Don't Miss!
- News Bengaluru Heat: ಏ.25 ರಂದು ನಗರದಲ್ಲಿ ಅತ್ಯಧಿಕ ತಾಪಮಾನ: 12 ವರ್ಷಗಳ ದಾಖಲೆ ಉಡೀಸ್
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಗ್ಗೇಶ್ ಮೇಲೆ ನಡೆದಿರುವುದು ಗೂಂಡಾಗಿರಿ: ನಟಿ ಮೇಘನಾ ಗಾಂವ್ಕರ್ ಆಕ್ರೋಶ
ಹಿರಿಯ ನಟ ಜಗ್ಗೇಶ್ ಮೇಲೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ ಘಟನೆಯನ್ನು ನಟಿ ಮೇಘನಾ ಗಾಂವ್ಕರ್ ಖಂಡಿಸಿದ್ದಾರೆ.
ಟ್ವಿಟ್ಟರ್ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ನಟಿ ಮೇಘನಾ, 'ನಿನ್ನೆ ಏನಾಯಿತು ಎಂದು ನಾನು ನೋಡಿದೆ. ನಿಮ್ಮಂಥಹಾ ಹಿರಿಯ ನಟರನ್ನು ಹೀಗೆ ನಡೆಸಿಕೊಳ್ಳಬಾರದಿತ್ತು. ಈ ರೀತಿಯ ಗೂಂಡಾಗಿರಿಯನ್ನು ಸಹಿಸಿಕೊಳ್ಳುವುದು ಅಸಾಧ್ಯ. ನೀವೊಬ್ಬ ಅದ್ಭುತ ವ್ಯಕ್ತಿ, ನಿಮ್ಮ ಬಗ್ಗೆ ಗೌರವ ಸದಾ ಇದ್ದೇ ಇರುತ್ತದೆ' ಎಂದಿದ್ದಾರೆ ಮೇಘನಾ ಗಾಂವ್ಕರ್.
ಮತ್ತೊಂದು ಟ್ವೀಟ್ನಲ್ಲಿ, 'ನಾನು ಜಗ್ಗೇಶ್ ಹಾಗೂ ದರ್ಶನ್ ಇಬ್ಬರಿಗೂ ಗೌರವ ಕೊಡುತ್ತೇನೆ. ಅವರಿಬ್ಬರೂ ಅದ್ಭುತವಾದ ವ್ಯಕ್ತಿಗಳು ಮತ್ತು ಕಲಾವಿದರು. ಜಗ್ಗೇಶ್ v/s ದರ್ಶನ್ ಎಂಬ ಚರ್ಚೆಗೆ ನಾವು ಬೆಂಬಲ ನೀಡಬಾರದು, ಕಲಾವಿದರಾಗಿ ನಾವೆಲ್ಲರೂ ಒಂದೇ ಮತ್ತು ಎಲ್ಲ ಕಲಾವಿದರಿಗೂ ಗೌರವ ಸಿಗಲೇ ಬೇಕು ಎಂದು ಮೇಘನಾ ಹೇಳಿದ್ದಾರೆ.
ನಟಿ ಮೇಘನಾ ಗಾಂವ್ಕರ್ ಹಾಗೂ ಜಗ್ಗೇಶ್ 'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಆ ಸಿನಿಮಾವನ್ನು ಕವಿರಾಜ್ ನಿರ್ದೇಶಿಸಿದ್ದರು. ಸಿನಿಮಾ ಬಗ್ಗೆ ಒಳ್ಳೆಯ ವಿಮರ್ಶೆಗಳು ಕೇಳಿಬಂದಿದ್ದವು.
ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ ಬಳಿಕ ನಟ ಜಗ್ಗೇಶ್ ಅವರಿಗೆ ಸಿನಿಮಾ ರಂಗದ ಹಲವರಿಂದ ಬೆಂಬಲ ವ್ಯಕ್ತವಾಗುತ್ತಿದೆ.
Recommended Video
ಬಿಗ್ಬಾಸ್ ವಿನ್ನರ್ ಶೈನ್ ಶೆಟ್ಟಿ ಸಹ ಬೆಂಬಲ ವ್ಯಕ್ತಪಡಿಸಿದ್ದು, 'ಜಗ್ಗೇಶ್ ಅಣ್ಣ ನಿಮ್ಮ ಇಷ್ಟು ವರ್ಷದ ಕಲಾ ಸೇವೆ , ನಿಮ್ಮ ನಟನೆ ಇದನೆಲ್ಲ ನೋಡುತ್ತ ಬೆಳೆದ ನಿಮ್ಮ ಭಕ್ತ ಅಭಿಮಾನಿಗಳು ,ಕಲಾವಿದರು ನಾವು. ಬೇಸರ ಮಾಡಿಕೊಳ್ಳ ಬೇಡಿ ಅಣ್ಣ ನಮಗೆ ನಿಮ್ಮ ಮೇಲಿನ ಪ್ರೀತಿ ಗೌರವ ಇನ್ನೂ ಹತ್ತು ಪಟ್ಟು ಜಾಸ್ತಿ ಆಗುವುದೇ ಹೊರತು, ಯಾರೇನೇ ಅಂದರು ಊರೇನೆ ಅಂದರು ಯಾವುದೇ ಕಾರಣಕ್ಕೂ ಕಮ್ಮಿ ಆಗದು' ಎಂದು ಹೇಳಿದ್ದಾರೆ.