿಷಿ!
Recommended Video

ಖ್ಯಾತ ಚಲನಚಿತ್ರ ನಿರ್ದೇಶಕ ಎಸ್ ನಾರಾಯಣ್ ಈಗ ಮೋಸ ಹೋಗಿದ್ದಾರೆ. ಕಡಿಮೆ ಬಡ್ಡಿ ದರಕ್ಕೆ ಆಸೆ ಪಟ್ಟು 40 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಈ ಪ್ರಕರಣದ ಒಬ್ಬ ಆರೋಪಿ ಕೂಡ ಈಗ ಸಿಕ್ಕಿ ಬಿದ್ದಿದ್ದಾನೆ.
2016ರಲ್ಲಿ ಎನ್ ನಾರಾಯಣ್ ಅವರ ಒಂದು ಪ್ರಾಜೆಕ್ಟ್ ಗೆ ಹೆಚ್ಚು ಹಣದ ಅಗತ್ಯ ಇತಂತ್ತೆ. ಈ ಕಾರಣದಿಂದ ಸಾಲ ಪಡೆಯಲು ಬ್ಯಾಂಕ್ ಗಳಿಗೆ ಅಲೆದಾಡುತ್ತಿದ್ದರಂತೆ. ಒಮ್ಮೆ ಬ್ಯಾಂಕ್ ನಲ್ಲಿ ಪರಿಚಯ ಆದ ಒಬ್ಬ ವ್ಯಕ್ತಿ ತಮಿಳುನಾಡಿನಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸುತ್ತೇನೆ ಎಂದು ನಂಬಿಸಿದನಂತೆ.
ತಮಿಳುನಾಡಿನ ಮಂದಾರ ಮೂರ್ತಿ ಎಂಬ ಜೋತಿಷಿ ಕಡೆಯಿಂದ ಕಡಿಮೆ ಬಡ್ಡಿಗೆ ಸಾಲ ಕೊಡಿಸುತ್ತೇನೆ ಎಂದು ಆ ವ್ಯಕ್ತಿ ಮಾತು ಕೊಟ್ಟಿದ್ದ. ಬಳಿಕ ಎಸ್ ನಾರಾಯಣ್ 40 ಲಕ್ಷ ಹಣವನ್ನು ಕಮಿಷನ್ ರೂಪದಲ್ಲಿ ಅವನಿಗೆ ನೀಡಿದ್ದರು. ಹಣ ಪಡೆದ ನಂತರ ಆತ ಫೇಕ್ ಡಿಡಿ ನೀಡಿ ಯಾಮಾರಿಸಿದ್ದ.

ಈ ವಿಷಯಕ್ಕೆ ಸಂಬಂಧಿಸಿದಂತೆ 2017 ರಲ್ಲಿ ಎಸ್ ನಾರಾಯಣ್ ಪೊಲೀಸರಿಗೆ ದೂರು ನೀಡಿದ್ದರು. ಯಶವಂತಪುರ ಪೊಲೀಸರು ಇದೀಗ ಈ ಪ್ರಕರಣದ ಒಬ್ಬ ಆರೋಪಿಯನ್ನು ಬಂದಿಸಿದ್ದಾರೆ. ಮುಖ್ಯ ಆರೋಪಿ ಮಂದಾರ ಮೂರ್ತಿಯ ಹುಡುಕಾಟದಲ್ಲಿ ಪೋಲೀಸರು ತೊಡಗಿದ್ದಾರೆ.


Click it and Unblock the Notifications











