Don't Miss!
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- News ಮಳೆ.. ಮಳೆ.. ಅಲ್ಲಲ್ಲ ಮುಂದಿನ 1 ವಾರ ಬೆಂಗಳೂರಲ್ಲಿ ಭಾರಿ ಬಿಸಿಲು!
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Sports CSK vs LSG IPL 2024: ಚೆನ್ನೈ vs ಲಕ್ನೋ ಹೈ-ವೋಲ್ಟೇಜ್ ಪಂದ್ಯದ ಟಾಸ್ ವರದಿ; ಆಡುವ 11ರ ಬಳಗ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನಸಿನ ರಾಜನ ಬಗ್ಗೆ ಬಾಯ್ಬಿಟ್ಟ ಕೆಂಡಸಂಪಿಗೆ ಮಾನ್ವಿತಾ
Recommended Video
ಕೆಂಡಸಂಪಿಗೆ ಅಂದ ಕೂಡಲೆ ಮೊದಲಿಗೆ ನೆನಪಾಗುವುದು ನಟಿ ಮಾನ್ವಿತಾ ಹರೀಶ್. ಹೌದು 'ಕೆಂಡಸಂಪಿಗೆ' ಸಿನಿಮಾ ಮೂಲಕವೇ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಮಾನ್ವಿತಾ ಇಲ್ಲಿಯವರೆಗೂ ಮದುವೆ ಬಗ್ಗೆ ತುಟಿ ಬಿಚ್ಚಿರಲಿಲ್ಲ. 'ಟಗರು' ಸಕ್ಸಸ್ ಖುಷಿಯಲ್ಲಿರುವ 'ಟಗರು' ಪುಟ್ಟಿಯ ವಿವಾಹದ ಬಗ್ಗೆ ಯಾರು ಹೆಚ್ಚೆನೂ ತಲೆ ಕೆಡಿಸಿಕೊಂಡಿರಲಿಲ್ಲ.
ಯಾಕೆಂದ್ರೆ ಮಾನ್ವಿತಾ ಚಿತ್ರರಂಗದವರಿಗೆ ಇನ್ನೂ ಕೂಡ ಚಿಕ್ಕ ಹುಡುಗಿ ಅಂತಲೇ ಅನ್ನಿಸುತ್ತಾರೆ. ಆದರೆ ಈಗ ಮಾನ್ವಿತಾ ತನ್ನ ಕನಸಿನ ರಾಜನ ಬಗ್ಗೆ ಮಾತನಾಡಿದ್ದಾರೆ. ತಾನು ಮದುವೆ ಆಗುವ ಹುಡುಗ ಹೇಗಿರಬೇಕೆಂದು ತಮ್ಮ ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದಾರೆ.
ಕಾಲಿವುಡ್ ನಲ್ಲಿ ಅರಳಲಿದೆ ಕನ್ನಡದ 'ಕೆಂಡಸಂಪಿಗೆ'
ಸಾಮಾನ್ಯವಾಗಿ ಎಲ್ಲಾ ಹುಡುಗಿಯರು ಬಯಸುವಂತೆ ಮಾನ್ವಿತಾಗೂ ಒಳ್ಳೆ ಮನಸ್ಸಿರುವ ಹುಡಗಬೇಕಂತೆ. ಅದಷ್ಟೇ ಅಲ್ಲದೆ ಘನೆತೆವುಳ್ಳ ವ್ಯಕ್ತಿ ಆದರೆ ಇನ್ನು ಚೆನ್ನಾಗಿರುತ್ತೆ ಎನ್ನುವುದು ಕೆಂಡಸಂಪಿಗೆಯ ಆಸೆ. ಪುಸ್ತಕ ಓದುವ ಹುಡುಗರ ಗಮನಕ್ಕೆ ಈ ವಿಷ್ಯ ಇರಲಿ ಯಾಕಂದರೆ ಮಾನ್ವಿತಾ ಗೆ ಪುಸ್ತಕ ಓದುವ ಹುಡುಗರು ಎಂದರೆ ಪ್ರೀತಿ ಅಂತೆ. ಹೆಚ್ಚು ವಿಚಾರಗಳನ್ನು ತಿಳಿದುಕೊಂಡಿದ್ದರೆ ಖುಷಿಯಂತೆ.
ಟಗರು ಪುಟ್ಟಿಗೆ ಸಂಗೀತ ಅಂದ್ರೆ ತುಂಬಾ ಇಷ್ಟ. ಹಾಗಾಗಿ ಹಾಡೋದಕ್ಕೆ ಆಗಿಲ್ಲ ಅಂದರೂ, ಹಾಡು ಬರೆಯೋದಕ್ಕೆ ಬಂದರೆ ಉತ್ತಮ ಅಂತಾರೆ. ಇನ್ನೂ ಸಿನಿಮಾ ಬಗ್ಗೆ ಹೆಚ್ಚು ಆಸಕ್ತಿ ಇದ್ದರೆ ನನಗೆ ಮಾತನಾಡಲು ಅಭಿಪ್ರಾಯ ಹಂಚಿಕೊಳ್ಳಲು ಉಪಯೋಗವಾಗುತ್ತೆ ಎಂದಿದ್ದಾರೆ. ಒಟ್ಟಾರೆ ಟಗರು ಪುಟ್ಟಿ ಸಾಕಷ್ಟು ದಿನಗಳ ನಂತರ ತಮ್ಮ ಕನಸಿನ ಹುಡುಗನ ಬಗ್ಗೆ ನಾಚುತ್ತಲೇ ಹೇಳಿಕೊಂಡಿದ್ದಾರೆ.