Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆಂಡಸಂಪಿಗೆ ಮಾನ್ವಿತಾ ಎದುರು ಅನಿರೀಕ್ಷಿತವಾಗಿ ಡಿ ಬಾಸ್ ಸಿಕ್ಕಾಗ..
Recommended Video
ಚಂದನವನದ ಕೆಂಡಸಂಪಿಗೆ ಮಾನ್ವಿತಾ ಹರೀಶ್ ದಸರಾ ಸಂದರ್ಭದಲ್ಲಿ ಮೈಸೂರಿಗೆ ಹೋದಾಗ ಒಂದು ಆಶ್ಚರ್ಯಕರ ಸಂಗತಿ ನಡೆದಿದೆ. ಈ ಬಗ್ಗೆ ಇತ್ತೀಚಿನ ಫೇಸ್ ಬುಕ್ ಲೈವ್ ನಲ್ಲಿ ಮಾನ್ವಿತಾ ಹೇಳಿಕೊಂಡಿದ್ದಾರೆ. ಮಾನ್ವಿತಾ ಹೇಳಿಕೊಂಡಿರುವ ಘಟನೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಸಂಬಂಧ ಪಟ್ಟಿರುವಂತದ್ದು. ಹೌದು ದರ್ಶನ್ ಅವರನ್ನ ಅನಿರೀಕ್ಷಿತವಾಗಿ ಭೇಟಿ ಮಾಡಿದ ಸಂದರ್ಭ ಅದು .
ಮಾನ್ವಿತಾ ಹರೀಶ್ ದಸರಾ ಸಂದರ್ಭದಲ್ಲಿ ಯುವ ದಸರಾದಲ್ಲಿ ಭಾಗಿ ಆಗಲು ಹೋಗಿದ್ದರಂತೆ. ಆಗ ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾರೆ. ಅದೇ ಸಂದರ್ಭದಲ್ಲಿ ದರ್ಶನ್ ಕೂಡ ಮೈಸೂರಿನಲ್ಲೇ ಇದ್ದರಂತೆ. ಮಾನ್ವಿತಾ ಕಾರ್ಯಕ್ರಮಕ್ಕೆ ರೆಡಿಯಾಗಿ ರೂಮ್ ನಿಂದ ಹೊರಟಿದ್ದಾರೆ.
ಮಾನ್ವಿತಾ ರಾತ್ರಿ ಮಲಗುವ ಮುನ್ನ ಲಾಸ್ಟ್ ಮೆಸೇಜ್ ಮಾಡುವುದು ಇವರಿಗೇನೆ
ಕಾರ್ ನಲ್ಲಿ ಬಂದು ಕುಳಿತ ನಂತರ ಮಾನ್ವಿತಾ ಅವರಿಗೆ ಹೋಟೆಲ್ ನವರು ಬಂದು ಮೇಡಂ ಅಲ್ಲಿ ಮೆಟ್ಟಿಲು ಮೇಲೆ ಕುಳಿತವರು ದರ್ಶನ್ ಸರ್ ಎಂದು ತಿಳಿಸಿದ್ದಾರೆ. ತಕ್ಷಣ ಕಾರ್ ನಿಂದ ಇಳಿದು ಹೋದ ಮಾನ್ವಿತಾ ದರ್ಶನ್ ಅವರ ಬಳಿ ಕ್ಷಮೆ ಕೇಳಿ ಮಾತನಾಡಿಸಿಕೊಂಡು ಹೋಗಿದ್ದಾರೆ. ಈ ಘಟನೆಯನ್ನ ನೋಡಿ ಕೆಂಡಸಂಪಿಗೆ ಹುಡುಗಿದೆ ದರ್ಶನ್ ಅವರ ಮೇಲೆ ಅಭಿಮಾನ ಹೆಚ್ಚಾಗಿದೆ.
ಅಷ್ಟು ದೊಡ್ಡ ನಟನಾದರೂ ಕೂಡ ಅಷ್ಟು ಸಿಂಪಲ್ ಆಗಿ ಜೀವನವನ್ನೂ ರೂಡಿಸಿಕೊಂಡಿರುತ್ತಾರೆ ಎಂದು ಖುಷಿ ಪಟ್ಟಿದ್ದಾರೆ ಅದರ ಜೊತೆಯಲ್ಲಿ ಅವಕಾಶ ಸಿಕ್ಕರೆ ರ್ಶನ್ ಜೊತೆ ಅಭಿನಯಿಸುತ್ತೀರಾ ಎನದ್ನುವ ಪ್ರಶ್ನೆಗೆ ಹೌದು ಖಂಡಿತವಾಗಿಯೂ ಎಂದು ಉತ್ತರಿಸಿದ್ದಾರೆ ಮಾನ್ವಿತಾ ಹರೀಶ್.