'ಮುಕ್ತ ಮುಕ್ತ' ಧಾರಾವಾಹಿ ಖ್ಯಾತಿಯ ನಟ ಆನಂದ್ ವಿಧಿವಶ
ದೀರ್ಘಕಾಲದ ಆನಾರೋಗ್ಯದಿಂದ ಬಳಲುತ್ತಿದ್ದ ಕಿರುತೆರೆಯ ಖ್ಯಾತ ನಟ ಆನಂದ್ ವಿಧಿವಶರಾಗಿದ್ದಾರೆ. ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ಆನಂದ್ ನಿನ್ನೆ (ಮಾರ್ಚ್ 08) ಮಧ್ಯಾಹ್ನ 1.40ರ ಸುಮಾರಿಗೆ ಬೆಂಗಳೂರಿನ ರಂಗದೊರೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಆನಂದ್ ಅವರು ಪತ್ನಿ, ಮಗ ಮತ್ತು ಮಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ನಿನ್ನೆಯೇ ಚಾಮರಾಜಪೇಟೆಯ ಚಿತಾಗಾರದಲ್ಲಿ ನೆರವೇರಿಸಲಾಗಿದೆ. ನಟ ಆನಂದ್ ಟಿ.ಎನ್ ಸೀತಾರಾಮ್ ಅವರ ಮುಕ್ತ ಮುಕ್ತ ಧಾರಾವಾಹಿಯ ಎಸ್.ಪಿ. ವರ್ಣೇಕರ್ ಪಾತ್ರದಲ್ಲಿ ನಟಿಸಿದ್ದರು.
ಆನಂದ್ ಅವರ ಪತ್ನಿ ರಮಾದೇವಿ ಕೆಎಂಎಫ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಮಗ ವಿವೇಕ್ ಖಾಸಗಿ ಕಂಪನಿಯ ಉದ್ಯೋಗಿ ಮತ್ತು ಮಗಳು ಮಧುವಂತಿ ಮದುವೆಯಾಗಿದೆ.
Recommended Video

ಕಿರ್ಲೋಸ್ಕರ್ ಆನಂದ್ ಅಂತಾನೆ ಖ್ಯಾತಿಗಳಿಸಿದ್ದರು. ಮುಕ್ತ ಮುಕ್ತ ಧಾರಾವಾಹಿ ಆನಂದ್ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದು ಕೊಟ್ಟಿತ್ತು. ಕಿರುತೆರೆಯ ಜೊತೆಗೆ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ನಟನಾಗಿ ಮಿಂಚಿದ್ದಾರೆ.


Click it and Unblock the Notifications











