Don't Miss!
- Automobiles 'ಬಾಹುಬಲಿ' ಎಸ್ಯುವಿ ಪರಾಕ್ರಮ: ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ವಿಶೇಷತೆಗಳೇನು?
- Technology ಇಂದು 3D ಕರ್ವ್ಡ್ ಡಿಸ್ಪ್ಲೇ ಇರುವ ಈ ಫೋನಿನ ಸೇಲ್!..ಆಫರ್ ಬೆಲೆ ಎಷ್ಟು?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಾತನ ಶ್ರಮವನ್ನು ನೆನೆದ ರವಿಚಂದ್ರನ್ ಪುತ್ರ
ಇಂದು ನಟ ಕ್ರೇಜಿಸ್ಟಾರ್ ರವಿಚಂದ್ರನ್ ತಂದೆ, ನಿರ್ಮಾಪಕ ವೀರಾಸ್ವಾಮಿ ಅವರ ಹುಟ್ಟುಹಬ್ಬದ ಸವಿ ನೆನಪು. ಕನ್ನಡ ಚಿತ್ರರಂಗಕ್ಕೆ ದೊಡ್ಡ ದೊಡ್ಡ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಹೆಮ್ಮೆಯ ನಿರ್ಮಾಪಕ ಹುಟ್ಟಿದ ದಿನ.
ತಮ್ಮ ತಂದೆ ನಿರ್ಮಾಪಕ ವೀರಾಸ್ವಾಮಿ ಅವರ ಬಗ್ಗೆ ರವಿಚಂದ್ರನ್ ಯಾವಾಗಲು ನೆನೆಯುತ್ತಾರೆ. ಅದೇ ರೀತಿ ಇಂದು ಪ್ರೀತಿಯ ತಾತನ ಬಗ್ಗೆ ಮನೋರಂಜನ್ ರವಿಚಂದ್ರನ್ ಮಾತುಗಳನ್ನ ಆಡಿದ್ದಾರೆ.
ಕ್ರೇಜಿಸ್ಟಾರ್ ರವಿಚಂದ್ರನ್ ತೆಗೆದುಕೊಂಡ ಮೊಟ್ಟ ಮೊದಲ ಸೆಲ್ಫಿ ಇದು
ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ತಾತನ ಬಗ್ಗೆ ಬರೆದುಕೊಂಡಿರುವ ಅವರು "ನಮ್ಮ ತಾತ ಕಂಡ ಕನಸು, ಅವರು ಹೊತ್ತ ಆಸೆ ಇವತ್ತು ಈಶ್ವರಿ ಪ್ರೊಡಕ್ಷನ್ಸ್ ಇಷ್ಟು ದೊಡ್ಡ ಹೆಸರು ಮಾಡೋಕ್ಕೆ ಸಾಧ್ಯ ಆಯ್ತು. ನಮ್ಮ ತಂದೆ ರವಿಚಂದ್ರನ್ ಅವರನ್ನು ನೀವೆಲ್ಲ ಕನಸುಗಾರ ಅಂತ ಹೇಳಬಹುದು. ಆದರೆ, ಈ ಕನಸುಗಳ ಹಿಂದೆ ಇದ್ದ ದೊಡ್ಡ ಶಕ್ತಿ ನಮ್ಮ ತಾತ. ಇಂದು ಅವರ ಹುಟ್ಟುಹಬ್ಬ, ಲವ್ ಯೂ ತಾತ, ಸದಾ ಚಿರಋಣಿ" ಎಂದು ತಮ್ಮ ಮನಸ್ಸಿನ ಮಾತನ್ನು ಹಂಚಿಕೊಂಡಿದ್ದಾರೆ.
View this post on InstagramA post shared by Manoranjan Ravichandran (@mano_ravichandran) on
ನಿರ್ದೇಶಕ ರಾಘುರಾಮ್, ರವಿಚಂದ್ರನ್ ಅಭಿಮಾನಿಗಳು ಸೇರಿದಂತೆ ಸಾಕಷ್ಟು ಜನರು ಸಾಮಾಜಿಕ ಜಾಲತಾಣಗಳಲ್ಲಿ ವೀರಾಸ್ವಾಮಿ ರವರನ್ನು ನೆನೆದಿದ್ದಾರೆ.
'ನಾಗರಹಾವು', 'ಭೂತಯ್ಯನ ಮಗ ಅಯ್ಯು', 'ಪ್ರೇಮಲೋಕ', 'ರಣಧೀರ', 'ಶಾಂತಿ ಕ್ರಾಂತಿ', 'ರಾಮಾಚಾರಿ', 'ಚಕ್ರವ್ಯೂಹ' ಹೀಗೆ ಸಾಕಷ್ಟು ಸಿನಿಮಾಗಳು ಈಶ್ವರಿ ಪ್ರೊಡಕ್ಷನ್ ನಿಂದ ಬಂದಿವೆ.