Don't Miss!
- News Mysuru Zoo: ಬೇಸಿಗೆಯಲ್ಲೂ ಮೈಸೂರು ಮೃಗಾಲಯ ಕೂಲ್.. ಕೂಲ್! ಹೇಗೆ ಗೊತ್ತಾ?
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
20 ರಿಂದ ಆರಂಭವಾಗಲಿದೆ ‘ಮತದಾನ’ !
ಕರ್ನಾಟಕದ ಕಾಶ್ಮೀರ ಎನ್ನಲಾಗುವ ತೀರ್ಥಹಳ್ಳಿಯಲ್ಲಿ ಈ ತಿಂಗಳ 20ರಿಂದ 'ಮತದಾನ" ಆರಂಭವಾಗಲಿದೆ. ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯ್ತಿಗಳ ಚುನಾವಣೆ ಮುಗಿದು 4 ತಿಂಗಳಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆಯುವುದು ಜನವರಿಯಲ್ಲಿ ಹೀಗಿರುವಾಗ ಈಗ್ಯಾವ ಚುನಾವಣೆ ಬಂತು ಎಂದಿರಾ? ಇಲ್ಲಿ ನಡೆಯುವುದು 'ಮತದಾನ " ಚಿತ್ರದ ಚಿತ್ರೀಕರಣ.
ಮಲೆನಾಡಿನ ಮಡಿಲಲ್ಲಿ ಹಾಗೂ ಯಲ್ಲಾಪುರದ ಸುತ್ತಮುತ್ತ ನಾಲ್ಕಾರು ದಿನ ಚಿತ್ರೀಕರಣ ನಡೆಯಲಿದೆ. ಕಾನೂರು ಹೆಗ್ಗಡಿತಿಯನ್ನು ರಜತಪರದೆಗೆ ಅರ್ಪಿಸಿದ ಎಚ್.ಜಿ. ನಾರಾಯಣ್ ಹಾಗೂ ಐ.ಪಿ. ಮಲ್ಲೇಗೌಡರ ಜೋಡಿ ಮಾಯಾಮೃಗ ಖ್ಯಾತಿಯ ಟಿ.ಎನ್. ಸೀತಾರಾಮ್ ನಿರ್ದೇಶನದಲ್ಲಿ ಬೆಳ್ಳಿ ತೆರೆಗೆ ನೀಡುತ್ತಿರುವ ಮತ್ತೊಂದು ಚಿತ್ರ 'ಮತದಾನ".
ಎಸ್.ಎಲ್. ಭೈರಪ್ಪ ಅವರ ರಾಜಕೀಯ ಕಥಾವಸ್ತುವಿನ ಕಾದಂಬರಿ ಆಧಾರಿತ ಚಿತ್ರ 'ಮತದಾನ"ಕ್ಕೆ ಚಿತ್ರ ಸಂಭಾಷಣೆಯನ್ನು ಟಿ.ಎನ್. ಸೀತಾರಾಮ್ ಅವರು, ಎಸ್.ಎಲ್ ಭೈರಪ್ಪನವರ ಮಾರ್ಗದರ್ಶನದಲ್ಲೇ ಬರೆಯುತ್ತಿದ್ದಾರೆ. ರಾಜಕೀಯ ಪಾತ್ರಕ್ಕೆ ಹೇಳಿ ಮಾಡಿಸಿದ ಹಾಗೂ ಈಗ ರಾಜಕೀಯದಿಂದ ತಾತ್ಕಾಲಿಕವಾಗಿ ನಿವೃತ್ತರಾಗಿರುವ ಅನಂತನಾಗ್, ಹೊಡೆದಾಟದ ಪಾತ್ರಕ್ಕೆ ಹೆಸರಾದ ದೇವರಾಜ್, ಮುಖ್ಯಮಂತ್ರಿ ಚಂದ್ರು, ಕಾನೂರು ಹೆಗ್ಗಡಿತಿ ತಾರಾ, ಅವಿನಾಶ್, ಚಂದ್ರಶೇಖರ್, ಗಿರಿಜಾ ಲೋಕೇಶ್, ಸುಂದರ್ರಾಜ್, ನಾಗೇಂದ್ರ ಶಾ ತಾರಾಗಣವಿರುವ ಈ ಚಿತ್ರದ ಸಂಗೀತ ನಿರ್ದೇಶಕರು, ಅಶ್ವತ್ ಅಂಡ್ ವೈದಿ ಜೋಡಿಯ ಅಶ್ವತ್ ಹಾಗೂ ವಿ. ಮನೋಹರ್. ಗೋಪಾಲಕೃಷ್ಣ ಅಡಿಗ, ಸಿದ್ದಲಿಂಗಯ್ಯ, ಪುರಂದರ ದಾಸರ ರಚನೆಗಳು ಮತದಾನದ ಚಿತ್ರಗೀತೆಗಳು. ಮತದಾನ ನಡೆದು, ಚಿತ್ರ ಬಿಡುಗಡೆಯಾದ ಮೇಲಷ್ಟೇ ಫಲಿತಾಂಶ.