Don't Miss!
- News ಮತ್ತೆ ಸದ್ದು ಮಾಡಿದ ಕೈ ಗ್ಯಾರಂಟಿ ಕಾರ್ಡ್; ಚುನಾವಣಾ ಆಯೋಗಕ್ಕೆ ದೂರ ಕೊಟ್ಟ ಜೆಡಿಎಸ್ ನಿಯೋಗ
- Finance ಟೆಸ್ಲಾ ಫುಲ್ ಸೆಲ್ಫ್ ಡ್ರೈವಿಂಗ್ ಸಿಸ್ಟಮ್ ಕಾರುಗಳ ಬೆಲೆಯನ್ನು ಇಳಿಕೆ ಮಾಡಿದ ಎಲೋನ್ ಮಸ್ಕ್
- Lifestyle ಮನೆಯಲ್ಲಿ ಘಮ ಘಮಿಸುವ ಮಲ್ಲಿಗೆ ಗಿಡ ಬೆಳೆಸೋದು ಹೇಗೆ..? ಇಲ್ಲಿದೆ ಮಾಹಿತಿ
- Technology ಇಂದು ಮೊಟೊ G64 5G ಫೋನ್ ಫಸ್ಟ್ ಸೇಲ್!..ಈ ಫೋನಿನ ಪ್ಲಸ್ ಪಾಯಿಂಟ್ ಏನು?
- Sports RR vs MI: 17 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಈ ದಾಖಲೆ ನಿರ್ಮಿಸಿದ ಮೊದಲಿಗ ಯುಜ್ವೇಂದ್ರ ಚಹಾಲ್!
- Automobiles ಹ್ಯುಂಡೈ ವೆರ್ನಾ ಕಾರಿಗೆ ಭಾರೀ ಡಿಸ್ಕೌಂಟ್: ರಾಶಿ ಫೀಚರ್ನ ಕಾರಿಗೆ ಇಷ್ಟು ಆಫರ್ ಯಾಕೆಂದ ನೆಟ್ಟಿಗರು!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲಂಡನ್ನಲ್ಲಿರುವ ಮಗಳನ್ನು ಕರೆತರುವ ವ್ಯವಸ್ಥೆ ಮಾಡಿ: ಜಯಮಾಲಾ ಮನವಿ
ಕೊರೊನಾ ಭೀತಿಯಿಂದ ವಿದೇಶದಲ್ಲಿ ಸಿಲುಕಿರುವ ಭಾರತೀಯರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಅದರಲ್ಲಿಯೂ ಇಟಲಿ, ಚೀನಾ, ಅಮೆರಿಕೆ, ದುಬೈಗಳಲ್ಲಿನ ಭಾರತೀಯರು ಜೀವ ಕೈಯಲ್ಲಿ ಹಿಡಿದುಕೊಂಡು ಸ್ವದೇಶಕ್ಕೆ ಯಾವಾಗ ಹೋದೇವೋ ಎಂದು ಕಾಯುತ್ತಿದ್ದಾರೆ.
ಹಲವು ಸೆಲೆಬ್ರಿಟಿಗಳು, ಅವರ ಮಕ್ಕಳೂ ಸಹ ವಿದೇಶದಲ್ಲಿ ಸಿಲುಕಿಕೊಂಡಿದ್ದಾರೆ. ನಿನ್ನೆಯಷ್ಟೆ ಸಚಿವ ಆನಂದ್ ಸಿಂಗ್ ಅವರು ತಮ್ಮ ಪುತ್ರಿ ಇಟಲಿಯಲ್ಲಿ ಸಿಲುಕಿದ್ದಾಳೆಂದು ಹೇಳಿ ಸದನದಲ್ಲಿ ಆತಂಕ ವ್ಯಕ್ತಪಡಿಸಿದ್ದರು. ಇಂದು ನಟಿ, ಮಾಜಿ ಸಚಿವೆ ಜಯಮಾಲಾ ಅವರು ತಮ್ಮ ಪುತ್ರಿಯ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿದ್ದಾರೆ.
'ನನ್ನ ಮಗಳು ಲಂಡನ್ನಲ್ಲಿ ಸಿಲುಕಿಕೊಂಡಿದ್ದಾಳೆ, ಅವಳನ್ನು ಭಾರತಕ್ಕೆ ಕರೆ ತರಲು ಸಹಾಯ ಮಾಡಿರಿ' ಎಂದು ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದಾರೆ ಮಾಜಿ ಸಚಿವೆ ಜಯಮಾಲಾ.
ಪರಿಷತ್ನಲ್ಲಿ ಇಂದು ಮಾತನಾಡಿದ ಜಯಮಾಲಾ, 'ನನ್ನ ಮಗಳು ಲಂಡನ್ನಲ್ಲಿ ಇದ್ದಾಳೆ. ಅಲ್ಲಿಂದ ಭಾರತಕ್ಕೆ ಬರಲು ವಿಮಾನಗಳಿಲ್ಲ. ಆಕೆಯ ಜೊತೆ ಇನ್ನೂ ಹಲವರು ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಅವರನ್ನು ಭಾರತಕ್ಕೆ ಕರೆ ತರುವ ವ್ಯವಸ್ಥೆ ಆಗಬೇಕಿದೆ' ಎಂದು ಜಯಮಾಲಾ ಹೇಳಿದ್ದಾರೆ.
ಕೊರೊನಾ ಭೀತಿ ದಿನೇ-ದಿನೇ ಹೆಚ್ಚಾಗುತ್ತಲೇ ಇದೆ. ರಾಜ್ಯದಲ್ಲಿ ಈವರೆಗೆ 14 ಮಂದಿಗೆ ಸೋಂಕಿರುವುದು ಪತ್ತೆಯಾಗಿದೆ. ವಿದೇಶದಲ್ಲಿ ಸಿಲುಕಿರುವ ಹಲವು ಭಾರತೀಯರು ಸ್ವದೇಶಕ್ಕೆ ಮರಳಲಾಗದೆ ಒದ್ದಾಡುತ್ತಿದ್ದಾರೆ.