'ಕಳ್ಬೆಟ್ಟದ ದರೋಡೆಕೋರರು' ಚಿತ್ರ ವೀಕ್ಷಿಸಿದ ಮೀನಾ ತೂಗುದೀಪ
ತನ್ನ ಹೊಸ ರೀತಿಯ ಹಾಡುಗಳ ಹಾಗೂ ಟ್ರೇಲರ್ ಮೂಲಕ ಗಮನ ಸೆಳೆದಿದ್ದ 'ಕಳ್ಬೆಟ್ಟದ ದರೋಡೆಕೊರರು' ಚಿತ್ರ ಇಂದು ಬಿಡುಗಡೆಯಾಗಿದೆ. ಪ್ರೇಕ್ಷಕರ ಜೊತೆಗೆ ನಟ ದರ್ಶನ್ ತಾಯಿ ಮೀನಾ ತೂಗುದೀಪ ಕೂಡ ಚಿತ್ರವನ್ನು ವೀಕ್ಷಿಸಿದ್ದಾರೆ.
ಸಿನಿಮಾ ನೋಡಿ ಮಾತನಾಡಿದ ಅವರು "ತುಂಬ ಚೆನ್ನಾಗಿ ಸಿನಿಮಾ ಬಂದಿದೆ. ನನಗೆ ತುಂಬ ಇಷ್ಟ ಆಗಿದೆ. ಕಾದಂಬರಿ ಆಧಾರಿತ ಚಿತ್ರಗಳು ಆಗ ಪುಟ್ಟಣ್ಣ ಕಣಕಾಲ್ ಮಾಡುತ್ತಿದ್ದರು. ಈ ಚಿತ್ರದ ಡೈರೆಕ್ಷನ್, ಮ್ಯೂಸಿಕ್ ತುಂಬ ಚೆನ್ನಾಗಿದೆ. ಎಲ್ಲರೂ ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ. ಸಿನಿಮಾ ಮಾಡುವ ತಯಾರಿ ಎಷ್ಟು ಕಷ್ಟ ಅಂತ ನನಗೆ ಗೊತ್ತಿದೆ. ಸಿನಿಮಾ ತುಂಬ ಚೆನ್ನಾಗಿದೆ. ಈ ಸಿನಿಮಾ ಪಬ್ಲಿಸಿಟಿ ಆಗಬೇಕು." ಎಂದು ಚಿತ್ರದ ಬಗ್ಗೆ ಮಾತನಾಡಿದ್ದಾರೆ.

ಸಿನಿಮಾಗೆ ಸಿಕ್ಕ ರೆಸ್ಪಾನ್ಸ್ ಕಂಡು ಚಿತ್ರತಂಡ ಕೂಡ ಖುಷಿಯಲ್ಲಿದೆ. ಮಾರ್ನಿಂಗ್ ಶೋ ಮುಗಿಸಿಕೊಂಡು ಬಂದ ಜನರ ಪ್ರತಿಕ್ರಿಯೆ ಉತ್ತಮವಾಗಿದೆ. ಹಳ್ಳಿಯ ಸೋಗಡಿನ ಕಥೆ ಎಲ್ಲರಿಗೆ ಆಪ್ತವಾಗಿದೆ.
ದೀಪಕ್ ಮಧುವನಹಳ್ಳಿ ಚಿತ್ರದ ನಿರ್ದೇಶನ ಮಾಡಿದ್ದಾರೆ. ನಟರಾಜ್ ಹಾಗೂ ಶ್ವೇತಾ ಪ್ರಸಾದ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಅನೂಪ್ ಸೀಳೀನ್ ಮತ್ತೆ ತಮ್ಮ ಸಂಗೀತ ಮೂಲಕ ಮ್ಯಾಜಿಕ್ ಮಾಡಿದ್ದಾರೆ.


Click it and Unblock the Notifications











