Don't Miss!
- Automobiles Bajaj: ಯುವಕರ ಮನಗೆದ್ದಿರುವ ಪಲ್ಸರ್ ಬೈಕ್ಗಳಿವು, ಬೆಲೆ ರೂ.2 ಲಕ್ಷದೊಳಗೆ.. 50 ಕಿ.ಮೀಗಿಂತ ಹೆಚ್ಚಿನ ಮೈಲೇಜ್
- Finance ಬೆಂಗಳೂರಿನ ರಿಯಲ್ ಎಸ್ಟೇಟ್ ಸಂಸ್ಥೆ ಕಾಂಕಾರ್ಡ್ನಿಂದ 100 ಕೋಟಿಗೆ 4.5 ಎಕರೆ ಭೂಮಿ ಸ್ವಾಧೀನ
- Technology Poco: ಭಾರತದಲ್ಲಿ ಶೀಘ್ರವೇ ಲಾಂಚ್ ಆಗಲಿದೆ ಪೊಕೊದ ಈ ಫೋನ್; ಫೀಚರ್ಸ್ ಲೀಕ್
- News Bengaluru-Mysuru Expressway Toll fee: ಏಪ್ರಿಲ್ 1ರಿಂದ ಹೆದ್ದಾರಿ ಟೋಲ್ ಶುಲ್ಕ ಹೆಚ್ಚಳ.!-ಯಾವ್ಯಾವ ವಾಹನಗಳಿಗೆ ಎಷ್ಟು?
- Sports Hardik Pandya: ಸ್ವತಃ ಮುಂಬೈ ಇಂಡಿಯನ್ಸ್ ಫ್ಯಾನ್ಸ್ನಿಂದಲೂ ಹಾರ್ದಿಕ್ ಪಾಂಡ್ಯ ಟ್ರೋಲ್!
- Lifestyle ಒಂದು ಸೌತೆಕಾಯಿ ಹಾಕಿ ಮಾಡಿ ಮೊಸರು ಹುಳಿ..! ಸಿಕ್ಕಾಪಟ್ಟೆ ರುಚಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಂಗಳೂರಿಗೆ ಬಂದ ರಚಿತಾ ರಾಮ್ಗೆ ಪೊಲೀಸರಿಂದ ಸನ್ಮಾನ
ನಟಿ ರಚಿತಾರಾಮ್ ಸದ್ಯ ಮಂಗಳೂರು ಪ್ರವಾಸದಲ್ಲಿದ್ದಾರೆ. ವೈಯುಕ್ತಿಕ ಕಾರ್ಯಕ್ರಮ ಹಿನ್ನಲೆಯಲ್ಲಿ ಮಂಗಳೂರಿಗೆ ಆಗಮಿಸಿದ್ದ ರಚಿತಾ ರಾಮ್, ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಆಹ್ವಾನದ ಮೇರೆಗೆ ಕಮೀಷನರ್ ಕಛೇರಿಗೆ ಭೇಟಿ ನೀಡಿದ್ದರು. ಮಂಗಳೂರು ನಗರ ಪೊಲೀಸರ ಜೊತೆ ಒಂದಷ್ಟು ಹೊತ್ತು ರಚಿತಾ ರಾಮ್ ಮಾತುಕತೆ ನಡೆಸಿದರು.
