twitter
    For Quick Alerts
    ALLOW NOTIFICATIONS  
    For Daily Alerts

    ಮಾತು ತಪ್ಪಿದರೂ, ತಡವಾಗಿ ಕರ್ತವ್ಯ ನಿರ್ವಹಿಸಿದ ಅಂಬರೀಶ್.!

    By Harshitha
    |

    ಮಂಡ್ಯ ಕ್ಷೇತ್ರದ ಶಾಸಕನಾಗಿ, ಜನ ಪ್ರತಿನಿಧಿಯಾಗಿ ಅಂಬರೀಶ್ ಗೆ ಕಡೆಗೂ ತಮ್ಮ ಕರ್ತವ್ಯದ ನೆನಪಾಗಿದೆ.

    ಕಾವೇರಿ ನದಿ ನೀರು ಹಂಚಿಕೆ ವಿವಾದದ ಕುರಿತು ಇಂದು ನಡೆಯುತ್ತಿರುವ ವಿಶೇಷ ವಿಧಾನ ಮಂಡಲ ಅಧಿವೇಶನದ ಅರ್ಧ ದಿನ ಮುಗಿದ ಮೇಲೆ ಸದನದ ಒಳಗೆ ಅಂಬರೀಶ್ ಕಾಲಿಟ್ಟಿದ್ದಾರೆ.

    ಭೋಜನ ವಿರಾಮದ ಬಳಿಕ ವಿಧಾನಸಭೆ ಕಲಾಪ ಇಂದು (ಅಕ್ಟೋಬರ್ 3) ಸಂಜೆ 4.30ರ ಸುಮಾರಿಗೆ ಆರಂಭವಾಯ್ತು. ಈ ವೇಳೆ ಸದನದ ಒಳಗೆ ಅಂಬರೀಶ್ ಪ್ರತ್ಯಕ್ಷವಾದರು. ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತುಗಳನ್ನ ಅಂಬರೀಶ್ ಆಲಿಸಿದರು.

    mandya-mla-ambareesh-makes-late-entry-to-special-legislative-session

    ಸೆಪ್ಟೆಂಬರ್ 28 ರಂದು ಅಮೇರಿಕಾದಿಂದ ಬೆಂಗಳೂರಿಗೆ ವಾಪಸ್ ಆಗಿ ಪ್ರೆಸ್ ಮೀಟ್ ನಡೆಸಿದ ಬಳಿಕ ಮಾಧ್ಯಮಗಳ ಮುಂದೆ ಅಂಬರೀಶ್ ಕಾಣಿಸಿಕೊಂಡಿರುವುದು ಈಗಲೇ.! ಸೆಪ್ಟೆಂಬರ್ 30 ರಂದು ಮಂಡ್ಯಗೆ ಭೇಟಿ ನೀಡುತ್ತೇನೆ ಅಂತ ಹೇಳಿದ್ದರೂ, ಅಂಬರೀಶ್ ಮಾತು ತಪ್ಪಿದ್ದಾರೆ. ಇದುವರೆಗೂ ಮಂಡ್ಯದತ್ತ ಅಂಬರೀಶ್ ಮುಖ ಮಾಡಿಲ್ಲ. [ಮಂಡ್ಯ ಶಾಸಕ ಅಂಬರೀಶ್ ಗೆ ಇಷ್ಟೊಂದು ಅಸಡ್ಡೆ ಯಾಕೆ.?]

    ಕಾವೇರಿ ನೀರು ಕುರಿತು ಕಳೆದ ಬಾರಿ ವಿಶೇಷ ವಿಧಾನ ಮಂಡಲ ಅಧಿವೇಶನ ನಡೆದಾಗ ಅಂಬರೀಶ್ ಗೈರಾಗಿದ್ದರು. ಇಂದು ಬೆಳಗ್ಗೆ ಕೂಡ ವಿಧಾನ ಮಂಡಲ ಅಧಿವೇಶನದಲ್ಲಿ ಅಂಬರೀಶ್ ಪಾಲ್ಗೊಳ್ಳಲಿಲ್ಲ. ಈ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆ, ಭೋಜನ ವಿರಾಮದ ನಂತರ ಆರಂಭವಾದ ವಿಧಾನ ಸಭೆ ಕಲಾಪಕ್ಕೆ ಅಂಬರೀಶ್ ಹಾಜರ್ ಆದರು. [ಇಷ್ಟುದಿನ ಅಮೇರಿಕಾದಲ್ಲಿ ಅಂಬಿ ಮೋಜು ಮಾಡ್ಲಿಲ್ಲ, ಮತ್ತೇನ್ ಮಾಡ್ತಿದ್ರು?]

    mandya-mla-ambareesh-makes-late-entry-to-special-legislative-session

    ತುಂಬಾ ತಡವಾಗಿ ತಮ್ಮ ಕರ್ತವ್ಯವನ್ನ ನಿರ್ವಹಿಸುತ್ತಿರುವ ಅಂಬರೀಶ್, ಮಂಡ್ಯಗೆ ಭೇಟಿ ಕೊಟ್ಟು ರೈತರನ್ನ ಸಂತೈಸುವುದು ಇನ್ಯಾವಾಗ್ಲೋ.?

    English summary
    Congress Politician, Mandya MLA, Kannada Actor, Rebel Star Ambareesh has made late entry (after lunch break) to the special legislative session in the Karnataka Assembly held today (October 3rd) over Cauvery Water Sharing Dispute.
    Monday, October 3, 2016, 17:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X