twitter
    For Quick Alerts
    ALLOW NOTIFICATIONS  
    For Daily Alerts

    ಅಂತಿಮ ದರ್ಶನದ ವೇಳೆ ಕಾಡುತ್ತಿರುವ ಸೆಲ್ಫಿ ಗೀಳು, ರಮ್ಯಾ ಮೇಡಂ ಗೈರು.!

    By ಯಶಸ್ವಿನಿ.ಎಂ.ಕೆ
    |

    ತಮ್ಮ ನಾಯಕ ಹಾಗೂ ನೆಚ್ಚಿನ ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತಿಮ ದರ್ಶನ ಪಡೆಯಲು ಜನಸಾಗರವೇ ಹರಿದು ಬರುತ್ತಿದೆ. ಈ ನಡುವೆ ಸೆಲ್ಪಿ ಪ್ರಿಯರ ಸೆಲ್ಪಿ ಹುಚ್ಚಾಟದಿಂದ ಇತರ ಅಭಿಮಾನಿಗಳಿಗೆ ಇರುಸುಮುರುಸು ಉಂಟಾಗಿದೆ.

    ಹೌದು, ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತಿಮ ದರ್ಶನ ಪಡೆಯಲು ಅಭಿಮಾನಿಗಳು ಸೇರಿದಂತೆ ಇತರ ಗಣ್ಯರು ಸ್ಟೇಡಿಯಂನತ್ತ ಧಾವಿಸುತ್ತಿದ್ದಾರೆ. ನೂಕು ನುಗ್ಗಲಿನಲ್ಲಿಯೇ ಅಂಬಿ ಪಾರ್ಥಿವ ಶರೀರ ಸೆರೆಯಾಗುವ ಹಾಗೆ ಅಭಿಮಾನಿಗಳು ಸೆಲ್ಪಿ ತೆಗೆಯಲು ಮುಂದಾಗಿದ್ದಾರೆ.

    ಇದರಿಂದ ಇತರ ಅಭಿಮಾನಿಗಳಿಗೆ ಕಿರಿಕಿರಿ ತಂದಿದ್ದು, ಇದನ್ನು ಗಮನಿಸಿದ ಸಚಿವ ಸಿ.ಹೆಚ್.ಪುಟ್ಟರಾಜು ಅವರು ಸೆಲ್ಪಿ ತೆಗೆಯಬಾರದೆಂದು ಅಭಿಮಾನಿಗಳಲ್ಲಿ ಮನವಿ ಮಾಡಿದ ಘಟನೆ ಸಹ ನಡೆಯಿತು.

    ಅಲ್ಲದೇ, ಅಂತಿಮ ದರ್ಶನ ಪಡೆಯಲು ರಮ್ಯಾ ಬಾರದೇ ಇರುವುದಕ್ಕೂ ನಾಗರೀಕರು ಹಿಡಿಶಾಪ ಹಾಕಿದರು. ಮುಂದೆ ಓದಿರಿ...

    ರಮ್ಯಾ ಗೈರಿಗೆ ನಾಗರೀಕರ ಹಿಡಿಶಾಪ

    ರಮ್ಯಾ ಗೈರಿಗೆ ನಾಗರೀಕರ ಹಿಡಿಶಾಪ

    ಮಂಡ್ಯದ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ರಮ್ಯಾ ಮಂಡ್ಯ ಮರೆತಿದ್ದಾರೆ ಎನ್ನುವ ಆರೋಪ ಸದ್ಯ ನಿಜವಾದಂತೆ ತೋರುತ್ತಿದೆ. ಕಾರಣ ಮಂಡ್ಯ ರಾಜಕೀಯಕ್ಕೆ ರಮ್ಯಾರನ್ನು ಪರಿಚಯಿಸಿ ಮೊದಲ ಬಾರಿಗೆ ಸಂಸದಳಾಗಲು ಸಹಕರಿಸಿದ ಅಂಬರೀಶ್ ರವರ ಅಂತಿಮ ದರ್ಶನಕ್ಕೂ ಸಹ ನಟಿ ರಮ್ಯಾ ಬಾರದಿರುವುದು ಬೇಸರ ತರಿಸಿದೆ.

