Don't Miss!
- News Heavy Rain: ಭಾರೀ ಗಾಳಿ, ಮಳೆಗೆ ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು: ಸಿಡಿಲು ಬಡಿದು 25 ಮೇಕೆಗಳ ಸಾವು
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Lifestyle ಹೊಟ್ಟೆಯೇ ಇಲ್ಲದೆ ಬದುಕಿದ್ದ ನತಾಶಾ ದಿಡ್ಡಿ ನಿಧನ...! ಈಕೆ ಯಾರು ಗೊತ್ತಾ?
- Finance ಸುಗಮ, ಸುರಕ್ಷಿತ ಸಂಚಾರಕ್ಕಾಗಿ ವಿಶೇಷ ಅಭಿಯಾನ ಆರಂಭಿಸಿದ ಬೆಂಗಳೂರು ಸಂಚಾರಿ ಪೊಲೀಸ್
- Automobiles ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
- Sports ಟಿ20 ವಿಶ್ವಕಪ್ 2024: ಟೀಮ್ ಇಂಡಿಯಾಗೆ ದೊಡ್ಡ ಚಿಂತೆಯಾದ ಈ ಆರಂಭಿಕನ ಫಾರ್ಮ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನೋರಂಜನ್ ಕಾಲಿಗೆ ಪೆಟ್ಟು: ಎರಡು ವಾರ ಕದಲುವ ಹಾಗಿಲ್ಲ!
Recommended Video
ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಕನ್ನಡ ನಟ ಮನೋರಂಜನ್ ರವಿಚಂದ್ರನ್ ಕಾಲಿಗೆ ಪೆಟ್ಟಾಗಿದೆ.
ಸೆಲೆಬ್ರಿಟಿ ಬ್ಯಾಡ್ಮಿಂಟನ್ ಲೀಗ್ ನಲ್ಲಿ 'ಕರ್ನಾಟಕ ವಾರಿಯರ್ಸ್' ತಂಡವನ್ನ ಮುನ್ನಡೆಸಿ, ಸ್ಯಾಂಡಲ್ ವುಡ್ ಗೆ ಗೆಲುವಿನ ಸಿಹಿಯನ್ನು ತಂದುಕೊಟ್ಟಿದ್ದು ಇದೇ ಮನೋರಂಜನ್ ರವಿಚಂದ್ರನ್. ಆದ್ರೀಗ, ಬ್ಯಾಡ್ಮಿಂಟನ್ ಆಡುವಾಗ ಎಡವಿ ಬಿದ್ದ ಮನೋರಂಜನ್ ಕಾಲಿಗೆ ಪೆಟ್ಟಾಗಿದೆ.
ನಡೆಯುವಾಗ ದೇಹದ ಭಾರವೆಲ್ಲ ಕಾಲಿಗೆ ಬೀಳುವುದರಿಂದ, ಎರಡು ವಾರಗಳ ಕಾಲ ಕದಲದಂತೆ ವೈದ್ಯರು ಸೂಚಿಸಿದ್ದಾರೆ. ಹೀಗಾಗಿ, ಎರಡು ವಾರಗಳ ಕಾಲ ನಟ ಮನೋರಂಜನ್ ಚಿತ್ರೀಕರಣದಲ್ಲೂ ಭಾಗವಹಿಸುವಂತಿಲ್ಲ.
'ಸಾಹೇಬ', 'ಬೃಹಸ್ಪತಿ' ಸಿನಿಮಾಗಳ ನಂತರ 'ಚಿಲಂ' ಚಿತ್ರದಲ್ಲಿ ಅಭಿನಯಿಸಲು ಮನೋರಂಜನ್ ರವಿಚಂದ್ರನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದೇ ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್ ವಿಲನ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಹಿಂದೆ 'ಕ್ವಾಟ್ಲೆ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಚಂದ್ರಕಲಾ, 'ಚಿಲಂ'ಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.
14 ವರ್ಷ ವನವಾಸ ಮುಗಿಸಿದ ರಾಘವೇಂದ್ರ ರಾಜ್ ಕುಮಾರ್
ಡ್ರಗ್ ಮಾಫಿಯಾ ಕುರಿತಾದ ಕಥೆ ಇದಾಗಿದ್ದು, ಮುಂದಿನ ತಿಂಗಳಿನಿಂದ ಶೂಟಿಂಗ್ ಶುರು ಆಗಲಿದೆ. ಅಷ್ಟರೊಳಗೆ ರೆಸ್ಟ್ ತೆಗೆದುಕೊಂಡು ಮನೋರಂಜನ್ ಫಿಟ್ ಅಂಡ್ ಫೈನ್ ಆಗಬೇಕು.