Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೆಂಚುರಿ ಸ್ಟಾರ್ ಶಿವಣ್ಣನ ಜೊತೆ ಮಿಥುನ್ ಚಕ್ರವರ್ತಿ
ಭಾರತೀಯ ಚಿತ್ರರಂಗದ ಅಗ್ರಗಣ್ಯ ನಟರಲ್ಲಿ ಒಬ್ಬರಾಗಿರುವ ಮಿಥುನ್ ಚಕ್ರವರ್ತಿ ಕನ್ನಡಕ್ಕೆ ಅಡಿಯಿಡಲಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಭಕ್ತಿಪ್ರಧಾನ ಚಿತ್ರ 'ಸಂತೆಯಲ್ಲಿ ನಿಂತ ಕಬೀರ' ಚಿತ್ರದಲ್ಲಿ ಅವರು ಗುರು ರಮಾನಂದರಾಗಿ ಕಾಣಿಸಲಿದ್ದಾರೆ.
ಇಂದ್ರಬಾಬು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದ್ದು, ಶಿವರಾಜ್ ಕುಮಾರ್ ಅವರ ವೃತ್ತಿಬದುಕಿನಲ್ಲಿ ಈ ಚಿತ್ರ ಹೊಸ ಮೈಲಿಗಲ್ಲಾಗಲಿದೆ. ಈ ಪಾತ್ರಕ್ಕೆ ಬಿಗ್ ಬಿ ಅಮಿತಾಬ್ ರನ್ನು ಕರೆತರಲು ಮುಂದಾಗಿದ್ದರು ನಿರ್ದೇಶಕರು. [ಸಂತನಾಗಿ 'ಸಂತೆಯಲ್ಲಿ ನಿಂತ ಕಬೀರ' ಶಿವಣ್ಣ]
ಆದರೆ ಈಗ ಮಿಥುನ್ ಚಕ್ರವರ್ತಿ ಅವರನ್ನು ಸಂಪರ್ಕಿಸಲಾಗಿದೆ. ಮಿಥುನ್ ಚಕ್ರವರ್ತಿ ಕಡೆಯಿಂದ ಗ್ರೀನ್ ಸಿಗ್ನಲ್ ಸಿಗುವುದೊಂದು ಬಾಕಿ ಇದೆ. ಸ್ವಾಮಿ ನಿತ್ಯಾನಂದರನ್ನು ಹೋಲುವ ಪಾತ್ರದಲ್ಲಿ ಓ ಮೈ ಗಾಡ್ ಚಿತ್ರದಲ್ಲಿ ಮಿಥುನ್ ಚಕ್ರವರ್ತಿ ಮಿಂಚಿದ್ದರು.
ಮಿಥುನ್ ಚಕ್ರವರ್ತಿ ಅವರ ಆ ಪಾತ್ರ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ. ಇದೀಗ ಅವರು ಸಂತ ಕಬೀರರ ಗುರುಗಳಾಗಿ ಸ್ಯಾಂಡಲ್ ವುಡ್ ಗೆ ಅಡಿಯಿಡುವ ದಿನಗಳು ದೂರವಿಲ್ಲ. ಇನ್ನು ಕಬೀರ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಕ್ಲೈಮ್ಯಾಕ್ಸ್ ಹಾಗೂ ಹಾಡುಗಳ ಚಿತ್ರೀಕರಣ ಎರಡನೇ ಹಂತದಲ್ಲಿ ಚಿತ್ರೀಕರಿಸಿಕೊಳ್ಳಲಾಗುತ್ತದೆ.
ಚಿತ್ರದ ಶೀರ್ಷಿಕೆ ಸೂಚಿಸುವ ಹಾಗೆ, ಇದು 'ಸಂತ ಕಬೀರ್ ದಾಸ್'ನ ಜೀವನ ಚರಿತ್ರೆ. ಭೀಷ್ಮ ಸಹಾನಿ ಅವರ 'ಕಬೀರ ಕಡಾ ಭಾಝಾರ್' ಕೃತಿಯನ್ನಾಧರಿಸಿ 'ಸಂತೆಯಲ್ಲಿ ನಿಂತ ಕಬೀರ' ಚಿತ್ರಕಥೆ ರಚಿಸಲಾಗಿದೆ.
ಕಬೀರ್ ದಾಸ್ ಆಗಿ ಶಿವಣ್ಣ ಕಾಣಿಸಿಕೊಳ್ಳುತ್ತಿದ್ದರೆ, ಅವರ ತಂದೆ ಪಾತ್ರದಲ್ಲಿ ಓಂ ಪುರಿ ಮತ್ತು ತಾಯಿಯಾಗಿ ಅಕ್ಷತಾ ರಾವ್ ಅಭಿನಯಿಸಲಿದ್ದಾರೆ. ಶಿವಣ್ಣನಿಗೆ ಜೋಡಿಯಾಗಿ ಮಲೆಯಾಳಂ ನಟಿ ಸನುಷ ಇದ್ದಾರೆ. ಕಾಲಿವುಡ್ ನಟ ಶರತ್ ಕುಮಾರ್, ಅವಿನಾಷ್, ಶರತ್ ಲೋಹಿತಾಶ್ವ, ದತ್ತಣ್ಣ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.
ಕಬೀರ್ ದಾಸ್ ಯಶೋಗಾಥೆಯನ್ನ ಕಲಾತ್ಮಕವಾಗಿ ಕಟ್ಟಿಕೊಡುವುದಕ್ಕೆ ರೆಡಿಯಾಗಿರುವುದು ಇಂದ್ರಬಾಬು, ಇದೀಗ ಹೆಸರು ಬದಲಾಯಿಸಿಕೊಂಡಿರುವ 'ಕಬ್ಬಡಿ' ಖ್ಯಾತಿಯ ನರೇಂದ್ರ ಬಾಬು. ಕುಮಾರಸ್ವಾಮಿ ಪತ್ತಿಕೊಂಡ 'ಸಂತೆಯಲ್ಲಿ ನಿಂತ ಕಬೀರ' ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. (ಏಜೆನ್ಸೀಸ್)