ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆಗೆ ಮಲ್ಟಿ ಸ್ಟಾರ್ ಗಳು ಬರ್ತಾರೆ.!
ಕನ್ನಡ ಚಿತ್ರರಂಗದ ಕಡೆಯಿಂದ 'ಲವ್ಲಿ ಸ್ಟಾರ್' ಪ್ರೇಮ್, 'ಫಸ್ಟ್ ರ್ಯಾಂಕ್ ರಾಜು' ಖ್ಯಾತಿಯ ಗುರುನಂದನ್, ನಟಿ ಸಂಜನಾ ಗಲ್ರಾನಿ, ನಟಿ ಐಶ್ವರ್ಯ ಭಟ್, 'ರಾಧಾ ಕಲ್ಯಾಣ' ಧಾರಾವಾಹಿ ಖ್ಯಾತಿಯ ಪ್ರವೀಣ್, 'ಮಾಸ್ಟರ್ ಪೀಸ್' ನಿರ್ದೇಶಕ ಮಂಜು ಮಾಂಡವ್ಯ, ನಿರ್ದೇಶಕ ರಘುರಾಮ್, ನಿರ್ದೇಶಕ ಗುರುಪ್ರಸಾದ್ ಹಾಗೂ ರಾಜಕೀಯ ವಲಯದಿಂದ ಆರ್.ಅಶೋಕ್, ಎಂ.ಕೃಷ್ಣಪ್ಪ, ಕೌನ್ಸಿಲರ್ ಲಿಲಿತಾ.ಟಿ.ನಾರಾಯಣ - ಹೀಗೆ ಹೇಳ್ತಾ ಹೋದರೆ ಪಟ್ಟಿ ಉದ್ದ ಬೆಳೆಯುತ್ತೆ.
ಅಷ್ಟಕ್ಕೂ ಈ ಎಲ್ಲರ ಹೆಸರುಗಳನ್ನ ನಾವು ಉಲ್ಲೇಖಿಸಲು ಕಾರಣ 'ದೀಪಶ್ರೀ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ'.

ಬೆಂಗಳೂರಿನ ಜೆ.ಪಿ.ನಗರ 8ನೇ ಹಂತ ಬಳಿಯ ಜಂಬುಸವಾರಿ ದಿಣ್ಣೆ ಮುಖ್ಯ ರಸ್ತೆಯಲ್ಲಿ 'ದೀಪಶ್ರೀ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ'ಯ ಹೊಸ ಶಾಖೆ ತೆರೆಯಲಿದೆ. ಅದರ ಉದ್ಘಾಟನೆ ಸಮಾರಂಭ ಇದೇ ಭಾನುವಾರ (ಜುಲೈ 10) ಬೆಳಗ್ಗೆ 9.30ಕ್ಕೆ ನಡೆಯಲಿದೆ.

ಉದ್ಘಾಟನೆ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕನ್ನಡ ಚಿತ್ರರಂಗದ ಕಲಾವಿದರು ಹಾಗೂ ರಾಜಕೀಯ ಗಣ್ಯರು ಆಗಮಿಸಲಿದ್ದಾರೆ. ಸಿದ್ಧಗಂಗಾ ಮಠದ ಶ್ರೀ.ಶ್ರೀ.ಶಿವಕುಮಾರ ಸ್ವಾಮೀಜಿ ಕೂಡ ಆಗಮಿಸುವ ನಿರೀಕ್ಷೆ ಇದೆ.

Physician, Diabetes, Obstetrics, Gynecology, Pediatrician, Orthopaedic, Urology, Neurology, ENT, Laparoscopy procedure, Skin & Cosmetology ಗೆ ಸಂಬಂಧ ಪಟ್ಟ ನುರಿತ ವೈದ್ಯರ ತಂಡ ಇಲ್ಲಿದೆ.
ಸದಾ ಬಿಜಿಯಲ್ಲಿ ಇರುವ ಕನ್ನಡ ಚಿತ್ರರಂಗದ ಕಲಾವಿದರು ಒಟ್ಟಾಗಿ ಸೇರುವುದು ಇಂತಹ ಸಮಾರಂಭಗಳಲ್ಲೇ...ಹೀಗಾಗಿ ಒಂದ್ ಸಣ್ಣ ಅಪ್ ಡೇಟ್, ನಿಮಗಾಗಿ...


Click it and Unblock the Notifications