ಮಂಗಳೂರು ನಗರ ವ್ಯಾಪ್ತಿಯ ಎಸಿಪಿ,ಇನ್ಸ್ ಪೆಕ್ಟರ್, ಪಿಎಸ್ಐ ಹಾಗೂ ಕಮೀಷನರ್ ಕಛೇರಿಯ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದ ರಚಿತಾ, ಪೊಲೀಸರ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Recommended Video
ಈ ವೇಳೆ ಮಾತನಾಡಿದ ನಟಿ ರಚಿತಾ ರಾಮ್, ದೇವಸ್ಥಾನಗಳಿಗೆ ಭೇಟಿ ನೀಡುವ ಸಲುವಾಗಿ ಬಂದಿದ್ದೆ. ರಾತ್ರಿಯೇ ಬೆಂಗಳೂರಿಗೆ ವಾಪಸ್ ಹೋಗಬೇಕಿತ್ತು. ಆದರೆ ರಾತ್ರಿ ಡ್ರೈವಿಂಗ್ ಕಷ್ಟ ಅಂತಾ ಬೆಳಗ್ಗೆ ಹೋಗಲು ತೀರ್ಮಾನಿಸಿದ್ದೆವು. ಬೆಳಗ್ಗೆ ಪಬ್ಬಾಸ್ ಐಸ್ ಕ್ರೀಂ ತಿಂದು ಹೋಗೋದು ಅಂತಾ ಯೋಚನೆ ಮಾಡಿದೆವು. ಗಂಟಲು ನೋವು ಇದ್ರೂ ಐಸ್ ಕ್ರೀಂ ತಿನ್ನಬೇಕೆಂಬ ಆಸೆಯಿಂದ ಐಸ್ ಕ್ರೀಂ ತಿಂದೆ. ಈ ಸಂದರ್ಭದಲ್ಲಿ ಕಮೀಷನರ್ ಶಶಿಕುಮಾರ್ ಕುಮಾರ್ ಕರೆ ಮಾಡಿ, ಕಚೇರಿಗೆ ಬರಲು ಅಹ್ವಾನ ನೀಡಿದರು. ಕಮೀಷನರ್ ಕಛೇರಿ ಬಂದಮೇಲೆ ಹೊಸ ಫ್ಯಾಮಿಲಿಯನ್ನು ನೋಡಿದ ಅನುಭವಾಯಿತು ಅಂತಾ ರಚಿತಾ ರಾಮ್ ಖುಷಿ ಹಂಚಿಕೊಂಡಿದ್ದಾರೆ.
ಕೆಲಸದ ನಿಮಿತ್ತ ಹೊರಗೆ ಇದ್ದಿದ್ದರಿಂದ ನೇರ ಕಮೀಷನರ್ ಕಛೇರಿಗೆ ಬಂದೆ. ಮನೆಯಲ್ಲಿ ಹಾಕಿದ ಡ್ರೆಸ್ ನಲ್ಲೇ ಬಂದೆ ಅಂತಾ ರಚಿತಾ ಹೇಳಿದಾಗ ಕಮೀಷನರ್, ನೀವು ಹೇಗೆ ಬಂದರೂ ನೀವು ಅತೀ ಸುಂದರ ಅಂತಾ ಡೈಲಾಗ್ ಹೊಡೆದಿದ್ದಾರೆ. ಕಮೀಷನರ್ ಮಾತಿಗೆ ರಚಿತಾ ನಾಚಿ ನೀರಾಗಿದ್ದಾರೆ.
ಭಾಷಣ ವೇಳೆ ಪೊಲೀಸರ ಕಾರ್ಯವೈಖರಿ ಬಗ್ಗೆ ರಚಿತಾ ರಾಮ್ ಹಾಡಿಹೊಗಳಿದ್ದಾರೆ. ಎರಡು ಅತೀ ಕ್ಲಿಷ್ಠ ಸಂದರ್ಭದಲ್ಲಿ ಪೊಲೀಸರು ಅದ್ಭುತ ಕೆಲಸ ಮಾಡಿದ್ದಾರೆ. ಪೊಲೀಸರ ಬಗ್ಗೆ ಮಾತನಾಡೋವಾಗ ಮೈ ರೋಮಾಂಚನವಾಗುತ್ತದೆ. ಚಿಕ್ಕವಳಿರುವ ಶಾಲೆಯಲ್ಲಿ ಭವಿಷ್ಯದಲ್ಲಿ ಏನಾಗಬೇಕು ಅಂತಾ ಶಿಕ್ಷಕರು ಕೇಳಿದಾಗ ಐಪಿಎಸ್ ಆಫೀಸರ್ ಆಗಬೇಕು ಅಂತಾ ಹೇಳುತ್ತಿದ್ದೆ. ಆ ಬಳಿಕ ಸರ್ಕಾರಿ ಅಧಿಕಾರಿ ಆಗಬೇಕು ಅಂತಾ ಆಸೆ ಇತ್ತು ಅಂತಾ ರಚಿತಾ ರಾಮ್ ತನ್ನ ಕನಸನ್ನು ಬಿಚ್ಚಿಟ್ಟಿದ್ದಾರೆ.
