Don't Miss!
- Automobiles ನಿಮ್ಮ ಬಳಿ 7 ಲಕ್ಷ ರೂಪಾಯಿ ಇದ್ದರೆ ಸಾಕು.. ಕನಸಿನ ಕಾರನ್ನು ಮನೆ ತರಬಹುದು!
- Finance ತನ್ನ ಯುಪಿಐ ಬಳಕೆದಾರರನ್ನು ನಾಲ್ಕು ಬ್ಯಾಂಕ್ಗಳಿಗೆ ವರ್ಗಾಯಿಸುವ ಪ್ರಕ್ರಿಯೆ ಆರಂಭಿಸಿದ Paytm
- Sports ಟಿ20 ವಿಶ್ವಕಪ್ 2024: ಟೀಮ್ ಇಂಡಿಯಾಗೆ ದೊಡ್ಡ ಚಿಂತೆಯಾದ ಈ ಆರಂಭಿಕನ ಫಾರ್ಮ್
- Technology iPhone: ಐಫೋನ್ 16 ಸರಣಿಯ ಕ್ಯಾಮೆರಾ ಫೀಚರ್ಸ್ ಲೀಕ್! ಏನೆಲ್ಲಾ ವಿಶೇಷತೆ ಇವೆ?..
- News Tamarind Fruit Juice: ಬಾಯಾರಿಕೆ ನೀಗಿಸಲು ಹುಣಸೆ ಹಣ್ಣಿನ ಪಾನಕ ಪರಿಚಯಿಸಿದ ಆಯುಷ್ ಇಲಾಖೆ, ಮಾಡುವುದು ಹೇಗೆ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸರಳವಾಗಿ ಸೆಟ್ಟೇರಿದ ಶಿವಣ್ಣ ಮುಂದಿನ ಚಿತ್ರ 'ಘೋಸ್ಟ್'; ತಂಡ ಸೇರಿದ ಮಲಯಾಳಂ ಖ್ಯಾತ ನಟ
ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೊ ಶಿವ ರಾಜ್ ಕುಮಾರ್ 125 ಚಿತ್ರ ಪೂರೈಸುವ ಹೊಸ್ತಿಲಲ್ಲಿದ್ದಾರೆ. ನಿರ್ದೇಶಕ ಎ ಹರ್ಷ ಜೊತೆ ನಾಲ್ಕನೇ ಬಾರಿಗೆ ಕೈಜೋಡಿಸಿರುವ ಶಿವಣ್ಣ ಅಭಿನಯದ 'ವೇದಾ' ಸಿನಿ ವೃತ್ತಿ ಬದುಕಿನ 125ನೇ ಸಿನಿಮಾವಾಗಲಿದೆ.
'ಬೈರಾಗಿ' ಕೊನೆಯದಾಗಿ ತೆರೆಗಪ್ಪಳಿಸಿರುವ ಶಿವರಾಜ್ ಕುಮಾರ್ ಅಭಿನಯದ ಚಿತ್ರವಾಗಿದ್ದು, ವೇದಾ ಚಿತ್ರಕ್ಕೂ ಮುನ್ನ 'ನೀ ಸಿಗೋವರೆಗೂ' ಚಿತ್ರ ಶಿವಣ್ಣ ಅಭಿನಯದ 124ನೇ ಚಿತ್ರವಾಗಲಿದೆ. ಈ ಚಿತ್ರಗಳು ಮಾತ್ರವಲ್ಲದೆ ಶಿವರಾಜ್ ಕುಮಾರ್ ನಾಯಕನಾಗಿ ಅಭಿನಯಿಸಲಿರುವ ಸಾಲು ಸಾಲು ಚಿತ್ರಗಳು ತಯಾರಾಗುತ್ತಿದ್ದು, ಸದ್ಯ ಶಿವಣ್ಣನ ಕೈನಲ್ಲಿ ಸುಮಾರು ಏಳೆಂಟು ಸಿನಿಮಾಗಳಿವೆ.
ಈ ಪೈಕಿ ಬೀರಬಲ್ ಹಾಗೂ ಓಲ್ಡ್ ಮಾಂಕ್ ಚಿತ್ರಗಳ ಖ್ಯಾತಿಯ ಶ್ರೀನಿ ನಿರ್ದೇಶನದ 'ಘೋಸ್ಟ್' ಚಿತ್ರ ಕೂಡ ಒಂದು. ಇದು ಶಿವಣ್ಣ ಸಿನಿ ವೃತ್ತಿ ಬದುಕಿನ 127ನೇ ಚಿತ್ರವಾಗಲಿದ್ದು, ಸಾಲು ಸಾಲು ಹಿಟ್ ನೀಡಿರುವ ಶ್ರೀನಿ ನಿರ್ದೇಶನದ ಈ ಚಿತ್ರದ ಮೇಲೆ ಸಾಮಾನ್ಯವಾಗಿ ನಿರೀಕ್ಷೆ ಇದೆ. ನಿರ್ದೇಶಕ ಶ್ರೀನಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಚಿತ್ರದ ಕುರಿತು ಈಗಾಗಲೇ ಕೆಲವೊಂದಷ್ಟು ಪೋಸ್ಟ್ ಹಂಚಿಕೊಂಡಿದ್ದು, ಶಿವಣ್ಣ ಅಭಿಮಾನಿಗಳಲ್ಲಿ ಚಿತ್ರದ ಮೇಲೆ ನಿರೀಕ್ಷೆ ಇದೆ.
ಈ ಚಿತ್ರಕ್ಕೆ ಸಂದೇಶ್ ನಾಗರಾಜ್ ಬಂಡವಾಳ ಹೂಡುತ್ತಿದ್ದು, ಚಿತ್ರದ ಮುಹೂರ್ತ ಪೂಜೆ ಕಾರ್ಯಕ್ರಮ ವಿಜಯದಶಮಿಯ ವಿಶೇಷ ದಿನದಂದು ನೆರವೇರಿದೆ. ಹೀಗೆ ಸರಳವಾಗಿ ಜರುಗಿದ ಈ ಮುಹೂರ್ತ ಪೂಜೆಯ ಚಿತ್ರಗಳನ್ನು ನಿರ್ದೇಶಕ ಶ್ರೀನಿ ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದರ ಬೆನ್ನಲ್ಲೇ ಮಲಯಾಳಂನ ಖ್ಯಾತ ನಟ ಜಯರಾಮ್ ಘೋಸ್ಟ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಮಲಯಾಳಂ ಚಿತ್ರಗಳನ್ನು ಹೊರತುಪಡಿಸಿ ಈಗಾಗಲೇ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ಜಯರಾಂ ಘೋಸ್ಟ್ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಡಲಿದ್ದಾರೆ. ಈ ವಿಷಯವಾಗಿ ಶ್ರೀನಿ ಚಿಕ್ಕ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಜಯರಾಂ ಅವರಿಗೆ ಚಂದನವನಕ್ಕೆ ಸ್ವಾಗತವನ್ನು ಕೋರಿದ್ದಾರೆ.