Don't Miss!
- News Lok Sabha Election 2024 Phase 1 Polling LIVE: ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಚ್ಛೇದನ, ಲೈಂಗಿಕ ದೌರ್ಜನ್ಯದ ಬಗ್ಗೆ ರಘು ದೀಕ್ಷಿತ್ ಪತ್ನಿ ಮಯೂರಿ ಟ್ವೀಟ್!
Recommended Video
ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಗಾಯಕಿ ಚಿನ್ಮಯಿ ಶ್ರೀ ಪಾದ್ ಆರೋಪ ಮಾಡಿದ್ದರು. ಈ ಆರೋಪವನ್ನು ರಘು ದೀಕ್ಷಿತ್ ಕೂಡ ಒಪ್ಪಿಕೊಂಡಿದ್ದರು.
ಈ ಬಗ್ಗೆ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದ ರಘು ದೀಕ್ಷಿತ್ ''ಆ ಘಟನೆ ನಡೆದಿರುವುದು ನಿಜ. ತಬ್ಬಿಕೊಂಡು, ಮುತ್ತುಕೊಡಲು ಯತ್ನಿಸಿದ್ದು ನಿಜ ಆದರೆ, ಚಿನ್ಮಯಿ ಅವರು ಹೇಳಿದ ಎಲ್ಲವೂ ಸತ್ಯವಲ್ಲ'' ಎಂದಿದ್ದರು.
'ತಬ್ಬಿಕೊಂಡು, ಮುತ್ತುಕೊಡಲು ಪ್ರಯತ್ನ ಮಾಡಿದ್ದು ನಿಜ', ಆದರೆ.. : ರಘು ದೀಕ್ಷಿತ್ ನೇರ ಸ್ಪಷ್ಟನೆ
ತಮ್ಮ ಮೇಲೆ ಬಂದಿದ್ದ ಆರೋಪದ ಬಗ್ಗೆ ಟ್ವೀಟ್ ಮಾಡಿದ್ದ ರಘು ದೀಕ್ಷಿತ್ ತಮ್ಮ ವಿಚ್ಛೇದನದ ವಿಷಯವನ್ನು ಅದರಲ್ಲಿ ಪ್ರಸ್ತಾಪ ಮಾಡಿದ್ದರು. ಆದರೆ, ಈ ಬಗ್ಗೆ ಈಗ ಅವರ ಪತ್ನಿ ಮಯೂರಿ ಅಸಮಾಧಾನಗೊಂಡಿರುವ ಹಾಗೆ ಕಾಣುತ್ತಿದೆ.
ರಘು ದೀಕ್ಷಿತ್ ವಿಚಾರವಾಗಿ ಮಯೂರಿ ಉಪಾದ್ಯ ಸರಣಿ ಟ್ವೀಟ್ ಮಾಡಿದ್ದಾರೆ. ಮುಂದೆ ಓದಿ..
ವಿಚ್ಚೇದನದ ವಿಷಯ ಇಲ್ಲಿ ಅನವಶ್ಯಕ.
''ನಮ್ಮ ಮದುವೆ ಮತ್ತು ವಿಚ್ಚೇದನದ ವಿಷಯ ಇಲ್ಲಿ ಅನವಶ್ಯಕ. ನಾನು ಮೊದಲು ಹೆಣ್ಣು, ನಂತರ ಹೆಂಡತಿ. ಒಬ್ಬಸೆಲಿಬ್ರಿಟಿ ಆಗಿರಲಿ, ಆಗಿರದೆ ಇರಲಿ ಪ್ರತಿಯೊಬ್ಬ ಪ್ರಜೆಯ ಗೌರವವೂ ಮುಖ್ಯ. ನನಗೆ ಈ ಘಟನೆಯ ಬಗ್ಗೆ ಸತ್ಯಾಸತ್ಯತೆಗಳೆನೆಂಬುದು ತಿಳಿದಿಲ್ಲ.'' - ಮಯೂರಿ ಉಪಾದ್ಯ, ನೃತ್ಯಗಾರ್ತಿ
ನನ್ನ ನಿಲುವು ಸ್ಪಷ್ಟವಾಗಿದೆ
''ಆದರೆ, ಇಂತಹ ವಿಷಯಗಳ ಬಗ್ಗೆ ಮಾತಾಡಲು, ತುಂಬ ಧೈರ್ಯ ಬೇಕು. ಅದೂ ಸಾಮಾಜಿಕ ಜಾಲತಾಣಗಳಲ್ಲಿಯೇ ಆಗಿರಲಿ ಅವರ ಆ ಧೈರ್ಯ ಮೆಚ್ಚುವಂತದ್ದು. ಒಂದು ವೇಳೆ ಲೈಂಗಿಕ ದೌರ್ಜನ್ಯ ನಡೆದಿದ್ದರೆ ನನ್ನ ನಿಲುವು ಅದರ ಬಗ್ಗೆ ಸ್ಪಷ್ಟವಾಗಿದೆ.'' - ಮಯೂರಿ ಉಪಾದ್ಯ, ನೃತ್ಯಗಾರ್ತಿ
