Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಡಿಯೋ ವೈರಲ್; ಮೇಘನಾ ರಾಜ್ ಹೆಸರಿನಲ್ಲಿ ಮೂಡಿದ ಚಿರಂಜೀವಿ ಫೋಟೋ
ನಟ ಚಿರಂಜೀವಿ ಅಗಲಿಕೆಯ ಬಳಿಕ ಅವರ ಅಭಿಮಾನಿಗಳು ಒಂದಲ್ಲೊಂದು ರೀತಿಯಲ್ಲಿ ಅವರನ್ನು ನೆನಪಿಸಿಕೊಳ್ಳುತ್ತಿರುತ್ತಾರೆ. ಇದೀಗ ಅಭಿಮಾನಿಯೊಬ್ಬನ ಕೈಯಲ್ಲಿ ಅರಳಿದ ಚಿರಂಜೀವಿ ಫೋಟೋವೀಗ ಎಲ್ಲರ ಗಮನ ಸೆಳೆಯುತ್ತಿದೆ. ಮೇಘನಾ ರಾಜ್ ಹೆಸರನ್ನು ಬಳಸಿ ಕಲಾವಿದ ಚಿರಂಜೀವಿ ಅವರ ಫೋಟೋವನ್ನು ಬಿಡಿಸಿದ್ದಾರೆ.
ಮೇಘನಾ ಹೆಸರಿನಲ್ಲಿ ಅರಳಿದ ಪತಿಯ ಫೋಟೋಗೆ ಮೇಘನಾ ಫಿದಾ ಆಗಿದ್ದಾರೆ. ಅಭಿಮಾನಿ ಫೋಟೋ ಬಿಡಿಸುತ್ತಿರುವ ವಿಡಿಯೋವನ್ನು ಮೇಘನಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಮೇಘನಾ ಮತ್ತು ಚಿರು ಫ್ಯಾನ್ ಪೇಜ್ ಗಳಲ್ಲೂ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇತ್ತೀಚಿಗೆ ಮೇಘನಾ ರಾಜ್ ಅವರ ಸೀಮಂತದ ಫೋಟೋವೊಂದನ್ನು ಕಲಾವಿದ ಕರಣ್ ಆಚಾರ್ಯ ಎಡಿಟ್ ಮಾಡಿದ್ದರು. ಮೇಘನಾ ಕೈ ಹಿಡಿದು ಚಿರಂಜೀವಿ ಕರೆದುಕೊಂಡು ಹೋಗುತ್ತಿರುವ ಹಾಗೆ ಎಡಿಟ್ ಮಾಡಿದ್ದರು. ಈ ಫೋಟೋ ಸಹ ನೆಟ್ಟಿಗರ ಹೃದಯ ಮುಟ್ಟಿತ್ತು. ಸೀಮಂತ ಸಮಯದಲ್ಲಿ ಗಂಡ ಜೊತೆಯಲ್ಲಿರಬೇಕು ಎಂಬ ಆಸೆ, ಕನಸು ಪ್ರತಿಯೊಬ್ಬ ಪತ್ನಿಗೂ ಇರುತ್ತೆ. ಕಲಾವಿದ ಕರಣ್ ಆಚಾರ್ಯ ಆ ಆಸೆಯನ್ನು ಫೋಟೋ ರೂಪದಲ್ಲಿ ನೆರವೇರಿಸಿದ್ದರು.
ಅಂದಹಾಗೆ ಮೇಘನಾ ಸದ್ಯ ಮುದ್ದು ಮಗುವಿನ ಆರೈಕೆಯಲ್ಲಿದ್ದಾರೆ. ಇತ್ತೀಚಿಗೆ ಮೇಘನಾ ಮಗು ಸೇರಿದಂತೆ ಇಡೀ ಕುಟುಂಬಕ್ಕೆ ಕೊರೊನಾ ಪಾಸಿಟಿವ್ ಬಂದಿತ್ತು. ಸುಂದರ್ ರಾಜ್ ಮತ್ತು ಪತ್ನಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಕೊಂಡಿದ್ದಾರೆ. ಮೇಘನಾ ಮತ್ತು ಮಗು ಮನೆಯಲ್ಲಿ ಕ್ವಾರಂಟೇನ್ ಆಗಿ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆದುಕೊಂಡಿದ್ದಾರೆ.