Don't Miss!
- Finance ಅನಂತ್ ಅಂಬಾನಿ ರಾಧಿಕ ಮರ್ಚೆಂಟ್ ವಿವಾಹ ಪೂರ್ವ ಕಾರ್ಯಕ್ರಮಕ್ಕೆ ಖರ್ಚಾದ ಹಣ?
- News ಜನ ಸೇವಕನಾಗಿ ದುಡಿಯಲು ನನಗೊಂದು ಅವಕಾಶ ಕೊಡಿ: ವಿನೋದ್ ಅಸೂಟಿ
- Technology OnePlus: ಒನ್ಪ್ಲಸ್ 13 ಸ್ಮಾರ್ಟ್ಫೋನ್ ಡಿಸ್ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್?
- Automobiles ಭೂಮಿಯ ಸ್ವರ್ಗ: 1.50 ಕೋಟಿಯ ಟೊಯೊಟಾ ವೆಲ್ಫೈರ್ಗೆ ಮನಸೋತ ಖ್ಯಾತ ನಟ.. ಈ ಕಾರಿನಲ್ಲಿ ಏನಿದೆ?
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Lifestyle ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒಂದೇ ಸಿನಿಮಾದಲ್ಲಿ ಕನ್ನಡದ 10ಕ್ಕೂ ಹೆಚ್ಚು ಹಾಸ್ಯ ನಟರು
ಒಂದು ಸಿನಿಮಾದಲ್ಲಿ ಒಬ್ಬರೊ.. ಇಬ್ಬರೊ ಅಥವಾ ಮೂರು ಕಾಮಿಡಿ ನಟರು ಇರಬಹುದೆನೋ. ಆದರೆ, ಈಗ ಒಂದು ಸಿನಿಮಾದ ತುಂಬ ಕಾಮಿಡಿ ನಟರೇ ತುಂಬಿಕೊಂಡಿದ್ದಾರೆ.
ಈ ಹಿಂದೆ 'ಗುರು ಶಿಷ್ಯರು' ಸಿನಿಮಾದಲ್ಲಿ ದ್ವಾರಕೀಶ್ ಸೇರಿದಂತೆ ಸಾಕಷ್ಟು ಹಾಸ್ಯ ಕಲಾವಿದರು ಕಾಣಿಸಿಕೊಂಡಿದ್ದರು. ಈಗ ಅದೇ ರೀತಿಯ ಪ್ರಯತ್ನ ನಡೆದಿದ್ದು, ಒಂದು ಸಿನಿಮಾದಲ್ಲಿ ಕನ್ನಡದ 10ಕ್ಕೂ ಹೆಚ್ಚು ಹಾಸ್ಯ ನಟರು ನಟಿಸಲಿದ್ದಾರೆ.
ಸಾವಿರ ಸಿನಿಮಾ ಮಾಡಿರುವ ಹೊನ್ನವಳ್ಳಿ ಕೃಷ್ಣಗೆ 'ವೀಕೆಂಡ್ ವಿತ್ ರಮೇಶ್'ನಲ್ಲಿ ಜಾಗ ಇಲ್ಲವೇ?
'ಕಾಪಿ ಕಟ್ಟೆ' ಎನ್ನುವ ಹೊಸ ಸಿನಿಮಾದಲ್ಲಿ ಕನ್ನಡದ ಬಹುತೇಕ ಹಾಸ್ಯ ಕಲಾವಿದರು ಮಿಂಚಲಿದ್ದಾರೆ. ಹೊನ್ನಾವಳಿ ಕೃಷ್ಣ, ಡಿಂಗ್ರಿ ನಾಗರಾಜ್. ಉಮೇಶ್, ಮಿಮಿಕ್ರಿ ದಯಾನಂದ್, ರೇಖಾ ದಾಸ್ ಟೆನ್ನಿಸ್ ಕೃಷ್ಣ, ಬಿರಾದರ್, ಬ್ಯಾಂಕ್ ಜನಾರ್ಧನ್, ರಾಜಗೋಪಾಲ್, ಶಂಕರ್ ಭಟ್, ಮೈಕಲ್ ಮಧು ಹೀಗೆ ಸಾಕಷ್ಟು ಕಲಾವಿದರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಒಬ್ಬ ಮನಷ್ಯನ ಬದುಕು ವಯಸ್ಸಾದ ಮೇಲೆ ಯಾವ ರೀತಿ ಬದಲಾಗುತ್ತದೆ. ಕುಟುಂಬದಲ್ಲಿ ಆಗುವ ವಿಷಯಗಳು ಹೇಗೆ ಇರುತ್ತದೆ ಎನ್ನುವುದರ ಮೇಲೆ ಸಿನಿಮಾದ ಕಥೆ ಇದೆಯಂತೆ. ಸಿನಿಮಾ ಕಥೆಗೆ ಇಷ್ಟೊಂದು ಕಲಾವಿದರ ಅಗತ್ಯ ಇತಂತ್ತೆ.
ಅಂದಹಾಗೆ, ಇಷ್ಟು ನಟರನ್ನು ಒಟ್ಟಿಗೆ ಸೇರಿಸುವ ಪ್ಲಾನ್ ಮಾಡಿರುವುದು ನಿರ್ದೇಶಕ ಕಪಿಲ್. 'ಗುರು ಶಿಷ್ಯರು' ಸಿನಿಮಾ ಬಂದು 38 ವರ್ಷಗಳಾಗಿದ್ದು, ಆ ಬಳಿಕ ಮತ್ತೆ ಈ ರೀತಿಯ ಪ್ರಯತ್ನ ನಡೆದಿದೆ.