Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲಾಕ್ಡೌನ್ನಲ್ಲಿ ಹೊಸ ಸಾಹಸ ಮಾಡಿದ ಮಿಮಿಕ್ರಿ ದಯಾನಂದ್
ಕನ್ನಡದ ಹಾಸ್ಯ ನಟ ಹಾಗೂ ಮಿಮಿಕ್ರಿ ಕಲಾವಿದ ದಯಾನಂದ್ ಲಾಕ್ಡೌನ್ ವೇಳೆ ಹೊಸ ಸಾಹಸ ಮಾಡಿ ಗಮನ ಸೆಳೆದಿದ್ದಾರೆ. ಇಷ್ಟು ದಿನ ತೆರೆಮೇಲೆ ತಮ್ಮ ನಟನೆ ಮೂಲಕ ಪ್ರೇಕ್ಷಕರನ್ನು ನಕ್ಕು ನಗಿಸುತ್ತಿದ್ದ ದಯಾನಂದ್ ಈಗ ಮೊದಲ ಸಲ ಆಕ್ಷನ್ ಕಟ್ ಹೇಳಿದ್ದಾರೆ.
ಹೌದು, ದಯಾನಂದ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ವಿಶೇಷ ಅಂದ್ರೆ ಲಾಕ್ಡೌನ್ ಸಮಯದಲ್ಲಿ ಸಿನಿಮಾ ಚಿತ್ರೀಕರಣ ಮಾಡಿರುವುದು ಸಾಹಸವೇ ಸರಿ.
59 ವರ್ಷ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ತಮ್ಮಮಗಳನ್ನು ಕಳೆದುಕೊಂಡು ಅನುಭವಿಸುವ ನೋವಿನ ಕಥೆಯ ಸುತ್ತ ಚಿತ್ರಕಥೆ ಮಾಡಲಾಗಿದೆ. ಜೀವನದಲ್ಲಿ ಅನೇಕ ಸಲ ಅನಿರೀಕ್ಷಿತ ಘಟನೆಗಳು ನಡೆಯುತ್ತದೆ, ಇದು ಜೀವನಕ್ಕೆ ತಿರುವು ಕೊಡುವ ಸಂಗತಿಗಳು ಆಗಿರಬಹುದು, ಇಂತಹ ಘಟನೆಯನ್ನು ಆಧರಿಸಿ ಸಿನಿಮಾ ಮಾಡಿದ್ದು, ಅದಕ್ಕೆ 'ಅನಿರೀಕ್ಷಿತ' ಎಂದು ಹೆಸರು ಇಡಲಾಗಿದೆ.
ಅಂದ್ಹಾಗೆ, ಇಡೀ ಚಿತ್ರದಲ್ಲಿ ನಟಿಸಿರುವ ಕೇವಲ ಎರಡೇ ಪಾತ್ರ. ಈ ಸಿನಿಮಾಗಾಗಿ ಕೆಲಸ ಮಾಡಿರುವುದು ಬರಿ 13 ಜನ ತಂತ್ರಜ್ಞರು ಮತ್ತು ಸಿಬ್ಬಂದಿಗಳು. ಒಂದೇ ಸ್ಥಳದಲ್ಲಿ ನಾಲ್ಕು ಲೋಕೇಶನ್ಗಳನ್ನಾಗಿ ವಿಂಗಡಿಸಿ ಚಿತ್ರೀಕರಣ ಮಾಡಲಾಗಿದೆ.
ಪುನೀತ್-ಕೃಷ್ಣ ಚಿತ್ರದ ಕುರಿತು ಥ್ರಿಲ್ಲಿಂಗ್ ಸುದ್ದಿ: ಸುಳ್ಳು ಎಂದ 'ಹೆಬ್ಬುಲಿ' ನಿರ್ದೇಶಕ
ಎಸ್ಕೆ ಟಾಕೀಸ್ ಲಾಂಛನದಲ್ಲಿ ಶಾಂತಕುಮಾರ್ ಈ ಚಿತ್ರ ನಿರ್ಮಾಣ ಮಾಡಿದ್ದು, ಸಂತೋಷ್ ಕೊಡಂಕೇರಿ, ಮಿಮಿಕ್ರಿ ದಯಾನಂದ್ ಸಹ ನಿರ್ಮಾಪಕರು. ಮಿಮಿಕ್ರಿ ದಯಾನಂದ್ ಕಥೆ ಬರೆದು ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ನೆಳ್ಳುಳ್ಳಿ ರಾಜಶೇಖರ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
Recommended Video
ಗುರು ಕಿರಣ್ ಸಂಗೀತ ಸಂಯೋಜನೆ, ಜೀವನ್ ಗೌಡ ಛಾಯಾಗ್ರಹಣ, ರಘು ಸಂಕಲನ ಚಿತ್ರಕ್ಕಿದೆ. ಮಿಮಿಕ್ರಿ ದಯಾನಂದ್ ಜೊತೆ ನಟಿ ಭಾಮ ಕಾಣಿಸಿಕೊಂಡಿದ್ದಾರೆ.