Don't Miss!
- News ಬೆಂಗಳೂರು ನಮ್ಮ ಮೆಟ್ರೋ ಬೆಳಗ್ಗೆ 03:35ಕ್ಕೆ ಆರಂಭ: ಏಕೆ? ಕಾರಣ ಇಲ್ಲಿದೆ
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನಸಿನ ರಾಜನ ಬಗ್ಗೆ ಬಾಯ್ಬಿಟ್ಟ ಕೆಂಡಸಂಪಿಗೆ ಮಾನ್ವಿತಾ
Recommended Video
ಕೆಂಡಸಂಪಿಗೆ ಅಂದ ಕೂಡಲೆ ಮೊದಲಿಗೆ ನೆನಪಾಗುವುದು ನಟಿ ಮಾನ್ವಿತಾ ಹರೀಶ್. ಹೌದು 'ಕೆಂಡಸಂಪಿಗೆ' ಸಿನಿಮಾ ಮೂಲಕವೇ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಮಾನ್ವಿತಾ ಇಲ್ಲಿಯವರೆಗೂ ಮದುವೆ ಬಗ್ಗೆ ತುಟಿ ಬಿಚ್ಚಿರಲಿಲ್ಲ. 'ಟಗರು' ಸಕ್ಸಸ್ ಖುಷಿಯಲ್ಲಿರುವ 'ಟಗರು' ಪುಟ್ಟಿಯ ವಿವಾಹದ ಬಗ್ಗೆ ಯಾರು ಹೆಚ್ಚೆನೂ ತಲೆ ಕೆಡಿಸಿಕೊಂಡಿರಲಿಲ್ಲ.
ಯಾಕೆಂದ್ರೆ ಮಾನ್ವಿತಾ ಚಿತ್ರರಂಗದವರಿಗೆ ಇನ್ನೂ ಕೂಡ ಚಿಕ್ಕ ಹುಡುಗಿ ಅಂತಲೇ ಅನ್ನಿಸುತ್ತಾರೆ. ಆದರೆ ಈಗ ಮಾನ್ವಿತಾ ತನ್ನ ಕನಸಿನ ರಾಜನ ಬಗ್ಗೆ ಮಾತನಾಡಿದ್ದಾರೆ. ತಾನು ಮದುವೆ ಆಗುವ ಹುಡುಗ ಹೇಗಿರಬೇಕೆಂದು ತಮ್ಮ ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದಾರೆ.
ಕಾಲಿವುಡ್ ನಲ್ಲಿ ಅರಳಲಿದೆ ಕನ್ನಡದ 'ಕೆಂಡಸಂಪಿಗೆ'
ಸಾಮಾನ್ಯವಾಗಿ ಎಲ್ಲಾ ಹುಡುಗಿಯರು ಬಯಸುವಂತೆ ಮಾನ್ವಿತಾಗೂ ಒಳ್ಳೆ ಮನಸ್ಸಿರುವ ಹುಡಗಬೇಕಂತೆ. ಅದಷ್ಟೇ ಅಲ್ಲದೆ ಘನೆತೆವುಳ್ಳ ವ್ಯಕ್ತಿ ಆದರೆ ಇನ್ನು ಚೆನ್ನಾಗಿರುತ್ತೆ ಎನ್ನುವುದು ಕೆಂಡಸಂಪಿಗೆಯ ಆಸೆ. ಪುಸ್ತಕ ಓದುವ ಹುಡುಗರ ಗಮನಕ್ಕೆ ಈ ವಿಷ್ಯ ಇರಲಿ ಯಾಕಂದರೆ ಮಾನ್ವಿತಾ ಗೆ ಪುಸ್ತಕ ಓದುವ ಹುಡುಗರು ಎಂದರೆ ಪ್ರೀತಿ ಅಂತೆ. ಹೆಚ್ಚು ವಿಚಾರಗಳನ್ನು ತಿಳಿದುಕೊಂಡಿದ್ದರೆ ಖುಷಿಯಂತೆ.
ಟಗರು ಪುಟ್ಟಿಗೆ ಸಂಗೀತ ಅಂದ್ರೆ ತುಂಬಾ ಇಷ್ಟ. ಹಾಗಾಗಿ ಹಾಡೋದಕ್ಕೆ ಆಗಿಲ್ಲ ಅಂದರೂ, ಹಾಡು ಬರೆಯೋದಕ್ಕೆ ಬಂದರೆ ಉತ್ತಮ ಅಂತಾರೆ. ಇನ್ನೂ ಸಿನಿಮಾ ಬಗ್ಗೆ ಹೆಚ್ಚು ಆಸಕ್ತಿ ಇದ್ದರೆ ನನಗೆ ಮಾತನಾಡಲು ಅಭಿಪ್ರಾಯ ಹಂಚಿಕೊಳ್ಳಲು ಉಪಯೋಗವಾಗುತ್ತೆ ಎಂದಿದ್ದಾರೆ. ಒಟ್ಟಾರೆ ಟಗರು ಪುಟ್ಟಿ ಸಾಕಷ್ಟು ದಿನಗಳ ನಂತರ ತಮ್ಮ ಕನಸಿನ ಹುಡುಗನ ಬಗ್ಗೆ ನಾಚುತ್ತಲೇ ಹೇಳಿಕೊಂಡಿದ್ದಾರೆ.