Don't Miss!
- News Karnataka rain: ಗುಡುಗು, ಸಿಡಿಲು ಬಡಿತದಿಂದ ರಕ್ಷಣೆ ಪಡೆಯಲು ಏನೇನು ಮಾಡಬೇಕು? ಸಲಹೆಗಳು ಇಲ್ಲಿವೆ
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಲಿಕೆ ಹಿಡಿದು ರಸ್ತೆ ರಿಪೇರಿ ಮಾಡಿದ ನಾದಬ್ರಹ್ಮ ಹಂಸಲೇಖ
ಹಾರ್ಮೋನಿಯಂ, ಕೀಬೋರ್ಡ್ ಹಿಡಿದು ನಾದಲೋಕ ಸೃಷ್ಟಿಸುವ ನಾದಬ್ರಹ್ಮ ಹಂಸಲೇಖ ಇಂದು ಸಲಿಕೆ-ಗುದ್ದಲಿ ಹಿಡಿದು ರಸ್ತೆ ಇಳಿದಿದ್ದರು.
Recommended Video
ಹೌದು, ಚಂದನವನದ ಸಂಗೀತ ಸಾಮ್ರಾಟ ಹಂಸಲೇಖ ಅವರು ಸಲಿಕೆ ಹಿಡಿದು ತಮ್ಮ ಮನೆ ಎದುರಿನ ರಸ್ತೆಯನ್ನು ರಿಪೇರಿ ಮಾಡಿದ್ದಾರೆ.
ಕೊರೊನಾ ಲಾಕ್ಡೌನ್ನಿಂದಾಗಿ ಸೆಲೆಬ್ರಿಟಿಗಳೆಲ್ಲಾ ಅಡುಗೆ ಮಾಡುವ, ವರ್ಕ್ಔಟ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದರೆ, ಹಂಸಲೇಖ ಏರಿಯಾದ ರಸ್ತೆ ಸರಿಮಾಡುವ ಕಾರ್ಯ ಮಾಡಿದ್ದಾರೆ.
ರಸ್ತೆ ಗುಂಡಿ ಮುಚ್ಚಿದ ಹಂಸಲೇಖ
ಮಹಾಲಕ್ಷ್ಮಿ ಲೇಔಟ್ನ ಹಂಸಲೇಖ ಮನೆಯಿರುವ ರಸ್ತೆ ಗುಂಡಿಗಳಾಗಿ ಹಾಳಾಗಿತ್ತು, ಅದನ್ನು ರಿಪೇರಿ ಮಾಡಲೆಂದು ಬಿಬಿಎಂಪಿ ಅವರು ಜಲ್ಲಿಕಲ್ಲು ತಂದು ಸುರುಹಿದ್ದರು. ಆದರೆ ಕೆಲಸ ಆರಂಭವಾಗಿರಲಿಲ್ಲ.
ತಾವೇ ರಸ್ತೆಗಿಳಿದ ಹಂಸಲೇಖ
ಅದಕ್ಕೆಂದು ಇಂದು ತಾವೇ ರಸ್ತೆಗೆ ಇಳಿದ ಹಂಸಲೇಖ, ಸಲಿಕೆಯಲ್ಲಿ ಜಲ್ಲಿಕಲ್ಲು ತುಂಬಿ ರಸ್ತೆಗೆ ಹಾಕಿ ಗುಂಡಿ ಮುಚ್ಚಿ, ಅದನ್ನು ಕಾಂಕ್ರಿಟ್ ಸ್ಪ್ರೇ ಮಾಡಿ ರಸ್ತೆ ರಿಪೇರಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ವಿಡಿಯೋ
ಹಂಸಲೇಖ ಅವರು ರಸ್ತೆ ರಿಪೇರಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ''ಹಳ್ಳಿಯಾದರೇನು ಶಿವ ದಿಲ್ಲಿಯಾದರೇನು ಶಿವ'' ಎಂದು ಉತ್ಸಾಹದಿಂದ ಹಂಸಲೇಖ ಕೆಲಸ ಮಾಡುತ್ತಿರುವ ವಿಡಿಯೋ ಯುವಕರನ್ನೂ ನಾಚಿಸುವಂತಿದೆ.
ಬಾಯ್ ಬಾಯ್ ಕೊರೊನಾ ಹಾಡು
ಹಂಸಲೇಖ ಅವರು ಇತ್ತೀಚೆಗಷ್ಟೆ ಕೊರೊನಾ ಕುರಿತ ಹಾಡೊಂದನ್ನು ಸಹ ರಚಿಸಿದ್ದರು. ಅದನ್ನು ಅವರ ಮನೆಯವರೆಲ್ಲಾ ಸೇರಿ ಹಾಡಿದ್ದರು. 'ಬಾಯ್ ಬಾಯ್ ಕೊರೊನಾ' ಎನ್ನುವ ಹಾಡು ಜನಪ್ರಿಯವಾಗಿತ್ತು.