ಮಂಗಳೂರಲ್ಲಿ ಸುಂದರ್ರಾಜ್ ದಂಪತಿಗಳೊಂದಿಗೆ ತಾರಾ ತ್ರಿವಳಿ
ಮಂಗಳೂರು : ಅಭಿಮಾನಿಗಳು ಮುತ್ತಿಗೆ ಹಾಕುವ ಭಯವಿರಲಿಲ್ಲ . ಸ್ಟಾರ್ಟ್, ಕಟ್ಗಳ ಕಿರಿಕಿರಿಯೂ ಇರಲಿಲ್ಲ . ಸುಂದರ್ರಾಜ್, ಪ್ರಮೀಳಾ ಜೋಷಾಯ್, ಅಭಿನಯ, ರೇಖಾದಾಸ್, ಕರಿಬಸವಯ್ಯ ಗುರುವಾರ ಸಂಜೆ ಕಡಲ ನಗರಿ ಮಂಗಳೂರಿನ ಬೀದಿಗಳಲ್ಲಿ ಆರಾಮಾಗಿ ಸುತ್ತುತ್ತಿದ್ದರು.
ಅಂದಹಾಗೆ, ಈ ಸಿನಿಮಾ ಕಲಾವಿದರು ಮಂಗಳೂರಿಗೆ ಬಂದಿದ್ದುದು ಸಿನಿಮಾ ಅಥವಾ ಟೀವಿ ಶೂಟಿಂಗ್ಗಲ್ಲ . ಅವರದು ಒಂದು ರೀತಿಯ ಪಿಕ್ನಿಕ್ ಮಾದರಿಯ ವಾಣಿಜ್ಯ ಪ್ರವಾಸ; ಪ್ರಚಾರ ಅಂದರೂ ಸರಿ. ಇವರೆಲ್ಲ ಭೇಟಿ ಕೊಟ್ಟಿದ್ದುದು- ನಗರದ ಲ್ಯಾಂಡ್ಲಿಂಕ್ಸ್ ಸಂಸ್ಥೆಯು ಕೊಂಚಾಡಿ- ದೇರೇಬೈಲ್ನಲ್ಲಿ ನಿರ್ಮಿಸಿರುವ ಲ್ಯಾಂಡ್ಲಿಂಕ್ಸ್ ಟೌನ್ಶಿಪ್ಗೆ. ಪ್ರಚಾರ ಎಂದರೇನು ಅನ್ನುವುದು ಅರ್ಥವಾಯಿತಲ್ಲ ?
ಲ್ಯಾಂಡ್ಲಿಂಕ್ಸ್ ಟೌನ್ಶಿಪ್ನಲ್ಲಿ ಸುತ್ತು ಹೊಡೆದ ಸುಂದರ್ರಾಜ್ ನಾಯಕತ್ವದ ತಾರಾ ಸಮೂಹ, ಮಂಗಳೂರಿನ ವಾತಾವರಣದ ಸವಿಯುಂಡರು; ಕಣ್ಣು, ಮನಸ್ಸಿನೊಂದಿಗೆ ಹೊಟ್ಟೆಯನ್ನೂ ತುಂಬಿಸಿಕೊಂಡರು. ಟೌನ್ಶಿಪ್ನ ಅಚ್ಚುಕಟ್ಟಿನ ವ್ಯವಸ್ಥೆ ಯ ಬಗ್ಗೆ ಶಹಬ್ಭಾಸ್ ಅಂದರು.
ಲ್ಯಾಂಡ್ಲಿಂಕ್ಸ್ ಸಂಸ್ಥೆಯ ಮಾಲೀಕ ಶ್ರೀ ಜೆ. ಕೃಷ್ಣ ಪಾಲೆಮಾರ್, ಶ್ರೀಮತಿ ಶಶಿಕಲಾ ಪಾಲೆಮಾರ್, ಶ್ರೀ ಕೃಷ್ಣಾನಂದ ರಾವ್ ಮುಂತಾದವರು ತಾರಾಸಮೂಹ ಲ್ಯಾಂಡ್ಲಿಂಕ್ಸ್ಗೆ ಭೇಟಿ ಕೊಟ್ಟಿದ್ದಾಗ ಹಾಜರಿದ್ದರು.


Click it and Unblock the Notifications