Don't Miss!
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- News Weather Report: ಭೀಕರ ಬಿಸಿಲಿನ ನಡುವೆಯೂ ಏಪ್ರಿಲ್ 3ರವರೆಗೂ ಭಾರೀ ಮಳೆ ಮುನ್ಸೂಚನೆ, ಎಲ್ಲೆಲ್ಲಿ?
- Finance ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಯೋಜನೆ: ಬರಲಿವೆ 19 ಎತ್ತರದ ನಿಲ್ದಾಣಗಳು
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Automobiles Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒಂದೇ ಸಿನಿಮಾದಲ್ಲಿ ಕನ್ನಡದ 10ಕ್ಕೂ ಹೆಚ್ಚು ಹಾಸ್ಯ ನಟರು
ಒಂದು ಸಿನಿಮಾದಲ್ಲಿ ಒಬ್ಬರೊ.. ಇಬ್ಬರೊ ಅಥವಾ ಮೂರು ಕಾಮಿಡಿ ನಟರು ಇರಬಹುದೆನೋ. ಆದರೆ, ಈಗ ಒಂದು ಸಿನಿಮಾದ ತುಂಬ ಕಾಮಿಡಿ ನಟರೇ ತುಂಬಿಕೊಂಡಿದ್ದಾರೆ.
ಈ ಹಿಂದೆ 'ಗುರು ಶಿಷ್ಯರು' ಸಿನಿಮಾದಲ್ಲಿ ದ್ವಾರಕೀಶ್ ಸೇರಿದಂತೆ ಸಾಕಷ್ಟು ಹಾಸ್ಯ ಕಲಾವಿದರು ಕಾಣಿಸಿಕೊಂಡಿದ್ದರು. ಈಗ ಅದೇ ರೀತಿಯ ಪ್ರಯತ್ನ ನಡೆದಿದ್ದು, ಒಂದು ಸಿನಿಮಾದಲ್ಲಿ ಕನ್ನಡದ 10ಕ್ಕೂ ಹೆಚ್ಚು ಹಾಸ್ಯ ನಟರು ನಟಿಸಲಿದ್ದಾರೆ.
ಸಾವಿರ ಸಿನಿಮಾ ಮಾಡಿರುವ ಹೊನ್ನವಳ್ಳಿ ಕೃಷ್ಣಗೆ 'ವೀಕೆಂಡ್ ವಿತ್ ರಮೇಶ್'ನಲ್ಲಿ ಜಾಗ ಇಲ್ಲವೇ?
'ಕಾಪಿ ಕಟ್ಟೆ' ಎನ್ನುವ ಹೊಸ ಸಿನಿಮಾದಲ್ಲಿ ಕನ್ನಡದ ಬಹುತೇಕ ಹಾಸ್ಯ ಕಲಾವಿದರು ಮಿಂಚಲಿದ್ದಾರೆ. ಹೊನ್ನಾವಳಿ ಕೃಷ್ಣ, ಡಿಂಗ್ರಿ ನಾಗರಾಜ್. ಉಮೇಶ್, ಮಿಮಿಕ್ರಿ ದಯಾನಂದ್, ರೇಖಾ ದಾಸ್ ಟೆನ್ನಿಸ್ ಕೃಷ್ಣ, ಬಿರಾದರ್, ಬ್ಯಾಂಕ್ ಜನಾರ್ಧನ್, ರಾಜಗೋಪಾಲ್, ಶಂಕರ್ ಭಟ್, ಮೈಕಲ್ ಮಧು ಹೀಗೆ ಸಾಕಷ್ಟು ಕಲಾವಿದರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಒಬ್ಬ ಮನಷ್ಯನ ಬದುಕು ವಯಸ್ಸಾದ ಮೇಲೆ ಯಾವ ರೀತಿ ಬದಲಾಗುತ್ತದೆ. ಕುಟುಂಬದಲ್ಲಿ ಆಗುವ ವಿಷಯಗಳು ಹೇಗೆ ಇರುತ್ತದೆ ಎನ್ನುವುದರ ಮೇಲೆ ಸಿನಿಮಾದ ಕಥೆ ಇದೆಯಂತೆ. ಸಿನಿಮಾ ಕಥೆಗೆ ಇಷ್ಟೊಂದು ಕಲಾವಿದರ ಅಗತ್ಯ ಇತಂತ್ತೆ.
ಅಂದಹಾಗೆ, ಇಷ್ಟು ನಟರನ್ನು ಒಟ್ಟಿಗೆ ಸೇರಿಸುವ ಪ್ಲಾನ್ ಮಾಡಿರುವುದು ನಿರ್ದೇಶಕ ಕಪಿಲ್. 'ಗುರು ಶಿಷ್ಯರು' ಸಿನಿಮಾ ಬಂದು 38 ವರ್ಷಗಳಾಗಿದ್ದು, ಆ ಬಳಿಕ ಮತ್ತೆ ಈ ರೀತಿಯ ಪ್ರಯತ್ನ ನಡೆದಿದೆ.