Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಂಗೀತ ದಿಗ್ಗಜರ ಕಾಳಗ: ಪ್ರತಿಷ್ಠೆಯೋ ಅಥವಾ ವ್ಯವಹಾರವೋ!
ಸಂಗೀತ ಲೋಕದ ಮಹಾನ್ ದಿಗ್ಗಜರೆಂದೇ ಖ್ಯಾತಿ ಗಳಿಸಿಕೊಂಡಿರುವ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಸಂಗೀತ ನಿರ್ದೇಶಕ ಇಳಯರಾಜ ನಡುವೆ ಮನಸ್ತಾಪ ಉಂಟಾಗಿದೆ. ಇದು ಪ್ರತಿಷ್ಠೆಗಾಗಿಯೋ ಅಥವಾ ವ್ಯವಹಾರಕ್ಕಾಗಿಯೋ ಗೊತ್ತಿಲ್ಲ. ಆದ್ರೆ, ಇವರಿಬ್ಬರ ಈ ಮುನಿಸು ಸಾಕಷ್ಟು ಕುತೂಹಲ ಹುಟ್ಟುಹಾಕಿದೆ.[ಸಾವಿರ ಚಿತ್ರಗಳ ಸರದಾರನಾದ ಇಳಯರಾಜ]
ಹೌದು, ಇನ್ಮುಂದೆ ಎಸ್.ಪಿ.ಬಾಲಸುಬ್ರಮಣ್ಯಂ ಅವರು ಯಾವುದೇ ಕಾರ್ಯಕ್ರಮಗಳಲ್ಲಿ, ಇಳಯರಾಜ ಅವರು ಕಂಪೋಸ್ ಮಾಡಿರುವ ಹಾಡಗಳನ್ನ ಹಾಡಕೂಡದಂತೆ. ಒಂದು ಪಕ್ಷ ಹಾಡಿದರೇ ಅದಕ್ಕೆ ದಂಡ ವಿಧಿಸಲಾಗುತ್ತಂತೆ. ಹೀಗಾಂತ ಬೇರೆ ಯಾರು ಹೇಳಿಲ್ಲ. ಸ್ವತಃ ಇಳಯರಾಜ ಅವರೇ ಕಾನೂನಾತ್ಮಕವಾಗಿ ನೋಟೀಸ್ ನೀಡಿದ್ದಾರೆ. ಮುಂದೆ ಓದಿ....
ಮೂರು ಜನರ ವಿರುದ್ಧ ನೋಟೀಸ್
ಎಸ್.ಪಿ.ಬಾಲಸುಬ್ರಮಣ್ಯಂ, ಎಸ್.ಪಿ.ಬಿ ಅವರ ಮಗ ಚರಣ್ ಮತ್ತು ಗಾಯಕಿ ಚಿತ್ರ ಅವರಿಗೆ ತಮ್ಮ ಹಾಡುಗಳನ್ನ ಹಾಡದಂತೆ ಇಳಯರಾಜ ಅವರು ನೋಟೀಸ್ ನೀಡಿದ್ದಾರೆ.[ಎಸ್.ಪಿ.ಬಿ ಮಾಡಿರುವ ದಾಖಲೆಗಳು ಅಬ್ಬಬ್ಬಾ.! ಒಂದಾ..ಎರಡಾ.!!?]
ಬೇಸರ ವ್ಯಕ್ತಪಡಿಸಿದ 'ಎಸ್.ಪಿ.ಬಿ'
ಇಳಯರಾಜ ಅವರ ನೋಟೀಸ್ ನಿಂದ 'ಎಸ್.ಪಿ. ಬಾಲಸುಬ್ರಮಣ್ಯಂ ಬೇಸರಗೊಂಡಿದ್ದಾರೆ. ಕಾರಣವಿಲ್ಲದೆ ನೋಟೀಸ್ ನೀಡಿರುವುದಕ್ಕೆ ಆಶ್ಚರ್ಯ ಕೂಡ ಆಗಿದ್ದಾರೆ. ಈ ಕುರಿತು ತಮ್ಮ 'ಫೇಸ್ ಬುಕ್' ಪೇಜ್ ನಲ್ಲಿ ತಮ್ಮ ಅಭಿಮಾನಿಗಳ ಜೊತೆ ದೀರ್ಘವಾಗಿ ಪ್ರಸ್ತಾಪಿಸಿದ್ದಾರೆ.[ಸಂಗೀತ ಕ್ಷೇತ್ರದ ದಿಗ್ಗಜನಿಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ರಿಂದ ಪಾದಪೂಜೆ]
ಇಬ್ಬರು ಉತ್ತಮ ಸ್ನೇಹಿತರು!
