Don't Miss!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- News Agniveer: 'ಅಗ್ನಿವೀರ್' ಯೋಜನೆಗೆ ಬದಲಾವಣೆ ತರಲು ಕೇಂದ್ರ ಮುಕ್ತ: ರಕ್ಷಣಾ ಸಚಿವ
- Automobiles ಯುಎಸ್ಎ, ಕೆನಡಾಗೂ ಕಾಲಿಟ್ಟ ಭಾರತೀಯ ಬೈಕ್: ಮುಂದುವರೆದ ವಿಶ್ವಗುರು ಭಾರತದ ನಾಗಾಲೋಟ
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂಬೇಡ್ಕರ್ ಭವನದಲ್ಲಿ ಏನಾಯ್ತು ಎಂದು ಪಿನ್ ಟು ಪಿನ್ ಮಾಹಿತಿ ಬಿಚ್ಚಿಟ್ಟ ಮಾರುತಿ ಗೌಡ
Recommended Video
ಅಂಬೇಡ್ಕರ್ ಭವನದಲ್ಲಿ ನಡೆದ ಬಾಡಿ ಬಿಲ್ಡಿಂಗ್ ಕಾಂಪಿಟೇಶನ್ ವೇಳೆ ಜಿಮ್ ಟ್ರೈನರ್ ಮಾರುತಿ ಗೌಡ ಅವರ ಮೇಲೆ ನಟ ದುನಿಯಾ ವಿಜಯ್ ಮತ್ತು ಸ್ನೇಹಿತರಿಂದ ಹಲ್ಲೆ ಮಾಡಲಾಗಿತ್ತು ಎಂಬ ಪ್ರಕರಣ ಕಳೆದ ಮೂರು ದಿನಗಳಿಂದ ದೊಡ್ಡ ಸುದ್ದಿ ಮಾಡುತ್ತಿದೆ.
ಈ ಪ್ರಕರಣದಲ್ಲಿ ಈಗಾಗಲೇ ನಟ ದುನಿಯಾ ವಿಜಯ್, ಪ್ರಸಾದ್ ಸೇರಿದಂತೆ ನಾಲ್ಕು ಜನ ಜೈಲು ಸೇರಿದ್ದಾರೆ. ಇಷ್ಟ ದಿನ ಪ್ರತ್ಯಕ್ಷದರ್ಶಿಗಳ ಹೇಳಿಕೆ, ಪಾನಿಪುರಿ ಕಿಟ್ಟಿ ಹೇಳಿಕೆ ಮತ್ತು ಮೂರನೇ ವ್ಯಕ್ತಿಗಳ ಹೇಳಿಕೆಯಿಂದ ಘಟನೆ ಹೇಗಾಯಿತು, ಯಾಕಾಯಿತು ಎಂಬುದರ ಬಗ್ಗೆ ತಿಳಿಯಲಾಗಿತ್ತು.
ಪಾನಿಪುರಿ ಕಿಟ್ಟಿ ಮೇಲೂ ಬಿತ್ತು ಕೇಸ್: ಕಿಟ್ಟಿಗೂ ಎದುರಾಯ್ತು ಸಂಕಷ್ಟ
ಇದೀಗ, ಹಲ್ಲೆಗೆ ಒಳಗಾದ ಮಾರುತಿ ಗೌಡ ಅವರೇ ಸ್ವತಃ ಘಟನೆ ಬಗ್ಗೆ ಪಿನ್ ಟು ಪಿನ್ ಮಾಹಿತಿಯನ್ನ ಬಿಚ್ಚಿಟ್ಟಿದ್ದಾರೆ. ಅಂದು ರಾತ್ರಿ ಅಂಬೇಡ್ಕರ್ ಭವನದಲ್ಲಿ ಏನಾಯಿತು.? ದುನಿಯಾ ವಿಜಯ್ ನಿಜಕ್ಕೂ ಹೊಡೆದ್ರಾ.? ವಿಡಿಯೋ ಮಾಡಿದ್ರಾ ಎಂಬುದನ್ನ ಬಹಿರಂಗಪಡಿಸಿದ್ದಾರೆ. ಮಾರುತಿ ಗೌಡ ಹೇಳಿದ ಸಂಪೂರ್ಣ ವಿವರ ಮುಂದೆ ಓದಿ.....
ನಮ್ಮ ಅಂಕಲ್ ನ ಕೇಳಿದ್ರು
ದುನಿಯಾ ವಿಜಿ, ಡ್ರೈವರ್ ಪ್ರಸಾದ್, ಬಾಡಿ ಬಿಲ್ಡರ್ ಪ್ರಸಾದ್, ಮಣಿ ಸೇರಿದಂತೆ ಹಲವರು ಇದ್ದರು ಎಂದು ಹೇಳುವ ಮಾರುತಿ ಗೌಡ ''ಬಾಡಿ ಬಿಲ್ಡಿಂಗ್ ಕಾಂಪಿಟೇಶನ್ ವೇಳೆ ವಿಜಿ ಸರ್ ನನ್ನನ್ನು ಕೇಳಿದ್ರು ಕಿಟ್ಟಿ ಎಲ್ಲಿ ಅಂತ. ಬಂದಿಲ್ಲ ಅಂತ ಹೇಳಿದೆ. ಎಲ್ಲಿದ್ದಾನೆ ಅಂದ್ರು, ಗೊತ್ತಿಲ್ಲ ಅಂದೆ. ಆಮೇಲೆ ಅವರೆಲ್ಲರೂ ಹೋದ್ರು. ಸ್ವಲ್ಪ ಹೊತ್ತಿನ ನಂತರ ಹತ್ತು ಜನ ಹುಡುಗರು ಬಂದ್ರು. ನನ್ನನ್ನು ಹೊಡೆದರು'' ಎಂದು ಘಟನೆಯನ್ನ ವಿವರಿಸಿದರು.
ದುನಿಯಾ ವಿಜಿಯಿಂದ ಹೊಡೆತ ತಿಂದ ಮಾರುತಿ ಗೌಡ ಯಾರು.? ಆತನ ಹಿನ್ನಲೆ ಏನು.?
ವಿಜಿ ಅವರೇ ಕಾರ್ ಗೆ ಎತ್ತಾಕ್ಕೊಳ್ಳಿ ಅಂದ್ರು
''ಒಳಗಡೆಯಿಂದ ಹೊರಗಡೆವರೆಗೂ ಹೊಡೆದುಕೊಂಡೇ ಕರೆದುಕೊಂಡು ಹೋದರು. ಕಾರ್ ಬಳಿ ವಿಜಿ ಇದ್ದರು. ಇವನ ಕಾರ್ ಗೆ ಎತ್ತಾಕ್ಕೊಳ್ಳಿ ಅಂತ ದುನಿಯಾ ವಿಜಿ ಹೇಳಿದ್ರು. ಡ್ರೈವರ್ ಪ್ರಸಾದ್, ಬಾಡಿ ಬಿಲ್ಡರ್ ಪ್ರಸಾದ್, ವಿಜಿ, ಮಣಿ ಮತ್ತು ವಿಜಿ ಅವರ ಮಗ ಕೂಡ ಕಾರಿನಲ್ಲಿದ್ದರು''
ಯಾರೀ ದುನಿಯಾ ವಿಜಯ್ ದುಷ್ಮನ್ 'ಪಾನಿಪೂರಿ' ಕಿಟ್ಟಿ.?
ಅಭಿಮಾನಿಗಳು ಹೊಡೆದ್ರು ಅಂತ ಹೇಳ್ಬೇಕು
''ನಾನು ಹೊಡೆದಿದ್ದು ಅಲ್ಲ, ಅಭಿಮಾನಿಗಳು ಹೊಡೆದ್ರು ಅಂತ ಹೇಳ್ಬೇಕು. ನಾನು ನಿನ್ನ ಕರ್ಕೊಂಡು ಬರ್ತಾ ಇದ್ದೀನಿ ಅಷ್ಟೇ ಅಂತಾ ವಿಜಿ ಹೇಳಿದ್ರು. ನಮ್ಮ ಅಂಕಲ್ ಗೂ ಫೋನ್ ಮಾಡಿದ್ರು. ಸಿಕ್ಕಾಪಟ್ಟೆ ಬೈದ್ರು. ವಿಜಿ ಅವರ ಮಗ ವಿಡಿಯೋ ಮಾಡಿದ್ದು''
ದುನಿಯಾ ವಿಜಿ-ಪಾನಿಪುರಿ ಕಿಟ್ಟಿ ಮಧ್ಯೆ ಇರೋ ಈ 'ಪ್ರಸಾದ್' ಯಾರು.?
ಪೊಲೀಸಿನವರು ಫೋನ್ ಮಾಡಿದ್ರು
ಒಂದೂವರೆ ಗಂಟೆ ಸುತ್ತಾಡಿಸಿದ್ರು. ರಾಜರಾಜೇಶ್ವರಿ ನಗರದ ಬಳಿ ನನಗೆ ಗೊತ್ತಾಯಿತು. ಅಲ್ಲೆ ಬಿಡ್ತಿನಿ ಅಂದ್ರು. ಅಷ್ಟರಲ್ಲೇ ಪೊಲೀಸಿನವರು ಫೋನ್ ಮಾಡಿದರು. ವಿಜಿ ಅವರೇ ಕರ್ಕೊಂಡು ಬರಬೇಕು ಅಂದ್ರು. ಆಮೇಲೆ ಸ್ಟೇಷನ್ ಗೆ ಬಂದಿದ್ದು'' ಎಂದು ನಡೆದ ಘಟನೆಯನ್ನ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.
ಪಾನಿಪುರಿ ಕಿಟ್ಟಿ ಜೊತೆಗಿನ 20 ವರ್ಷದ 'ಸೇಡು-ಸ್ನೇಹ'ದ ಕಥೆ ಬಿಚ್ಚಿಟ್ಟಿದ್ದ ವಿಜಿ
ಹಲ್ಲೆ ಮಾಡಿದ್ದು ನಿಜ ಅಂತೆ
ಮಾರುತಿ ಗೌಡ ಅವರ ಹೇಳಿಕೆ ಪ್ರಕಾರ ದುನಿಯಾ ವಿಜಿ, ಪ್ರಸಾದ್, ಪ್ರಸಾದ್ ಡ್ರೈವರ್, ಮಣಿ ಮತ್ತು ವಿಜಿ ಅವರ ಮಗ ಕಾರಿನಲ್ಲಿದ್ದರು. ಒಂದೂವರೆ ಗಂಟೆ ಸುತ್ತಾಡಿಸಿಕೊಂಡು ಹಲ್ಲೆ ಮಾಡಿದ್ರು ಎಂಬುದು ನಿಜವಾಗಿದೆ. ಇಂದು ವಿಜಿ ಮತ್ತು ತಂಡದವರ ಜಾಮೀನು ಅರ್ಜಿಯ ಆದೇಶ ಹೊರಬೀಳಲಿದ್ದು, ಜಾಮೀನು ಸಿಗುತ್ತಾ ಅಥವಾ ಮತ್ತಷ್ಟು ದಿನ ಜೈಲಿನಲ್ಲೇ ಇರ್ಬೇಕಾ ಕಾದುನೋಡಬೇಕಿದೆ.