Don't Miss!
- News ಬಿಜೆಪಿಗೆ ಮತ್ತೊಂದು ಆಘಾತ, ಮತ್ತೋರ್ವ ವಿಧಾನ ಪರಿಷತ್ ಸದಸ್ಯ ರಾಜೀನಾಮೆ: ಮಾಜಿ ಸಿಎಂ ಏನಂದ್ರು?
- Sports T20 World Cup 2024: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆರಂಭಿಕರನ್ನು ಸೂಚಿಸಿದ ಸೌರವ್ ಗಂಗೂಲಿ
- Automobiles ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
- Technology Airtel: ಏರ್ಟೆಲ್ನಿಂದ ಹೊಸ ಅಂತಾರಾಷ್ಟ್ರೀಯ ರೋಮಿಂಗ್ ಪ್ಲ್ಯಾನ್ಗಳು! ಇವು ಹೇಗೆಲ್ಲಾ ಅನುಕೂಲ?
- Lifestyle ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಲ್ಟಿ ಹೀರೋ- ಹೀರೋಯಿನ್ಗಳ ‘ಶ್ರೀಮಂಜುನಾಥ’
ಆಶಾ ಚಿತ್ರದಿಂದ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ, ಕನ್ನಡದಲ್ಲಿ ಹೆಚ್ಚಿನ ಅವಕಾಶ ದೊರಕದೆ ತೆಲುಗು - ತಮಿಳಿನಲ್ಲಿ ಜಂಟಲ್ ಮ್ಯಾನ್ ಎನಿಸಿಕೊಂಡ ಅರ್ಜುನ್ ಸರ್ಜಾ, ಬೆಂಗಳೂರಿನ ಹನುಮಂತನಗರದ ಹುಡುಗಿ ಹಾಲಿ ತೆಲುಗಿನ ಸೂಪರ್ ಸ್ಟಾರಿಣಿ ಸೌಂದರ್ಯ, ಖ್ಯಾತ ತೆಲುಗು ನಟ ಚಿರಂಜೀವಿ, ಮೀನಾ, ಸಾಂಘವಿ, ವಿನೋದ್ ರಾಜ್, ಕುಮಾರ್ ಗೋವಿಂದ್, ಅಭಿಜಿತ್, ರೆಬೆಲ್ ಸ್ಟಾರ್ ಅಂಬರೀಶ್, ಸುಮಲತಾ ಮತ್ತಿತರ ಮಲ್ಟಿ ಹೀರೋ - ಹೀರೋಯಿನ್ಗಳನ್ನೊಳಗೊಂಡ, ಚಿನ್ನಿ ಫಿಲಂಸ್ ಲಾಂಛನದಲ್ಲಿ ಜಯಶ್ರೀ ದೇವಿ ನಿರ್ಮಿಸುತ್ತಿರುವ ಚಿತ್ರ 'ಶ್ರೀಮಂಜುನಾಥ " ನಿಗೆ ಭರದಿಂದ ಚಿತ್ರೀಕರಣ ಸಾಗಿದೆ.
ಐತಿಹಾಸಿಕ ಹಂಪೆಯ, ನಿಸರ್ಗದ ಮಡಿಲಲ್ಲಿ ನಿರ್ದೇಶಕ ಕೆ. ರಾಘವೇಂದ್ರ ರಾವ್ ನಿರ್ದೇಶನದಲ್ಲಿ ಹಲವು ದೃಶ್ಯಗಳ ಚಿತ್ರೀಕರಣ ಸಾಗಿದೆ. ಕಳೆದ ವಾರ ಭಕ್ತಿ ಪ್ರಧಾನವಾದ ಈ ಚಿತ್ರಕ್ಕಾಗಿ ಕಂಠೀರವ ಸ್ಟುಡಿಯೋದಲ್ಲಿ ಹಾಕಲಾಗಿದ್ದ ಭವ್ಯವಾದ ಕೈಲಾಸದ ಸೆಟ್ನಲ್ಲಿ ಶ್ರೀ ಮಂಜುನಾಥನ ಚರಿತೆ ಮಧುರಾ.. ಮಧುರಾ.. ಎಂಬ ಗೀತೆಗೆ ನೃತ್ಯದ ಚಿತ್ರೀಕರಣ ನಡೆಯಿತು.
ಏಳು ನಿಮಿಷಗಳ ಈ ಗೀತೆಗೆ ಸತತ 7 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಚಿತ್ರಕ್ಕೆ ಜೆ.ಕೆ. ಭಾರವಿ ಅವರ ಕಥೆ, ಹಂಸಲೇಖರ ಗೀತೆ, ಸಂಗೀತ, ಸುಂದರನಾಥ ಸುವರ್ಣರ ಛಾಯಾಗ್ರಹಣ, ಡಾ. ನಾಗೇಂದ್ರ ಪ್ರಸಾದ್ ಸಂಭಾಷಣೆ ಇದೆ.