ಗಾಯಕ ರಘು ದೀಕ್ಷಿತ್ - ನಾಟ್ಯ 'ಮಯೂರಿ' ಲವ್ ಸ್ಟೋರಿ ಬಹಿರಂಗ
|
ಎಲ್ಲ ಸಂತ್ರಸ್ಥತೆಯರಿಗೆ ನನ್ನ ಬೆಂಬಲವಿದೆ
''ಯಾರಿಗೆ ತನ್ನ ನಡೆವಳಿಕೆ ಬಗ್ಗೆ ಪಶ್ಚಾತ್ತಾಪವಿರುತ್ತದೆಯೋ ಅಂತವರಿಗೆ ಶಿಕ್ಷೆ ಆಗಬೇಕು. ಇದರಿಂದ ಬೇರೆ ಗಂಡಸರು ಹೆಣ್ಣಿನ ಗೌರವವನ್ನು ಕುಂದಿಸಲು ಧೈರ್ಯ ಮಾಡುವುದಿಲ್ಲ. ನಾನು ಎಲ್ಲ ಸಂತ್ರಸ್ಥತೆಯರಿಗೆ ನನ್ನ ಬೆಂಬವಿದೆ.'' - ಮಯೂರಿ ಉಪಾದ್ಯ, ನೃತ್ಯಗಾರ್ತಿ
ಹೆಂಡತಿ ಜೊತೆ ನನ್ನ ಸಂಬಂಧ ಚೆನ್ನಾಗಿರಲಿಲ್ಲ
ಇದಕ್ಕೂ ಮುಂಚೆ ಟ್ವೀಟ್ ಮಾಡಿದ್ದ ರಘು ದೀಕ್ಷಿತ್ ''ನನ್ನ ಹೆಂಡತಿ ಮತ್ತು ನನ್ನ ನಡುವಿನ ಸಂಬಂಧ ಅಷ್ಟೊಂದು ಚೆನ್ನಾಗಿರಲಿಲ್ಲ. ನನಗೆ ಒಂದು ಕಂಫರ್ಟ್ ಬೇಕಾಗಿತ್ತು. ಆ ಕ್ಷಣವನ್ನು ನಾನು ತಪ್ಪಾಗಿ ಅರ್ಥ ಮಾಡಿಕೊಂಡೆ. ಆದರೆ, ಚಿನ್ಮಯಿ ತಮ್ಮ ಪೋಸ್ಟ್ನಲ್ಲಿ ತಿಳಿಸಿರುವ ಎಲ್ಲ ಅಂಶಗಳನ್ನು ನಾನು ಒಪ್ಪುವುದಿಲ್ಲ. ನಾನೊಬ್ಬ ಭಕ್ಷಕನೇ..? ಖಂಡಿತಾ ಅಲ್ಲ.'' ಎಂದಿದ್ದರು.
ರಘು ದೀಕ್ಷಿತ್ ವೃತ್ತಿ ಬದುಕಿನ ಬಗ್ಗೆ ಯಾರಿಗೂ ಗೊತ್ತಿಲ್ಲದ ಸತ್ಯಗಳು!
ನನ್ನ ಹೆಂಡತಿಗೆ ನಾನು ಕ್ಷಮೆ ಕೇಳುವೆ
'ನನ್ನಿಂದ ದೂರವಾದ ನನ್ನ ಹೆಂಡತಿಗೆ ನಾನು ಕ್ಷಮೆ ಕೇಳುವೆ. ಆಕೆ ನಿಜಕ್ಕೂ ಅದ್ಭುತ ವ್ಯಕ್ತಿ. ಹೃದಯದಿಂದ ಸೌಂದರ್ಯವತಿಯೂ ಹೌದು. ನನ್ನ ಅಭಿಮಾನಿಗಳು, ನನ್ನ ಸಂಗೀತವನ್ನು ಪ್ರೀತಿಸುವ ಮತ್ತು ನನ್ನನ್ನು ಇಷ್ಟಪಡುವ ಎಲ್ಲರಿಗೂ ನಾನು ಕ್ಷಮೆ ಕೇಳುತ್ತೇನೆ. ಮುಂದೊಂದು ದಿನ ಇದನ್ನು ಸರಿಯಾಗುತ್ತದೆ ಎಂಬ ಭರವಸೆ ಇದೆ.'' - ರಘು ದೀಕ್ಷಿತ್, ಸಂಗೀತ ನಿರ್ದೇಶಕ
ಮೂರು ವರ್ಷಗಳಿಂದ ದೂರವಿದ್ದೇನೆ
''ನಾನು ನನ್ನ ಹೆಂಡತಿಗೆ ಒಳ್ಳೆಯ ಗಂಡ ಆಗಿರಲಿಲ್ಲ. ನಾನು ಮೂರು ವರ್ಷಗಳಿಂದ ಆಕೆಯಿಂದ ದೂರವಿದ್ದೇನೆ. ನಾವು ಇನ್ನೇನು ಡೈವೋರ್ಸ್ ಪ್ರಕ್ರಿಯೆಯನ್ನು ಕೊನೆಯ ಹಂತದಲ್ಲಿ ಇದ್ದೇವೆ. ನನ್ನ ಕಡೆಯಿಂದ ಡೈವೋರ್ಸ್ ಪ್ರಕ್ರಿಯೆ ಸರಾಗವಾಗಿ ನಡೆಯಲೆಂದು ಕೆಲವು ವೃತ್ತಿಪರ ಸಲಹೆಗಾರರ ಸಂಪರ್ಕವನ್ನು ಪಡೆದಿದ್ದೇನೆ.'' - ರಘು ದೀಕ್ಷಿತ್, ಸಂಗೀತ ನಿರ್ದೇಶಕ