Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕಳ್ಬೆಟ್ಟದ ದರೋಡೆಕೋರರು' ಚಿತ್ರ ವೀಕ್ಷಿಸಿದ ಮೀನಾ ತೂಗುದೀಪ
ತನ್ನ ಹೊಸ ರೀತಿಯ ಹಾಡುಗಳ ಹಾಗೂ ಟ್ರೇಲರ್ ಮೂಲಕ ಗಮನ ಸೆಳೆದಿದ್ದ 'ಕಳ್ಬೆಟ್ಟದ ದರೋಡೆಕೊರರು' ಚಿತ್ರ ಇಂದು ಬಿಡುಗಡೆಯಾಗಿದೆ. ಪ್ರೇಕ್ಷಕರ ಜೊತೆಗೆ ನಟ ದರ್ಶನ್ ತಾಯಿ ಮೀನಾ ತೂಗುದೀಪ ಕೂಡ ಚಿತ್ರವನ್ನು ವೀಕ್ಷಿಸಿದ್ದಾರೆ.
ಸಿನಿಮಾ ನೋಡಿ ಮಾತನಾಡಿದ ಅವರು "ತುಂಬ ಚೆನ್ನಾಗಿ ಸಿನಿಮಾ ಬಂದಿದೆ. ನನಗೆ ತುಂಬ ಇಷ್ಟ ಆಗಿದೆ. ಕಾದಂಬರಿ ಆಧಾರಿತ ಚಿತ್ರಗಳು ಆಗ ಪುಟ್ಟಣ್ಣ ಕಣಕಾಲ್ ಮಾಡುತ್ತಿದ್ದರು. ಈ ಚಿತ್ರದ ಡೈರೆಕ್ಷನ್, ಮ್ಯೂಸಿಕ್ ತುಂಬ ಚೆನ್ನಾಗಿದೆ. ಎಲ್ಲರೂ ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ. ಸಿನಿಮಾ ಮಾಡುವ ತಯಾರಿ ಎಷ್ಟು ಕಷ್ಟ ಅಂತ ನನಗೆ ಗೊತ್ತಿದೆ. ಸಿನಿಮಾ ತುಂಬ ಚೆನ್ನಾಗಿದೆ. ಈ ಸಿನಿಮಾ ಪಬ್ಲಿಸಿಟಿ ಆಗಬೇಕು." ಎಂದು ಚಿತ್ರದ ಬಗ್ಗೆ ಮಾತನಾಡಿದ್ದಾರೆ.
ಸಿನಿಮಾಗೆ ಸಿಕ್ಕ ರೆಸ್ಪಾನ್ಸ್ ಕಂಡು ಚಿತ್ರತಂಡ ಕೂಡ ಖುಷಿಯಲ್ಲಿದೆ. ಮಾರ್ನಿಂಗ್ ಶೋ ಮುಗಿಸಿಕೊಂಡು ಬಂದ ಜನರ ಪ್ರತಿಕ್ರಿಯೆ ಉತ್ತಮವಾಗಿದೆ. ಹಳ್ಳಿಯ ಸೋಗಡಿನ ಕಥೆ ಎಲ್ಲರಿಗೆ ಆಪ್ತವಾಗಿದೆ.
Challenging star @dasadarshan Sir's mother #MeenaToogudeepaSrinivas madam has appreciated our #KalbettadaDarodekoraru film. Thank you so much Madam 🙏🏼 @Dbeatsmusik @DBossOfficialFC @DTYIFCKunigal @DarshanTrends @DarshanFanz pic.twitter.com/wapuPZGFKW
— DeepakMadhuvanahalli (@twitdeepakk) February 22, 2019
ದೀಪಕ್ ಮಧುವನಹಳ್ಳಿ ಚಿತ್ರದ ನಿರ್ದೇಶನ ಮಾಡಿದ್ದಾರೆ. ನಟರಾಜ್ ಹಾಗೂ ಶ್ವೇತಾ ಪ್ರಸಾದ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಅನೂಪ್ ಸೀಳೀನ್ ಮತ್ತೆ ತಮ್ಮ ಸಂಗೀತ ಮೂಲಕ ಮ್ಯಾಜಿಕ್ ಮಾಡಿದ್ದಾರೆ.