Don't Miss!
- News Lok Sabha Election 2024: ಬಿಜೆಪಿ ಬಿಗ್ ಶಾಕ್: ಕಮಲ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾದ ಕರಡಿ ಸಂಗಣ್ಣ
- Finance ಮಹೀಂದ್ರಾದಿಂದ ಹೊಸ ಬೊಲೆರೊ ನಿಯೋ + ಬಿಡುಗಡೆ, ಇದರ ಬೆಲೆ ಜಸ್ಟ್...
- Lifestyle ನಮ್ಮದೇ ಗ್ಯಾಲಕ್ಸಿಯಲ್ಲಿ ಬೃಹತ್ ಗಾತ್ರದ ಬ್ಲಾಕ್ ಹೋಲ್ ಪತ್ತೆ..! ಎಷ್ಟು ದೂರದಲ್ಲಿದೆ ಗೊತ್ತಾ?
- Technology Vivo: ಭಾರತದಲ್ಲಿ ವಿವೋ T3x 5G ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನು?, ಬೆಲೆ ಎಷ್ಟು?
- Automobiles ಬಡವರು ಈ ಬೈಕನ್ನು ಸುಲಭವಾಗಿ ಖರೀದಿಸಬಹುದು: EMI, ಆನ್ ರೋಡ್ ಬೆಲೆ ಎಷ್ಟು? ಇಂದೇ ಮನೆಗೆ ತನ್ನಿ
- Sports RCB: ಇದೇ ಆರ್ಸಿಬಿ ಸಮಸ್ಯೆ ಮೂಲ; ವಿದೇಶಿ ಕೋಚಿಂಗ್ ಸ್ಟಾಫ್ ವಿರುದ್ಧ ಸಿಡಿಮಿಡಿಗೊಂಡ ವೀರೇಂದ್ರ ಸೆಹ್ವಾಗ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುಗಿಯದ ಬಾಡಿಗೆ ಮನೆ ವಿವಾದ : ಯಶ್ ತಾಯಿ ವಿರುದ್ಧ ದೂರು ನೀಡಿದ ಮನೆ ಮಾಲಿಕ
ರಾಕಿಂಗ್ ಸ್ಟಾರ್ ಯಶ್ ಅವರ ಕತ್ರಿಗುಪ್ಪೆ ಬಾಡಿಗೆ ಮನೆ ವಿವಾದ ಮುಗಿಯಿತು ಎನ್ನುವಷ್ಟರಲ್ಲಿ ಮತ್ತೆ ವಿವಾದ ಶುರುವಾಗಿದೆ. ಹೈಕೋರ್ಟ್ ಆದೇಶದಂತೆ ಅದೃಷ್ಟದ ಮನೆಯನ್ನು ಯಶ್ ತೊರೆದು ಕೀ ಕೂಡ ವಾಪಸ್ ನೀಡಿದ್ದಾರೆ. ಆದರೆ, ಮನೆ ತೊರೆಯುವ ವೇಳೆಯಲ್ಲಿ ಮನೆ, ಮನೆಯಲ್ಲಿದ್ದ ವಸ್ತುಗಳಿಗೆ ಹಾನಿ ಮಾಡಿದ್ದಾರೆ ಎಂದು ಯಶ್ ಅವರ ತಾಯಿ ಪುಷ್ಪ ಹಾಗೂ ಕುಟುಂದ ಕೆಲವರ ವಿರುದ್ಧ ಪೊಲೀಸರಿಗೆ ಮನೆ ಮಾಲೀಕರು ದೂರು ನೀಡಿದ್ದಾರೆ.
ಯಶ್ ಬಾಡಿಗೆ ಮನೆ ಖಾಲಿ ಮಾಡುವಾಗ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಮನೆ ಮಾಲೀಕ ಡಾ ಮುನಿಪ್ರಸಾದ್ ಅವರು ನಷ್ಟ ಪರಿಹಾರ ಕೋರಿ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ
ನಂತರ ಈ ಕುರಿತಂತೆ ನ್ಯಾಯಾಲಯದಲ್ಲಿ ದಾವೆ ಹೂಡಲು ನಿರ್ಧರಿಸಲಾಗುವುದು ಎಂದು ಮುನಿಪ್ರಸಾದ್ ಪರ ವಕೀಲ ಎಂ ಟಿ ನಾಣಯ್ಯ ಹೇಳಿದ್ದಾರೆ. ಕೋರ್ಟ್ ಆದೇಶದಂತೆ ಯಶ್, ತಮ್ಮ ಪರ ವಕೀಲರ ಮೂಲಕ ಶುಕ್ರವಾರದಂದು ಬಾಡಿಗೆ ಮನೆಯ ಕೀ ಹಾಗೂ ಎರಡು ತಿಂಗಳು ಬಾಡಿಗೆ ಮೊತ್ತವನ್ನು ಡಿಡಿ ರೂಪದಲ್ಲಿ ನೀಡಿ ಮನೆ ಮಾಲೀಕರ ವಕೀಲರಿಗೆ ತಲುಪಿಸಿದ್ದರು.
ಮನೆ ಕೀ ಸಿಕ್ಕ ಬಳಿಕ ವಕೀಲರ ಜೊತೆ ಮನೆ ನೋಡಲು ಹೋಗಿದ್ದೆವು. ಮನೆಯಲ್ಲಿ ವಾರ್ಡ್ರೋಬ್ ಬಾಗಿಲು ಮುರಿದಿದೆ, ಕಮೋಡ್ ಚೂರಾಗಿದೆ, ಅಡುಗೆ ಮನೆಯನನ್ನು ಕಿತ್ತು ಹಾಕಲಾಗಿದೆ. ಡಿಸೈನರ್ ಲೈಟಿಂಗ್ಸ್, ಸ್ವಿಚ್ ಬೋರ್ಡ್ ಸೇರಿ ಅನೇಕ ವಸ್ತುಗಳಿಗೆ ಭಾಗಶಃ ಹಾಗೂ ಸಂಪೂರ್ಣ ಹಾಳಾಗಿದೆ. ಮನೆ ಖಾಲಿ ಮಾಡುವ ವೇಳೆ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಷ್ಟ ಪರಿಹಾರಕ್ಕಾಗಿ ಕೋರಿ ದೂರು ನೀಡಲು ನಿರ್ಧರಿಸಿದೆವು ಎಂದು ಮನೆ ಮಾಲಿಕ ಹೇಳಿದ್ದಾರೆ. ಈ ವಿವಾದ ಇನ್ನು ಎಲ್ಲಿಗೆ ಹೋಗಿ ಮುಟ್ಟುತ್ತೊ ಗೊತ್ತಿಲ್ಲ.