    'ಮಂಡ್ಯದ ಗಂಡೇ' ಆದರೂ ಅಂಬರೀಶ್ 'ಮೈಸೂರು ಜಾಣ'.! ಹೇಗೆ ಅಂತೀರಾ.?'ಮಂಡ್ಯದ ಗಂಡೇ' ಆದರೂ ಅಂಬರೀಶ್ 'ಮೈಸೂರು ಜಾಣ'.! ಹೇಗೆ ಅಂತೀರಾ.?

    ಟ್ವೀಟ್ ಮಾಡಿದರೆ ಸಾಲದು

    ಟ್ವೀಟ್ ಮಾಡಿದರೆ ಸಾಲದು

    ''ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವೇ ದುಃಖಭರಿತ ತೋರಿಸಿದರೇ ಸಾಲುವುದಿಲ್ಲ. ಬಂದು ಅಂತಿಮ ದರ್ಶನ ಏಕೆ ಪಡೆದಿಲ್ಲ'' ಎಂದು ಮಂಡ್ಯದ ಜನರು ರಮ್ಯಾಗೆ ಹಿಡಿಶಾಪ ಸಹ ಹಾಕುತ್ತಿದ್ದಾರೆ.

    ಜಲೀಲ ಟು ಅಂಬಿ: ರೆಬೆಲ್ ಆಗಿ ಬಾಳಿದ 'ಪಾಳೇಗಾರ'ನ ಕಥೆ ಜಲೀಲ ಟು ಅಂಬಿ: ರೆಬೆಲ್ ಆಗಿ ಬಾಳಿದ 'ಪಾಳೇಗಾರ'ನ ಕಥೆ

    ರಮ್ಯಾ ಮಾಡಿದ್ದ ಟ್ವೀಟ್ ಏನು.?

    ''ಅಂಬರೀಶ್ ಅಂಕಲ್ ತೀರಿಕೊಂಡ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ಬೇಸರ ಆಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ನಾನು ಯಾವಾಗಲೂ ಅವರನ್ನು ನೆನಪಿಸಿಕೊಳ್ಳುವೆ'' ಎಂದು ರಮ್ಯಾ ಟ್ವೀಟ್ ಮಾಡಿದ್ದರು.

    ಅಂಬಿ ನಿಧನಕ್ಕೆ ಮುದ್ದಿನ ಶ್ವಾನ 'ಕನ್ವರ್ ಲಾಲ್' ಮೂಕ ರೋದನಅಂಬಿ ನಿಧನಕ್ಕೆ ಮುದ್ದಿನ ಶ್ವಾನ 'ಕನ್ವರ್ ಲಾಲ್' ಮೂಕ ರೋದನ

    ಇಂದು ಅಂತಿಮ ಸಂಸ್ಕಾರ

    ಇಂದು ಅಂತಿಮ ಸಂಸ್ಕಾರ

    ಇವತ್ತು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅಂತ್ಯ ಸಂಸ್ಕಾರ ನಡೆಯಲಿದೆ. ಗೌಡ ಸಂಪ್ರದಾಯದಂತೆ ಅಂತಿಮ ವಿಧಿ-ವಿಧಾನಗಳು ನೆರವೇರಲಿದೆ.

    ಅದ್ಯಾವ ಕೆಟ್ಟ ಘಳಿಗೆಯಲ್ಲಿ 'ಇದೇ ನನ್ನ ಕೊನೆ ಸಿನಿಮಾ' ಅಂತ ಅಂಬಿ ಹೇಳಿದ್ರೋ.!ಅದ್ಯಾವ ಕೆಟ್ಟ ಘಳಿಗೆಯಲ್ಲಿ 'ಇದೇ ನನ್ನ ಕೊನೆ ಸಿನಿಮಾ' ಅಂತ ಅಂಬಿ ಹೇಳಿದ್ರೋ.!

    English summary
    Mandya people are annoyed with Kannada Actress, Congress Politician Ramya for not paying last respect to Ambareesh.
    Monday, November 26, 2018, 9:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X