ದರ್ಶನ್ 'ಮದಕರಿ' ಸೇನೆಗೆ ಸಿಕ್ಕಿತು ನಾದಬ್ರಹ್ಮನ ಬಲ
Recommended Video

ನಟ ದರ್ಶನ್ ಅವರ 'ಗಂಡುಗಲಿ ಮದಕರಿ ನಾಯಕ' ಚಿತ್ರತಂಡಕ್ಕೆ ಈಗ ನಾದಬ್ರಹ್ಮ ಹಂಸಲೇಖ ಅವರ ಆಗಮನವಾಗಿದೆ. ಹಂಸಲೇಖ ಅವರಿಂದ ಸಿನಿಮಾಗೆ ದೊಡ್ಡ ಶಕ್ತಿ ಬಂದಂತೆ ಆಗಿದೆ.
'ಗಂಡುಗಲಿ ಮದಕರಿ ನಾಯಕ' ಚಿತ್ರದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಗೂ ದೊಡ್ಡಣ್ಣ ಅವರು ಚಿತ್ರತಂಡಕ್ಕೆ ಹಂಸಲೇಖ ಅವರನ್ನು ಬರ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಫೇಸ್ ಬುಕ್ ನಲ್ಲಿ ತಮ್ಮ ಸಂತಸ ಹಂಚಿಕೊಂಡಿರುವ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಭಾರತ ಚಿತ್ರರಂಗ ಕಂಡ ಪ್ರತಿಭಾವಂತ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ನಮ್ಮ ತಂಡಕ್ಕೆ ಸ್ವಾಗತ ಎಂದಿದ್ದಾರೆ.

'ಗಂಡುಗಲಿ ಮದಕರಿ ನಾಯಕ' ಒಂದು ಐತಿಹಾಸಿಕ ಸಿನಿಮಾವಾಗಿದ್ದು, ಹಂಸಲೇಖ ಚಿತ್ರಕ್ಕೆ ಒಳ್ಳೆಯ ಆಯ್ಕೆ. ಅವರ ಅನುಭವ ಸಿನಿಮಾಗೆ ಬಲ ನೀಡುತ್ತದೆ. ಅಲ್ಲದೆ, ಇತ್ತೀಚಿಗೆ ಹಂಸಲೇಖ ಯಾವುದೇ ಸಿನಿಮಾಗೆ ಸಂಗೀತ ನೀಡಿಲ್ಲ. ಇದು ಅವರ ಕಮ್ ಬ್ಯಾಕ್ ಸಿನಿಮಾ ಆಗಬಹುದು.
ತಮ್ಮ ವೃತ್ತಿ ಜೀವನದಲ್ಲಿ ಸಾವಿರಾರು ಮರೆಯದ ಹಾಡು ನೀಡಿರುವ ಹಂಸಲೇಖ ಅವರು ಮತ್ತೆ ಒಂದು ದೊಡ್ಡ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ.


Click it and Unblock the Notifications











