Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮತ್ತೊಂದು ಅಪಹರಣ: ನಗರದ ಜಂಜಡ ಬದುಕಿನಲ್ಲೊಂದು ರಾಮಾಯಣ
ರಾಮಾಯಣ, ಮಹಾಭಾರತ ಮತ್ತಿತರ ಮಹಾಕಾವ್ಯಗಳು ಹಾಗೂ ಪುರಾಣಗಳಿಂದ ಕೆಲವು ಪ್ರಸಂಗಗಳನ್ನು ಹೆಕ್ಕಿ ಅವುಗಳನ್ನು ಆಧುನಿಕ ಕಣ್ಣಿನಿಂದ ನೋಡುವ ಪ್ರಯತ್ನ ಸಾಹಿತ್ಯ ಮತ್ತು ಸಿನಿಮಾ ವಲಯದಲ್ಲಿ ಬಹಳಷ್ಟು ನಡೆದಿವೆ.
ಇದೇ ದಿಸೆಯಲ್ಲಿ ''ಮತ್ತೊಂದು ಅಪಹರಣ'' ಕಿರುಚಿತ್ರವೂ ಸಾಗುತ್ತದೆ. ಸೀತಾಪಹರಣದ ಪ್ರಸಂಗವೊಂದು ಆಧುನಿಕ ನಗರ ಬದುಕಿನಲ್ಲಿ ವಿಡಂಬನೆಯ ರೂಪ ತಾಳಿರುವುದು ಕಿರುಚಿತ್ರದ ಸಾರ. ಚಿತ್ರದ ಆರಂಭಿಕ ದೃಶ್ಯದಲ್ಲೇ ಬರುವ ರಾಮ, ಲಕ್ಷ್ಮಣ ಮತ್ತು ಸೀತೆಯರ ಚಿತ್ರ ಇದನ್ನು ಪ್ರಾಸಂಗಿಕವಾಗಿ ಮೊದಲೇ ಸಂಕೇತಿಸಿಬಿಡುತ್ತದೆ.
ರಾಮಾಯಣದಲ್ಲಿ ರಾಮನ ಗಮನ ಬೇರೆಡೆ ಸೆಳೆಯುವ ಮಾಯಾಜಿಂಕೆಯ ಸ್ಥಾನದಲ್ಲಿ ವಾಟ್ಸ್ಅಪ್ನ ಪ್ರಮೋಷನ್ ದೃಶ್ಯವೊಂದು ಇಲ್ಲಿ ಬರುತ್ತದೆ. ರಾಮ ಸಂಕಷ್ಟದಲ್ಲಿರುವುದು ಗೊತ್ತಾಗಿ, ಲಕ್ಷ್ಮಣನನ್ನು ಸಹಾಯಕ್ಕೆ ಕಳುಹಿಸಲು ಯತ್ನಿಸಿ ನಕಾರಾತ್ಮಕ ಉತ್ತರ ಪಡೆದ ಜಾನಕಿ, ತಾನೇ ನೆರವಿಗೆ ಧಾವಿಸುವಾಗಲೂ ಮೇಕ್ ಅಪ್ ಮಾಡಿಕೊಂಡು ಹೊರಡುವುದು ಇವತ್ತಿನ ಬದುಕಿನ ವಿಡಂಬನೆಯಾಗಿದೆ.
ಆದರೆ ಕಿರುಚಿತ್ರದ ಅಂತ್ಯ ನೀವು ಊಹೆಯೂ ಮಾಡದ ರೀತಿಯಲ್ಲಿ ಧುತ್ತನೆ ಎದುರಾಗುತ್ತದೆ. ನಗರ ಬದುಕಿನ ದೈನಂದಿನ ಸಮಸ್ಯೆಯೊಂದನ್ನು ವಿಡಂಬನೆ ಹಾಗೂ ಹಾಸ್ಯದ ಲೇಪದಲ್ಲಿ ಚಿತ್ರಿಸಲಾಗಿದೆ. ''ಅರ್ಬನ್ ರಾಮಾಯಣ'' ಎಂಬ ಕಿರು ಚಿತ್ರಕ್ಕೆ ಆಪ್ತವಾಗಿದೆ.
ವೀರನಾರಾಯಣ ಪರಿಕಲ್ಪನೆ, ನಿರ್ದೇಶನ ಮತ್ತು ಸಂಕಲನದ ಈ ಚಿತ್ರಕ್ಕೆ ಹರ್ಷ ರಮೇಶ್ ಕ್ಯಾಮೆರಾ ಹಿಡಿದಿದ್ದಾರೆ. ಮಾಮೂಲಿಯ ನಿರೂಪಣಾ ಶೈಲಿಯ ಹೊರತಾಗಿ, ದೃಶ್ಯಗಳ ಮೂಲಕವೇ ಕಥೆ ಹೇಳಿರುವುದು ಚಿತ್ರದ ವಿಶೇಷ. ಕಿರುಚಿತ್ರದ ಲಿಂಕ್ ಇಲ್ಲಿದೆ: