Don't Miss!
- Sports DC vs SRH: ಟ್ರಾವಿಸ್ ಹೆಡ್, ಅಭಿಷೇಕ್ ದಾಖಲೆಯ ಜೊತೆಯಾಟ: ಡೆಲ್ಲಿ ಗೆಲುವಿಗೆ ಬೃಹತ್ ಗುರಿ
- News ಕಲೆ ಮತ್ತು ಕಲೆಗಾರ! ಪ್ರಧಾನಿ ನರೇಂದ್ರ ಮೋದಿ ಕಾಲೆಳೆದ ಸಿಎಂ ಸಿದ್ದರಾಮಯ್ಯ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಗತಿಹಳ್ಳಿ ಸಿನಿಮಾ ಶಾಲೆ ವತಿಯಿಂದ 'ಚಲನಚಿತ್ರ ಕಥಾ ರಚನೆ ಕಾರ್ಯಗಾರ'
ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ರವರ ಸಿನಿಮಾ ಶಾಲೆ 'ಟೆಂಟ್ ಸಿನಿಮಾ' ವತಿಯಿಂದ 'ಚಲನಚಿತ್ರ ಕಥಾ ರಚನೆಯ ಕಾರ್ಯಗಾರ' ಹಮ್ಮಿಕೊಳ್ಳಲಾಗಿದೆ.
ನಾಗತಿಹಳ್ಳಿ ಸಿನಿಮಾ ಶಾಲೆ 'ಟೆಂಟ್ ಸಿನಿಮಾ' ಸ್ಟುಡಿಯೋ ವತಿಯಿಂದ ಜುಲೈ 22-26 ವರೆಗೆ ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ಉಳ್ಳವರಿಗಾಗಿ ಚಿತ್ರ ಕಥೆ ರಚನೆ, ಸಂಭಾಷಣೆ ಬರೆಯುವ ಬಗ್ಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಕಾರ್ಯಗಾರ 5 ದಿನಗಳ ಕಾಲ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ನಡೆಯಲಿದೆ.
ಚಲನಚಿತ್ರ ಕಥಾ ರಚನೆ ಕಾರ್ಯಾಗಾರದಲ್ಲಿ ಡಾ. ನಾಗತಿಹಳ್ಳಿ ಚಂದ್ರಶೇಖರ್, ಯೋಗರಾಜ್ ಭಟ್, 'ರಾಜಕುಮಾರ' ಚಿತ್ರ ನಿರ್ದೇಶಕ ಸಂತೋಷ್ ಆನಂದ್ ರಾಮ್, 'ಶುದ್ಧಿ' ಚಿತ್ರ ನಿರ್ದೇಶಕ ಆದರ್ಶ್ ಹೆಚ್ ಈಶ್ವರಪ್ಪ, 'ಸ್ಮೈಲ್ ಪ್ಲೀಸ್' ಚಿತ್ರ ನಿರ್ದೇಶಕ ರಘು ಸಮರ್ಥ್ ರವರು ಪಾಲ್ಗೊಳ್ಳಲಿದ್ದು, ಸಿನಿಮಾ ಚಿತ್ರಕಥೆ ರಚನೆ ಕುರಿತು ಸಮಗ್ರ ಮಾಹಿತಿ ನೀಡಲಿದ್ದಾರೆ.
ಮುಂದಿನ ದಿನಗಳಲ್ಲಿ ನಾಗತಿಹಳ್ಳಿ ಸಿನಿಮಾ ಶಾಲೆ ವತಿಯಿಂದಲೇ 'ಸಿನಿಮಾ ಸೃಷ್ಠಿಯ ಸಮಗ್ರ ತರಬೇತಿ ಕಾರ್ಯಾಗಾರ'ವನ್ನು ಆಗಸ್ಟ್ 10-15 ರವರೆಗೆ ಮತ್ತು 'ಸಿನಿಮಾ ವಿತರಣೆ, ಬಿಡುಗಡೆ ಮತ್ತು ಮಾರುಕಟ್ಟೆಯ ಸಮಗ್ರ ಮಾಹಿತಿ ಮಾರ್ಗದರ್ಶನ ಕಾರ್ಯಾಗಾರ'ವನ್ನು ಆಗಸ್ಟ್ 26-27 ನೇ ದಿನಾಂಕದಂದು ಹಮ್ಮಿಕೊಂಡಿರುವ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ಉಳ್ಳವರು ಕಾರ್ಯಾಗಾರಕ್ಕೆ ಹೋಗಿ ಚಿತ್ರ ಕಥೆ ರಚನೆ ಬಗ್ಗೆ ತರಬೇತಿ ಮತ್ತು ಮಾರ್ಗದರ್ಶನ ಪಡೆಯಲು ಈ ಕೆಳಗಿನ ವಿಳಾಸಕ್ಕೆ ಭೇಟಿ ಕೊಡಿ.
ವಿಳಾಸ: ಟೆಂಟ್ ಸಿನಿಮಾ, ನಾಗತಿಹಳ್ಳಿ ಸಿನಿಮಾ ಶಾಲೆ, ಬಿ.ಡಿ.ಎ ಕಾಂಪ್ಲೆಕ್ಸ್ ಹತ್ತಿರ, ಬನಶಂಕರಿ 2ನೇ ಹಂತ, ಬೆಂಗಳೂರು 560070
ದೂರವಾಣಿ ಸಂಪರ್ಕ: 080 6569 5500, +919900555255