ಅಂದ್ಹಾಗೆ, ಗಾಯಕ ಎಸ್.ಪಿ.ಬಿ ಮತ್ತು ಸಂಗೀತ ನಿರ್ದೇಶಕ ಇಳಯರಾಜ ಉತ್ತಮ ಸ್ನೇಹಿತರು. ಇಳಯರಾಜ ಕಂಪೋಸ್ ಮಾಡಿರುವ ಅದೇಷ್ಟೋ ಹಾಡುಗಳನ್ನ ಎಸ್.ಪಿ.ಬಿ ಹಾಡಿದ್ದಾರೆ. ಜೊತೆ ಜೊತೆಯಲ್ಲೇ ವೃತ್ತಿ ಬದುಕು ಸಾಗಿಸಿದ್ದಾರೆ.[ಇಳಯರಾಜ ಲಂಡನ್ ಸಂಗೀತ ಮಾಹಿತಿ ಲೀಕ್]
ಕಾರಣವೇನು ಎಂಬುದು ನಿಗೂಢ?
ಧಿಡೀರ್ ಅಂತಾ ಇಳಯರಾಜ ಅವರು ಈ ರೀತಿಯಾದ ನಿರ್ಧಾರ ತೆಗೆದುಕೊಳ್ಳುವುದರ ಹಿಂದಿರುವ ಕಾರಣ ಏನೂ ಎಂಬುದು ಗೊತ್ತಿಲ್ಲ. ಆದ್ರೆ, ಈ ಬೆಳವಣಿಗೆಯನ್ನ ಗಮನಿಸಿದರೇ, ಇವರಿಬ್ಬರ ಮಧ್ಯೆ ಪ್ರತಿಷ್ಠೆಯೋ ಅಥವಾ ವ್ಯವಹಾರದ ವಿಷ್ಯದಲ್ಲೋ ಭಿನ್ನಾಭಿಪ್ರಾಯ ಉಂಟಾಗಿರಬಹುದು ಎಂಬುದನ್ನ ಮಾತ್ರ ಊಹಿಸಿಬಹುದು.
'ಎಸ್.ಪಿ.ಬಿ@50' ಹೆಸರಿನಲ್ಲಿ ವರ್ಲ್ಡ್ ಟೂರ್!
ಸದ್ಯ, ಬಾಲಸುಬ್ರಮಣ್ಯಂ ಮತ್ತು ತಂಡ ''ಎಸ್.ಪಿ.ಬಿ-50'' ಎಂಬ ಹೆಸರಿನಲ್ಲಿ ವರ್ಲ್ಡ್ ಟೂರ್ ಆಯೋಜಿಸಿದೆ. ಇಲ್ಲಿಯವರೆಗೂ ರಷ್ಯಾ, ಲಂಕಾ, ಮಲೇಶಿಯಾ, ಸಿಂಗಾಪುರ್ ಮತ್ತು ದುಬೈ ಗಳಲ್ಲಿ ಸಂಗೀತ ಪ್ರದರ್ಶನ ನೀಡಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲೂ ಇಳಯ ರಾಜ ಕಂಪೋಸ್ ಮಾಡಿರುವ ಹಾಡುಗಳನ್ನ ಹಾಡಿದ್ದರು.
ಮುಂದೆ ಏನು?
ಇಳಯರಾಜ ಅವರ ನೋಟೀಸ್ ಗೆ ಗೌರವ ನೀಡುವುದಾಗಿ ತಿಳಿಸಿರುವ ಎಸ್.ಪಿ.ಬಿ, ತಾವು ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ರದ್ದುಗೊಳಿಸುವುದಿಲ್ಲ, ನಮ್ಮ ಸಂಗೀತ ಪಯಣ ಮುಂದುವರಿಯುತ್ತದೆ. ಬೇರೆ ಸಂಗೀತ ನಿರ್ದೇಶಕರ ಗೀತೆಗಳನ್ನು ಹಾಡಿ, ಕಾರ್ಯಕ್ರಮ ಮುಂದುವರೆಸಲು ಎಸ್.ಪಿ.ಬಿ ನಿರ್ಧರಿಸಿದ್ದಾರಂತೆ.