'ಕುರುಕ್ಷೇತ್ರ' ಅದ್ದೂರಿ ಸ್ವಾಗತಕ್ಕೆ ಮಂಡ್ಯದಲ್ಲಿ ಸಕಲ ಸಿದ್ಧತೆ
Recommended Video
'ಕುರುಕ್ಷೇತ್ರ' ಸಿನಿಮಾ ನಾಳೆ ದೇಶಾದ್ಯಂತ ಬಿಡುಗಡೆ ಆಗುತ್ತಿದೆ. ಈ ಅದ್ದೂರಿ ಸಿನಿಮಾವನ್ನು ಅಷ್ಟೇ ಅದ್ದೂರಿಯಾಗಿ ಸ್ವಾಗತ ಮಾಡಲು ಮಂಡ್ಯ ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.
ಮಂಡ್ಯ ಚುನಾವಣಾ ಸಮಯದಲ್ಲಿ ದರ್ಶನ್ ಹಾಗೂ ಯಶ್ ರನ್ನು ಜೋಡೆತ್ತು ಎಂದು ಕರೆಯಲಾಗಿತ್ತು. ಚುನಾವಣಾ ವೇಳೆ ಈ ಇಬ್ಬರೂ ನಟರು ಮಂಡ್ಯ ಜನರಿಗೆ ಮತ್ತಷ್ಟು ಹತ್ತಿರ ಆಗಿದ್ದರು. ಆ ಕಾರಣ 50 ಜೋಡೆತ್ತುಗಳ ಮೂಲಕ ನಾಳೆ ಸಿನಿಮಾವನ್ನು ಬರಮಾಡಿಕೊಳ್ಳಲಾಗುತ್ತಿದೆ.
ಇದರ ಜೊತೆಗೆ 50 ಆಟೋ ಹಾಗೂ 50 ಬೈಕ್ ರಾಲಿ ನಡೆಸಲಾಗುತ್ತಿದೆ. ಜೊತೆಗೆ 50 ಬಗೆಯ ಜಾನಪದ ಕಲಾವಿದರ ತಂಡದಿಂದ ಮೆರವಣಿಗೆ ನಡೆಯುತ್ತಿದೆ. 'ಕುರುಕ್ಷೇತ್ರ' ದರ್ಶನ್ ಅವರ 50 ಸಿನಿಮಾವಾಗಿದ್ದು, 50 ಜೋಡೆತ್ತು, 50 ಆಟೋ, 50 ಬೈಕ್ ಮತ್ತು 50 ಜಾನಪದ ಕಲಾವಿದರನ್ನು ತಯಾರು ಮಾಡಲಾಗಿದೆ.

ಇಂಡ್ವಾಳು ಸಚ್ಚಿದಾನಂದ ನೇತೃತ್ವದಲ್ಲಿ ಈ ಎಲ್ಲ ಕಾರ್ಯಕ್ರಮಗಳು ನಡೆಯುತ್ತಿದೆ. ಚುನಾವಣೆಯಲ್ಲಿ ಸುಮಲತಾರನ್ನು ಗೆಲ್ಲಿಸಿದ ಜನ ಈಗ ದರ್ಶನ್ ಸಿನಿಮಾವನ್ನೂ ಗೆಲ್ಲಿಸಲು ಮುಂದಾಗಿದ್ದಾರೆ.
ಮಂಡ್ಯದ ಮಹಾವೀರ ಹಾಗೂ ಸಂಜಯ್ ಚಿತ್ರಮಂದಿರಗಳಲ್ಲಿ 'ಕುರುಕ್ಷೇತ್ರ' ಪ್ರದರ್ಶನ ಆಗುತ್ತಿದೆ. ಬೆಂಗಳೂರಿನಲ್ಲಿ ಮಧ್ಯ ರಾತ್ರಿಯಿಂದಲೇ ಚಿತ್ರದ ಪ್ರದರ್ಶನ ಶುರು ಆಗುತ್ತಿದೆ.


Click it and Unblock the Notifications











