Don't Miss!
- News ಕಾಂಗ್ರೆಸ್ನಿಂದಲೇ 'ನೇಹಾ ಕೊಲೆ' ತನಿಖೆ ದಾರಿ ತಪ್ಪಿಸಲು ಯತ್ನ: ತಂದೆಯನ್ನೇ ಕೊಲ್ಲಲು ಹೋಗಿದ್ದ ಫಯಾಜ್: ನಿರಂಜನ್ ಹಿರೇಮಠ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂತಿಮ ದರ್ಶನದ ವೇಳೆ ಕಾಡುತ್ತಿರುವ ಸೆಲ್ಫಿ ಗೀಳು, ರಮ್ಯಾ ಮೇಡಂ ಗೈರು.!
ತಮ್ಮ ನಾಯಕ ಹಾಗೂ ನೆಚ್ಚಿನ ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತಿಮ ದರ್ಶನ ಪಡೆಯಲು ಜನಸಾಗರವೇ ಹರಿದು ಬರುತ್ತಿದೆ. ಈ ನಡುವೆ ಸೆಲ್ಪಿ ಪ್ರಿಯರ ಸೆಲ್ಪಿ ಹುಚ್ಚಾಟದಿಂದ ಇತರ ಅಭಿಮಾನಿಗಳಿಗೆ ಇರುಸುಮುರುಸು ಉಂಟಾಗಿದೆ.
ಹೌದು, ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತಿಮ ದರ್ಶನ ಪಡೆಯಲು ಅಭಿಮಾನಿಗಳು ಸೇರಿದಂತೆ ಇತರ ಗಣ್ಯರು ಸ್ಟೇಡಿಯಂನತ್ತ ಧಾವಿಸುತ್ತಿದ್ದಾರೆ. ನೂಕು ನುಗ್ಗಲಿನಲ್ಲಿಯೇ ಅಂಬಿ ಪಾರ್ಥಿವ ಶರೀರ ಸೆರೆಯಾಗುವ ಹಾಗೆ ಅಭಿಮಾನಿಗಳು ಸೆಲ್ಪಿ ತೆಗೆಯಲು ಮುಂದಾಗಿದ್ದಾರೆ.
ಇದರಿಂದ ಇತರ ಅಭಿಮಾನಿಗಳಿಗೆ ಕಿರಿಕಿರಿ ತಂದಿದ್ದು, ಇದನ್ನು ಗಮನಿಸಿದ ಸಚಿವ ಸಿ.ಹೆಚ್.ಪುಟ್ಟರಾಜು ಅವರು ಸೆಲ್ಪಿ ತೆಗೆಯಬಾರದೆಂದು ಅಭಿಮಾನಿಗಳಲ್ಲಿ ಮನವಿ ಮಾಡಿದ ಘಟನೆ ಸಹ ನಡೆಯಿತು.
ಅಲ್ಲದೇ, ಅಂತಿಮ ದರ್ಶನ ಪಡೆಯಲು ರಮ್ಯಾ ಬಾರದೇ ಇರುವುದಕ್ಕೂ ನಾಗರೀಕರು ಹಿಡಿಶಾಪ ಹಾಕಿದರು. ಮುಂದೆ ಓದಿರಿ...
ರಮ್ಯಾ ಗೈರಿಗೆ ನಾಗರೀಕರ ಹಿಡಿಶಾಪ
ಮಂಡ್ಯದ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ರಮ್ಯಾ ಮಂಡ್ಯ ಮರೆತಿದ್ದಾರೆ ಎನ್ನುವ ಆರೋಪ ಸದ್ಯ ನಿಜವಾದಂತೆ ತೋರುತ್ತಿದೆ. ಕಾರಣ ಮಂಡ್ಯ ರಾಜಕೀಯಕ್ಕೆ ರಮ್ಯಾರನ್ನು ಪರಿಚಯಿಸಿ ಮೊದಲ ಬಾರಿಗೆ ಸಂಸದಳಾಗಲು ಸಹಕರಿಸಿದ ಅಂಬರೀಶ್ ರವರ ಅಂತಿಮ ದರ್ಶನಕ್ಕೂ ಸಹ ನಟಿ ರಮ್ಯಾ ಬಾರದಿರುವುದು ಬೇಸರ ತರಿಸಿದೆ.
'ಮಂಡ್ಯದ ಗಂಡೇ' ಆದರೂ ಅಂಬರೀಶ್ 'ಮೈಸೂರು ಜಾಣ'.! ಹೇಗೆ ಅಂತೀರಾ.?
ಟ್ವೀಟ್ ಮಾಡಿದರೆ ಸಾಲದು
''ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವೇ ದುಃಖಭರಿತ ತೋರಿಸಿದರೇ ಸಾಲುವುದಿಲ್ಲ. ಬಂದು ಅಂತಿಮ ದರ್ಶನ ಏಕೆ ಪಡೆದಿಲ್ಲ'' ಎಂದು ಮಂಡ್ಯದ ಜನರು ರಮ್ಯಾಗೆ ಹಿಡಿಶಾಪ ಸಹ ಹಾಕುತ್ತಿದ್ದಾರೆ.
ಜಲೀಲ ಟು ಅಂಬಿ: ರೆಬೆಲ್ ಆಗಿ ಬಾಳಿದ 'ಪಾಳೇಗಾರ'ನ ಕಥೆ
|
ರಮ್ಯಾ ಮಾಡಿದ್ದ ಟ್ವೀಟ್ ಏನು.?
''ಅಂಬರೀಶ್ ಅಂಕಲ್ ತೀರಿಕೊಂಡ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ಬೇಸರ ಆಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ನಾನು ಯಾವಾಗಲೂ ಅವರನ್ನು ನೆನಪಿಸಿಕೊಳ್ಳುವೆ'' ಎಂದು ರಮ್ಯಾ ಟ್ವೀಟ್ ಮಾಡಿದ್ದರು.
ಅಂಬಿ ನಿಧನಕ್ಕೆ ಮುದ್ದಿನ ಶ್ವಾನ 'ಕನ್ವರ್ ಲಾಲ್' ಮೂಕ ರೋದನ
ಇಂದು ಅಂತಿಮ ಸಂಸ್ಕಾರ
ಇವತ್ತು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅಂತ್ಯ ಸಂಸ್ಕಾರ ನಡೆಯಲಿದೆ. ಗೌಡ ಸಂಪ್ರದಾಯದಂತೆ ಅಂತಿಮ ವಿಧಿ-ವಿಧಾನಗಳು ನೆರವೇರಲಿದೆ.
ಅದ್ಯಾವ ಕೆಟ್ಟ ಘಳಿಗೆಯಲ್ಲಿ 'ಇದೇ ನನ್ನ ಕೊನೆ ಸಿನಿಮಾ' ಅಂತ ಅಂಬಿ ಹೇಳಿದ್ರೋ.!