Don't Miss!
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- News Dubai Rain: ದುಬಾರಿ ದುಬೈಗೆ ಭಾರವಾದ ಮಳೆ: 4 ದಿನ ಕಳೆದ್ರೂ ಸಹಜ ಸ್ಥಿತಿಗೆ ಬಾರದೆ ಹೈರಾಣ
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Technology Poco: ಹೊಸದಾಗಿ ಲಾಂಚ್ ಆದ ಪೊಕೊ X6 ಪ್ರೊ 5G ಸ್ಮಾರ್ಟ್ಫೋನ್ಗೆ 17% ರಿಯಾಯಿತಿ!8 GB RAM
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯುವ ಪ್ರತಿಭೆಗೆ ಕಾಲ್ ಶೀಟ್ ಕೊಟ್ಟ ರವಿಚಂದ್ರನ್ ಪುತ್ರ ಮನೋರಂಜನ್.!
Recommended Video
ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ತಮ್ಮ ಚೊಚ್ಚಲ ಚಿತ್ರದಿಂದಲೂ ಹೊಸ ನಿರ್ದೇಶಕರು ಹಾಗೂ ಯುವ ಪ್ರತಿಭೆಗಳಿಗೆ ಮಣೆ ಹಾಕಿದ್ದಾರೆ. ಈ ಬಾರಿಯೂ ನವ ನಿರ್ದೇಶಕರಿಗೆ ಮನೋರಂಜನ್ ಕಾಲ್ ಶೀಟ್ ನೀಡಿದ್ದಾರೆ.
ಸದ್ಯ 'ಚಿಲ್ಲಂ' ಚಿತ್ರದಲ್ಲಿ ಬಿಜಿಯಾಗಿರುವ ಮನೋರಂಜನ್ ಇದೀಗ 'ಮುಂದಿನ ನಿಲ್ದಾಣ' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಮುಂದಿನ ನಿಲ್ದಾಣ' ಚಿತ್ರಕ್ಕೆ 'ಜೀವನದ ಪ್ರಾರಂಭ' ಎಂಬ ಟ್ಯಾಗ್ ಲೈನ್ ಇಡಲಾಗಿದೆ.
ಮನೋರಂಜನ್ ರವಿಚಂದ್ರನ್ ಗೆ ವಿಲನ್ ಆದ ನಾನಾ ಪಾಟೇಕರ್
ಹೊಸ ರೀತಿಯಲ್ಲಿ 'ಮುಂದಿನ ನಿಲ್ದಾಣ' ಚಿತ್ರದ ಸ್ಕ್ರಿಪ್ಟ್ ಬರೆದು, ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿರುವವರು ಮನು. ಈ ಚಿತ್ರಕ್ಕೆ ಮನು ಸಹೋದರ ಜಗದೀಶ್ ರವರೇ ಬಂಡವಾಳ ಹಾಕಲಿದ್ದಾರೆ.
ಮೈಸೂರು, ಬಳ್ಳಾರಿ ಹಾಗೂ ಚಿಕ್ಕಮಗಳೂರಿನಲ್ಲಿ 'ಮುಂದಿನ ನಿಲ್ದಾಣ' ಚಿತ್ರದ ಶೂಟಿಂಗ್ ನಡೆಯಲಿದೆ. ಮೂಲಗಳ ಪ್ರಕಾರ, ಅಕ್ಟೋಬರ್ ತಿಂಗಳಲ್ಲಿ 'ಮುಂದಿನ ನಿಲ್ದಾಣ' ಚಿತ್ರ ಸೆಟ್ಟೇರಲಿದೆ.
ಗಾಂಜಾ ಸ್ಮಗ್ಲರ್ ಆದ ರವಿಚಂದ್ರನ್ ಪುತ್ರ ಮನೋರಂಜನ್!
ಚಿತ್ರಕ್ಕಿನ್ನೂ ನಾಯಕಿ ಹಾಗೂ ಇತರೆ ತಾರಾಬಳಗದ ಆಯ್ಕೆ ನಡೆದಿಲ್ಲ. 'ಮುಂದಿನ ನಿಲ್ದಾಣ' ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಕೊಡ್ತಾಯಿರ್ತೀವಿ, ಫಿಲ್ಮಿಬೀಟ್ ಕನ್ನಡ ಓದುತ್ತಿರಿ.