ನನಗೆ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಮಾಡಬೇಕೆಂದು ತುಂಬಾ ಆಸೆ ಇದೆ. ಈವರೆಗೆ ಡಾಕ್ಟರ್, ಲಾಯರ್ ಪಾತ್ರ ಮಾಡಿದ್ದೇನೆ. ಪೊಲೀಸ್ ಪಾತ್ರಕ್ಕಾಗಿ ಕಾಯುತ್ತಿದ್ದೇನೆ. 'ಕನ್ನಡ ಗೊತ್ತಿಲ್ಲ' ಎಂಬ ಚಿತ್ರ ಕ್ಕಾಗಿ ಪೊಲೀಸ್ ಪಾತ್ರ ಮಾಡಲು ಹೇಳಿದ್ದರು. ಆದರೆ ಕಾರಣಾಂತರದಿಂದ ಆ ಚಿತ್ರವನ್ನು ಒಪ್ಪಿಕೊಂಡಿಲ್ಲ'' ಅಂತಾ ರಚಿತಾ ರಾಮ್ ಹೇಳಿದ್ದಾರೆ. ಈ ವೇಳೆ ಶಶಿಕುಮಾರ್, ಮುಂದೆ 'ರಚಿತಾ ರಾಮ್ ಐಪಿಎಸ್' ಅಂತಾ ಚಿತ್ರ ಮಾಡಿ ಸಲಹೆ ನೀಡಿದ್ದಾರೆ.
ಮಂಗಳೂರು ಪೊಲೀಸರ ಬಗ್ಗೆ ಮೆಚ್ಚುಗೆ ಮಾತನಾಡಿದ ರಚಿತಾ ರಾಮ್, ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ತುಂಬಾ ಮುಕ್ತ ಮನಸ್ಸಿನಿಂದ ಮಾತನಾಡಿದ್ದಾರೆ.. ಬ್ಯುಸಿ ನಡುವೆ ಸಮಯ ನೀಡಿದ್ದಾರೆ. ಈ ಹಿಂದೆ ಮಂಗಳೂರಿಗೆ ಬಂದಾಗ, ಯಾರೂ ಪರಿಚಯದವರು ಇಲ್ಲಲ್ವಾ ಎಂಬ ಭಾವನೆಯಿತ್ತು. ಆದರೆ ಪೊಲೀಸರ ಪ್ರೀತಿ ನೋಡೋವಾಗ ನನಗೆ ಮಂಗಳೂರಿನಲ್ಲಿ ದೊಡ್ಡ ಫ್ಯಾಮಿಲಿ ಇದೆ ಅಂತಾ ಹೇಳೋಕೆ ಖುಷಿ ಆಗುತ್ತಿದೆ ಅಂತಾ ರಚಿತಾ ರಾಮ್ ಹೇಳಿದ್ದಾರೆ.
ಹೊಸವರ್ಷ, ಕ್ರಿಸ್ಮಸ್ ಹಬ್ಬ ಹತ್ತಿರ ಬರುತ್ತಿದೆ. ಎಲ್ಲರೂ ಆರೋಗ್ಯ ಕಾಪಾಡಿಕೊಳ್ಳಿ. ಒಳ್ಳೆಯದನ್ನೇ ಯೋಚನೆ ಮಾಡೋಣ ಅಂತಾ ರಚಿತಾ ರಾಮ್ ಹೇಳಿದ್ದಾರೆ.