Don't Miss!
- News 21 ರಾಜ್ಯ, 102 ಲೋಕಸಭಾ ಸ್ಥಾನ, 1625 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲು ಮತದಾರ ಪ್ರಭು ಸಿದ್ಧ!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮತ್ತೊಂದು ಅಪಹರಣ: ನಗರದ ಜಂಜಡ ಬದುಕಿನಲ್ಲೊಂದು ರಾಮಾಯಣ
ರಾಮಾಯಣ, ಮಹಾಭಾರತ ಮತ್ತಿತರ ಮಹಾಕಾವ್ಯಗಳು ಹಾಗೂ ಪುರಾಣಗಳಿಂದ ಕೆಲವು ಪ್ರಸಂಗಗಳನ್ನು ಹೆಕ್ಕಿ ಅವುಗಳನ್ನು ಆಧುನಿಕ ಕಣ್ಣಿನಿಂದ ನೋಡುವ ಪ್ರಯತ್ನ ಸಾಹಿತ್ಯ ಮತ್ತು ಸಿನಿಮಾ ವಲಯದಲ್ಲಿ ಬಹಳಷ್ಟು ನಡೆದಿವೆ.
ಇದೇ ದಿಸೆಯಲ್ಲಿ ''ಮತ್ತೊಂದು ಅಪಹರಣ'' ಕಿರುಚಿತ್ರವೂ ಸಾಗುತ್ತದೆ. ಸೀತಾಪಹರಣದ ಪ್ರಸಂಗವೊಂದು ಆಧುನಿಕ ನಗರ ಬದುಕಿನಲ್ಲಿ ವಿಡಂಬನೆಯ ರೂಪ ತಾಳಿರುವುದು ಕಿರುಚಿತ್ರದ ಸಾರ. ಚಿತ್ರದ ಆರಂಭಿಕ ದೃಶ್ಯದಲ್ಲೇ ಬರುವ ರಾಮ, ಲಕ್ಷ್ಮಣ ಮತ್ತು ಸೀತೆಯರ ಚಿತ್ರ ಇದನ್ನು ಪ್ರಾಸಂಗಿಕವಾಗಿ ಮೊದಲೇ ಸಂಕೇತಿಸಿಬಿಡುತ್ತದೆ.
ರಾಮಾಯಣದಲ್ಲಿ ರಾಮನ ಗಮನ ಬೇರೆಡೆ ಸೆಳೆಯುವ ಮಾಯಾಜಿಂಕೆಯ ಸ್ಥಾನದಲ್ಲಿ ವಾಟ್ಸ್ಅಪ್ನ ಪ್ರಮೋಷನ್ ದೃಶ್ಯವೊಂದು ಇಲ್ಲಿ ಬರುತ್ತದೆ. ರಾಮ ಸಂಕಷ್ಟದಲ್ಲಿರುವುದು ಗೊತ್ತಾಗಿ, ಲಕ್ಷ್ಮಣನನ್ನು ಸಹಾಯಕ್ಕೆ ಕಳುಹಿಸಲು ಯತ್ನಿಸಿ ನಕಾರಾತ್ಮಕ ಉತ್ತರ ಪಡೆದ ಜಾನಕಿ, ತಾನೇ ನೆರವಿಗೆ ಧಾವಿಸುವಾಗಲೂ ಮೇಕ್ ಅಪ್ ಮಾಡಿಕೊಂಡು ಹೊರಡುವುದು ಇವತ್ತಿನ ಬದುಕಿನ ವಿಡಂಬನೆಯಾಗಿದೆ.
ಆದರೆ ಕಿರುಚಿತ್ರದ ಅಂತ್ಯ ನೀವು ಊಹೆಯೂ ಮಾಡದ ರೀತಿಯಲ್ಲಿ ಧುತ್ತನೆ ಎದುರಾಗುತ್ತದೆ. ನಗರ ಬದುಕಿನ ದೈನಂದಿನ ಸಮಸ್ಯೆಯೊಂದನ್ನು ವಿಡಂಬನೆ ಹಾಗೂ ಹಾಸ್ಯದ ಲೇಪದಲ್ಲಿ ಚಿತ್ರಿಸಲಾಗಿದೆ. ''ಅರ್ಬನ್ ರಾಮಾಯಣ'' ಎಂಬ ಕಿರು ಚಿತ್ರಕ್ಕೆ ಆಪ್ತವಾಗಿದೆ.
ವೀರನಾರಾಯಣ ಪರಿಕಲ್ಪನೆ, ನಿರ್ದೇಶನ ಮತ್ತು ಸಂಕಲನದ ಈ ಚಿತ್ರಕ್ಕೆ ಹರ್ಷ ರಮೇಶ್ ಕ್ಯಾಮೆರಾ ಹಿಡಿದಿದ್ದಾರೆ. ಮಾಮೂಲಿಯ ನಿರೂಪಣಾ ಶೈಲಿಯ ಹೊರತಾಗಿ, ದೃಶ್ಯಗಳ ಮೂಲಕವೇ ಕಥೆ ಹೇಳಿರುವುದು ಚಿತ್ರದ ವಿಶೇಷ. ಕಿರುಚಿತ್ರದ ಲಿಂಕ್ ಇಲ್ಲಿದೆ: