Don't Miss!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ, ನಿರ್ದೇಶಕ ಮಾಸ್ಟರ್ ಆನಂದ್ ಈಗ 'RJ'
Recommended Video
ನಟ, ನಿರ್ದೇಶಕ ಮಾಸ್ಟರ್ ಆನಂದ್ ಈಗ 'RJ' ಆಗಿದ್ದಾರೆ. 'ನಮ್ ರೇಡಿಯೋ'ದಲ್ಲಿ ಬರುತ್ತಿರುವ ಹೊಸ ಕಾರ್ಯಕ್ರಮಕ್ಕೆ ಮಾಸ್ಟರ್ ಆನಂದ್ ಸಾರಥ್ಯ ವಹಿಸಲಿದ್ದಾರೆ. ಈಗಾಗಲೇ ಈ ಬಗ್ಗೆ ಮಾತುಕತೆ ನಡೆದಿದ್ದು, ಆರ್ ಜೆ ಆಗಲು ಖುಷಿಯಿಂದ ಆನಂದ್ ಒಪ್ಪಿಕೊಂಡಿದ್ದಾರಂತೆ.
ಚಿಕ್ಕ ವಯಸ್ಸಿಯನಲ್ಲಿಯೇ ಅನೇಕ ಸಿನಿಮಾಗಳನ್ನು ಮಾಡಿದ್ದ ಮಾಸ್ಟರ್ ಆನಂದ್ ಈಗ ಕಿರುತೆರೆಯಲ್ಲಿ ಬಿಜಿ ಇದ್ದಾರೆ. ಒಂದು ಕಡೆ ಜೀ ಕನ್ನಡ ವಾಹಿನಿಯ 'ಕಾಮಿಡಿ ಕಿಲಾಡಿಗಳು 2' ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದರೆ, ಇನ್ನೊಂದು ಕಡೆ 'ನಿಗೂಡ ರಾತ್ರಿ' ಧಾರಾವಾಹಿಯ ನಿರ್ದೇಶನದ ಜವಾಬ್ದಾರಿ ಕೂಡ ಆನಂದ್ ವಹಿಸಿಕೊಂಡಿದ್ದಾರೆ. ಇವುಗಳ ಜೊತೆಗೆ ಈಗ ಆರ್ ಜೆ ಆಗಿ ಅಭಿಮಾನಿಗಳ ಮುಂದೆ ಆನಂದ್ ದರ್ಶನ ನೀಡಲಿದ್ದಾರೆ.
ಮಾಸ್ಟರ್ ಆನಂದ್ ಎಂದ ತಕ್ಷಣ ನೆನಪಾಗುವುದು ಕಾಮಿಡಿ. ಅದೇ ಕಾರಣದಿಂದ ಈ ಕಾರ್ಯಕ್ರಮ ಕೂಡ ಕಾಮಿಡಿ, ಫನ್ ಅಂಶಗಳನ್ನು ಒಳಗೊಂಡಿದೆಯಂತೆ. ಕೇಳುಗರಿಗೆ 100 % ಮನರಂಜನೆ ನೀಡುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಶುರು ಮಾಡಲಾಗುತ್ತಿದೆ. ವಿಭಿನ್ನ ರೀತಿಯಾಗಿ ಪ್ಲಾನ್ ಮಾಡುತ್ತಿದ್ದು 10-15 ದಿನಗಳಲ್ಲಿ ಈ ಹೊಸ ಶೋ ಶುರು ಆಗಲಿದೆ.
ಈ ಹಿಂದೆ 'ನಮ್ ರೇಡಿಯೋ'ದಲ್ಲಿ ಹೊಸ ವರ್ಷದ ವಿಶೇಷವಾಗಿ ಆನಂದ್ ಒಂದು ಕಾರ್ಯಕ್ರಮ ಮಾಡಿದ್ದರು. ಈ ಕಾರ್ಯಕ್ರಮಕ್ಕೆ ಬಂದ ದೊಡ್ಡ ಪ್ರತಿಕ್ರಿಯೆ ಈಗ ಒಂದು ಹೊಸ ಕಾರ್ಯಕ್ರಮ ಮಾಡುವ ಉತ್ಸಾಹ ನೀಡಿದೆ. ಅಂದಹಾಗೆ, ಈ ಶೋ ಪ್ರತಿ ದಿನ ಪ್ರಸಾರ ಆಗಲಿದೆ. ಬಿ.ಬಿ.ಸಿ ರೀತಿಯ ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ತರುವ ಹೊಸ ಕಾನ್ಸೆಪ್ಟ್ ಗಳನ್ನು ಮೊದಲ ಬಾರಿಗೆ ಕನ್ನಡಕ್ಕೆ 'ನಮ್ ರೇಡಿಯೋ' ಈ ಮೂಲಕ ತರುತ್ತಿದೆಂತೆ. ಸದ್ಯಕ್ಕೆ ಕಾರ್ಯಕ್ರಮದ ಪ್ಲಾನ್ ಇನ್ನೂ ನಡೆಯುತ್ತಿದೆ.